ತ್ರಿವರ್ಣ ಧ್ವಜ ರೂಪಿಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್ ಸನ್ಮಾನ
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 2021ರ ಆ.15ಕ್ಕೆ 75 ವರ್ಷ ಪೂರ್ಣ| ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ| ತ್ರಿವರ್ಣ ಧ್ವಜ ರೂಪಿಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್ ಸನ್ಮಾನ
ಹೈದರಾಬಾದ್(ಮಾ.13): ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 2021ರ ಆ.15ಕ್ಕೆ 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿರುವ ಬೆನ್ನಲ್ಲೇ, ದೇಶದ ತ್ರಿವರ್ಣ ಧ್ವಜ ರೂಪಿಸಿದ ಕೀರ್ತಿಯ ಪಿಂಗಾಳಿ ವೆಂಕಯ್ಯ ಅವರ ಪುತ್ರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಸನ್ಮಾನ ಮಾಡಿದ್ದಾರೆ.
ಶುಕ್ರವಾರ ಗುಂಟೂರು ಜಿಲ್ಲೆಯ ಮಚೆರ್ಲಾ ಗ್ರಾಮಕ್ಕೆ ಆಗಮಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಪಿಂಗಾಳಿ ವೆಂಕಯ್ಯ ಅವರ ಪುತ್ರಿಯಾದ 99 ವರ್ಷದ ಹಿರಿಯ ನಾಯಕಿ ಘಂಟಸಾಲ ಸೀತಾಮಹಾಲಕ್ಷ್ಮೇ ಅವರಿಗೆ ಸ್ಮರಣಿಕೆಯೊಂದನ್ನು ನೀಡಿ ಸನ್ಮಾನ ನೆರವೇರಿಸಿದರು.
ಮುಖ್ಯಮಂತ್ರಿ ಜಗನ್ ಅವರ ಈ ವೈಖರಿಯು ನಾನು ಮನಸೋತಿದ್ದೇನೆ ಎಂದು ಸೀತಾಮಹಾಲಕ್ಷ್ಮೇ ತಿಳಿಸಿದರು.