Asianet Suvarna News Asianet Suvarna News

ನೀರೊಳಗೆ ರಾಷ್ಟ್ರಧ್ವಜ ಹಾರಿಸಿದ ಭಾರತೀಯ ಕೋಸ್ಟ್‌ಗಾರ್ಡ್ ತಂಡ: video viral

ಸ್ವಾತಂತ್ರ ದಿನಾಚರಣೆಗೆ ಕೇವಲ ಹದಿನೈದು ದಿನಗಳಷ್ಟೇ ಬಾಕಿ ಉಳಿದಿದ್ದು, ಭಾರತೀಯ ಸರ್ಕಾರ ಸೇನೆ ಹಾಗೂ ವಿವಿಧ ಸಂಘಟನೆ ಸಂಘ ಸಂಸ್ಥೆಗಳು ಸಂಭ್ರಮದ ಸ್ವಾತಂತ್ರ ದಿನಾಚರಣೆ ನಡೆಸಲು ಬರದ ಸಿದ್ಧತೆ ನಡೆಸುತ್ತಿದ್ದಾರೆ.

As part of 75th years of Indias independence celebration Indian Coast Guard performed an underwater flag demo akb
Author
Bangalore, First Published Jul 31, 2022, 4:52 PM IST

ನವದೆಹಲಿ: ಈ ವರ್ಷ ದೇಶ 75ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದು, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವಕ್ಕೆ ಬರದ ಸಿದ್ಧತೆ ನಡೆದಿದೆ. ಸ್ವಾತಂತ್ರ ದಿನಾಚರಣೆಗೆ ಕೇವಲ ಹದಿನೈದು ದಿನಗಳಷ್ಟೇ ಬಾಕಿ ಉಳಿದಿದ್ದು, ಭಾರತೀಯ ಸರ್ಕಾರ ಸೇನೆ ಹಾಗೂ ವಿವಿಧ ಸಂಘಟನೆ ಸಂಘ ಸಂಸ್ಥೆಗಳು ಸಂಭ್ರಮದ ಸ್ವಾತಂತ್ರ ದಿನಾಚರಣೆ ನಡೆಸಲು ಬರದ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ ಭಾರತೀಯ ಕೋಸ್ಟ್‌ ಗಾರ್ಡ್ ನೀರೊಳಗೆ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮಕ್ಕೆ ತಾಲೀಮು ನಡೆಸುತ್ತಿದ್ದು, ರಾಷ್ಟ್ರಧ್ವಜವನ್ನು ನೀರೊಳಗೆ ಹಾರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. 

ನೀರೊಳಗಿನ ಧ್ವಜವನ್ನು ಹಾರಿಸಿದ ವೀಡಿಯೊವನ್ನು ಹಂಚಿಕೊಳ್ಳುವಾಗ, ಭಾರತೀಯ ಕೋಸ್ಟ್ ಗಾರ್ಡ್ ತನ್ನ ಟ್ವಿಟ್ಟರ್ ಖಾತೆಯಲ್ಲಿ, 'ಹರ ಘರ ತಿರಂಗಾ' #HarGharTiranga ‘ಆಜಾದಿ ಕಾ ಅಮೃತ ಮಹೋತ್ಸವ. ಭಾರತದ ಸ್ವಾತಂತ್ರ್ಯ ಆಚರಣೆಯ 75 ನೇ ವರ್ಷದ ಭಾಗವಾಗಿ, @IndiaCoastGuard ಸಮುದ್ರದಲ್ಲಿ ನೀರೊಳಗಿನ ಧ್ವಜ ಹಾರಿಸುವ ಡೆಮೊವನ್ನು ಪ್ರದರ್ಶಿಸಿತು. ಈ ಕಾರ್ಯವು ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರಚೋದಿಸುತ್ತದೆ ಎಂದು ಬರೆದುಕೊಂಡಿದೆ.

ಭಾರತೀಯ ಕೋಸ್ಟ್ ಗಾರ್ಡ್ 'ಹರ್ ಘರ್ ತಿರಂಗ' ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮವನ್ನು ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 22, 2022 ರಂದು ಈ ಅಭಿಯಾನವನ್ನು ಪ್ರಾರಂಭಿಸಿದ್ದರು. 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸಲು ನಾಗರಿಕರು ದೇಶದ ನಾಗರಿಕರು ತಮ್ಮ ಮನೆಗಳು ಮತ್ತು ವ್ಯವಹಾರ ಸ್ಥಳಗಳಲ್ಲಿ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲು  ಪ್ರಧಾನಿ ಈ ಮೂಲಕ ಪ್ರೇರೇಪಿಸಿದ್ದಾರೆ. 

India@75 ಅಮೃತ ಮಹೋತ್ಸವದ ಸಂಭ್ರಮ, ಏಷ್ಯಾನೆಟ್ -ಎನ್‌ಸಿಸಿ ಜಂಟಿಯಾಗಿ ವಜ್ರ ಜಯಂತಿ ಯಾತ್ರೆಗೆ ಚಾಲನೆ!

2021ರಲ್ಲಿ ಭಾರತ ಸರ್ಕಾರವು 'ಫ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002'ಕ್ಕೆ ತಿದ್ದುಪಡಿ ಮಾಡಿತು. ಇದರ ಪ್ರಕಾರ ಈಗ ಸಿಂಥೆಟಿಕ್ ಬಟ್ಟೆಯಿಂದ ಮಾಡಿದ ಮತ್ತು ಯಂತ್ರದಿಂದ ತಯಾರಿಸಿದ ಧ್ವಜಗಳನ್ನು ಖರೀದಿಸಲು ಮತ್ತು ತಯಾರಿಸಲು ಜನರಿಗೆ ಅವಕಾಶ ಮಾಡಿಕೊಡುತ್ತದೆ. ಈ ಹಿಂದಿನ, ಧ್ವಜ ಸಂಹಿತೆಯ ಪ್ರಕಾರ ತ್ರಿವರ್ಣ ಧ್ವಜವನ್ನು ಕೈಯಿಂದ ನೂಲುವ ಬಟ್ಟೆಯಾದ ಖಾದಿಯಿಂದ ಮಾತ್ರ ತಯಾರಿಸಲು ಅವಕಾಶವಿತ್ತು. ಇದಲ್ಲದೇ ಈಗ ಜನರು ದಿನವಿಡೀ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿ ನೀಡಲಾಗಿದೆ. ಹಿಂದೆ, ಧ್ವಜವನ್ನು ತೆರೆದ ಸ್ಥಳದಲ್ಲಿ ಹಾರಿಸಲು ಸಮಯ ಮಿತಿ ಇತ್ತು. ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರ ಧ್ವಜಾರೋಹಣಕ್ಕೆ ಅವಕಾಶವಿತ್ತು.

ಅಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಿಂದ ಹಿಂದೆ ಸರಿದ ಪಶ್ಚಿಮ ಬಂಗಾಳ

Follow Us:
Download App:
  • android
  • ios