Asianet Suvarna News Asianet Suvarna News

ತ್ರಿವರ್ಣ ಧ್ವಜ ರೂಪಿ​ಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್‌ ಸನ್ಮಾ​ನ

 ಭಾರ​ತಕ್ಕೆ ಸ್ವಾತಂತ್ರ್ಯ ಲಭಿಸಿ 2021ರ ಆ.15ಕ್ಕೆ 75 ವರ್ಷ ಪೂರ್ಣ| ದೇಶಾ​ದ್ಯಂತ ಸ್ವಾತಂತ್ರ್ಯದ ಅಮೃತ ಮಹೋ​ತ್ಸ​ವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ| ತ್ರಿವರ್ಣ ಧ್ವಜ ರೂಪಿ​ಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್‌ ಸನ್ಮಾ​ನ

Andhra Pradesh CM YS Jagan Mohan Reddy felicitates Tricolour maker Pingali Venkayya daughter pod
Author
Bangalore, First Published Mar 13, 2021, 8:40 AM IST

ಹೈದ​ರಾ​ಬಾ​ದ್‌(ಮಾ.13): ಭಾರ​ತಕ್ಕೆ ಸ್ವಾತಂತ್ರ್ಯ ಲಭಿಸಿ 2021ರ ಆ.15ಕ್ಕೆ 75 ವರ್ಷ ಪೂರೈ​ಸು​ತ್ತಿ​ರುವ ಹಿನ್ನೆ​ಲೆ​ಯ​ಲ್ಲಿ ದೇಶಾ​ದ್ಯಂತ ಸ್ವಾತಂತ್ರ್ಯದ ಅಮೃತ ಮಹೋ​ತ್ಸ​ವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿ​ರುವ ಬೆನ್ನಲ್ಲೇ, ದೇಶದ ತ್ರಿವರ್ಣ ಧ್ವಜ ರೂಪಿ​ಸಿದ ಕೀರ್ತಿಯ ಪಿಂಗಾಳಿ ವೆಂಕಯ್ಯ ಅವರ ಪುತ್ರಿಗೆ ಆಂಧ್ರ​ಪ್ರ​ದೇಶ ಮುಖ್ಯ​ಮಂತ್ರಿ ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ಸನ್ಮಾನ ಮಾಡಿ​ದ್ದಾರೆ.

ಶುಕ್ರ​ವಾರ ಗುಂಟೂರು ಜಿಲ್ಲೆ​ಯ​ ಮಚೆರ್ಲಾ ಗ್ರಾಮಕ್ಕೆ ಆಗ​ಮಿ​ಸಿದ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರು, ಪಿಂಗಾಳಿ ವೆಂಕಯ್ಯ ಅವರ ಪುತ್ರಿ​ಯಾದ 99 ವರ್ಷದ ಹಿರಿಯ ನಾಯಕಿ ಘಂಟ​ಸಾಲ ಸೀತಾ​ಮ​ಹಾ​ಲಕ್ಷ್ಮೇ ಅವ​ರಿಗೆ ಸ್ಮರ​ಣಿ​ಕೆ​ಯೊಂದನ್ನು ನೀಡಿ ಸನ್ಮಾನ ನೆರ​ವೇ​ರಿ​ಸಿ​ದ​ರು.

ಮುಖ್ಯ​ಮಂತ್ರಿ ಜಗನ್‌ ಅವರ ಈ ವೈಖ​ರಿಯು ನಾನು ಮನ​ಸೋ​ತಿ​ದ್ದೇನೆ ಎಂದು ಸೀತಾ​ಮ​ಹಾ​ಲಕ್ಷ್ಮೇ ತಿಳಿ​ಸಿ​ದರು.

Follow Us:
Download App:
  • android
  • ios