ಮತದಾನದ ಅಂಕಿ ಅಂಶ ಪ್ರಕಟಿಸದ ಆಯೋಗ: ಕೇಜ್ರಿವಾಲ್ ಕಿಡಿ!
ಮತದಾನದ ಅಂತಿಮ ಅಂಕಿ ಅಂಶ ಪ್ರಕಟಿಸದ ಆಯೋಗ| ಚುನಾವಣಾ ಆಯೋಗದ ನಡೆಗೆ ಕೇಜ್ರಿವಾಲ್ ಕಿಡಿ| ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ಶೇಕಡಾವಾರು ಅಂಕಿ ಅಂಶ| ಒಂದು ದಿನ ಕಳೆದರೂ ಅಂತಿಮ ಮಾಹಿತಿ ನೀಡದ ಚುನಾವಣಾ ಆಯೋಗ| ಚುನಾವಣಾ ಆಯೋಗದ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದ ಕೇಜ್ರಿ|
ನವದೆಹಲಿ(ಫೆ.09): ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ಶೇಕಡಾವಾರು ಅಂಕಿ ಅಂಶವನ್ನು ಪ್ರಕಟಿಸದ ಚುನಾವಣಾ ಆಯೋಗದ ನಡೆಯನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.
ಮತದಾನದ ಶೇಕಡಾವಾರು ಮತದಾನದ ಅಂಕಿ-ಅಂಶ ಪ್ರಕಟಿಸಲು ವಿಳಂಬ ಮಾಡುತ್ತಿರುವ ಆಯೋಗದ ಕ್ರಮಕ್ಕೆ ಅರವಿಂದ್ ಕೇಜ್ರಿವಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತದಾನ ಪ್ರಕ್ರಿಯೆ ಮುಕ್ತಾಯಗೊಂಡು ಒಂದು ದಿನವೇ ಕಳೆದಿದ್ದರೂ ಚುನಾವಣಾ ಆಯೋಗ ಏಕೆ ಶೇಕಡಾವಾರು ಮತದಾನದ ಅಂಕಿ-ಅಂಶ ಪ್ರಕಟಿಸುತ್ತಿಲ್ಲ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಮುಗಿದ ದೆಹಲಿ ದಂಗಲ್: ರಾಜಧಾನಿ ಈಗ ಸಮೀಕ್ಷೆಗಳ ಜಂಗಲ್!
ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, ಶೇಕಡಾವಾರು ಮತದಾನದ ಅಂಕಿ ಅಂಶ ಪ್ರಕಟಿಸದಿರುವ ಚುನಾವಣಾ ಆಯೋಗದ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹರಿಹಾಯ್ದಿದ್ದಾರೆ.
ನಿನ್ನೆ(ಶನಿವಾರ)ಚುನಾವಣಾ ಆಯೋಗ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ ದೆಹಲಿಯಲ್ಲಿ ಶೇ.61.46 ರಷ್ಟು ಮತದಾನ ನಡೆದಿತ್ತು. ಆದರೆ ಅಂತಿಮ ಅಂಕಿ ಅಂಶಗಳನ್ನು ಆಯೋಗ ಇದುವರೆಗೂ ಪ್ರಕಟಿಸಿಲ್ಲ.