Asianet Suvarna News Asianet Suvarna News

ನಟ, ಶಾಸಕ ಬಾಲ​ಕೃಷ್ಣರಿಂದ ಛಾಯಾ​ಗ್ರಾ​ಹ​ಕಗೆ ಕಪಾ​ಳ​ಮೋ​ಕ್ಷ!

ಟಾಲಿ​ವುಡ್‌ ಸಿನಿಮಾ ರಂಗದ ನಟ ಹಾಗೂ ಹಿಂದೂ​ಪುರ ಶಾಸಕ ನಂದ​ಮೂರಿ ಬಾಲ​ಕೃಷ್ಣ| ನಟ, ಶಾಸಕ ಬಾಲ​ಕೃಷ್ಣರಿಂದ ಛಾಯಾ​ಗ್ರಾ​ಹ​ಕಗೆ ಕಪಾ​ಳ​ಮೋ​ಕ್ಷ!

Angry actor  Nandamuri Balakrishna slaps TDP activist while campaigning at Hindupur pod
Author
Bangalore, First Published Mar 8, 2021, 9:04 AM IST

ಅನಂತ​ಪು​ರ(ಮಾ.08): ಟಾಲಿ​ವುಡ್‌ ಸಿನಿಮಾ ರಂಗದ ನಟ ಹಾಗೂ ಹಿಂದೂ​ಪುರ ಶಾಸಕ ನಂದ​ಮೂರಿ ಬಾಲ​ಕೃಷ್ಣ ಅವರು ಛಾಯಾ​ಗ್ರಾ​ಹ​ಕ​ರೊ​ಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಪಕ್ಷದ ಕಾರ್ಯ​ಕ​ರ್ತ​ರೊ​ಬ್ಬರ ನಿವಾ​ಸದ ಮುಂದೆ ನಡೆ​ದಿ​ದೆ. ಹಿಂದೂಪುರ ನಗ​ರ​ಸಭೆ ವ್ಯಾಪ್ತಿ​ಯಲ್ಲಿ ನಡೆದ ಕಾರ್ಯ​ಕ್ರ​ಮವನ್ನು ಛಾಯಾ​ಗ್ರಾ​ಹಕ ಸೆರೆ ಹಿಡಿ​ಯು​ತ್ತಿ​ದ್ದರು.

ಈ ವೇಳೆ ಶಾಸಕ ಬಾಲ​ಕೃಷ್ಣ ಅವರು ಎಲ್ಲವನ್ನೂ ವಿಡಿಯೋ ಮಾಡ​ದಂತೆ ತಾಕೀತು ಮಾಡಿ ಕಪಾ​ಳಕ್ಕೆ ಹೊಡೆ​ದಿ​ದ್ದಾರೆ. ಈ ವಿಡಿಯೋ ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ವೈರಲ್‌ ಆಗಿದೆ.

ಈ ಘಟನೆ ಖಂಡಿಸಿ ಶಾಸ​ಕನ ವಿರುದ್ಧ ಹಿಂದೂ​ಪು​ರದ ಅಂಬೇ​ಡ್ಕರ್‌ ಸರ್ಕ​ಲ್‌​ನಲ್ಲಿ ಛಾಯಾ​ಗ್ರಾ​ಹ​ಕರ ಸಂಘ​ಟ​ನೆ ಪ್ರತಿ​ಭ​ಟನೆ ನಡೆ​ಸಿ​ದೆ. ಕೊನೆಗೆ ಟಿಡಿ​ಪಿ ಕಪಾಳಕ್ಕೆ ಹೊಡೆ​ಸಿ​ಕೊಂಡ ಮತ್ತು ನಟರು ಇಬ್ಬರ ಹೇಳಿ​ಕೆ​ಯನ್ನು ಒಳ​ಗೊಂಡ ವಿಡಿ​ಯೋ​ವನ್ನು ಬಿಡು​ಗಡೆ ಮಾಡಿ ತಿಪ್ಪೆ ಸಾರಿ​ಸಲು ಯತ್ನಿ​ಸಿದೆ.

Follow Us:
Download App:
  • android
  • ios