* ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಹಳೇ ಟ್ವೀಟ್‌ ವೈರಲ್* ಮೋದಿ ಪ್ರಧಾನಿಯಾದ್ರೆ ದೇಶ ಬಿಡ್ತೀನಿ ಎಂದಿದ್ದ ನಿರ್ಮಾಪಕಿ* ಹಳೇ ವಿಚಾರವೆತ್ತಿ ಲೀನಾಗೆ ನೆಟ್ಟಿಗರ ಕ್ಲಾಸ್‌

ನವದೆಹಲಿ(ಜು.07): ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ವಿವಾದಾತ್ಮಕ ಸಾಕ್ಷ್ಯಚಿತ್ರ ಕಲಿಕೆಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅವರ ಚಿತ್ರದ ಪೋಸ್ಟರ್‌ನಿಂದಾಗಿ ವಿವಾದ ಹೆಚ್ಚಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಲೀನಾ ವಿರುದ್ಧ ದೇಶಾದ್ಯಂತ ಹಲವು ಕಡೆ ಪ್ರಕರಣಗಳು ದಾಖಲಾಗಿವೆ. ವಿವಾದಾತ್ಮಕ ಪೋಸ್ಟರ್ ಬಗ್ಗೆ ಭಾರತ ಸರ್ಕಾರವೇ ಕೆನಡಾ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದೆ.

Kaali Poster Controversy ಬುದ್ಧಿ ಕಲಿಯದ ಲೀನಾ, ಈಗ ಶಿವ ಪಾರ್ವತಿಗೂ ಅವಮಾನ!

ಅದೇ ಸಮಯದಲ್ಲಿ, ಲೀನಾ ಚಿತ್ರದ ವಿವಾದಾತ್ಮಕ ಪೋಸ್ಟರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲೀನಾ ಅವರ ಈ ಪೋಸ್ಟ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರವು ಈ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಒತ್ತಾಯಿಸಿತ್ತು. ಇದಾದ ನಂತರ ಟ್ವಿಟರ್ ಬುಧವಾರ ಅವರ ಈ ಪೋಸ್ಟರ್ ಅನ್ನು ಅವರ ಖಾತೆಯಿಂದ ತೆಗೆದುಹಾಕಿದೆ. ಆದರೆ, ಗುರುವಾರ ಬೆಳಗ್ಗೆ ಲೀನಾ ಮತ್ತೊಂದು ವಿವಾದಾತ್ಮಕ ಫೋಟೋವನ್ನು ಪೋಸ್ಟ್ ಮಾಡಿರುವುದರಿಂದ ಮತ್ತೆ ವಿವಾದ ಭುಗಿಲೆದ್ದಿದೆ, ಅದರಲ್ಲಿ ಶಿವ ಮತ್ತು ಪಾರ್ವತಿಯ ಸಾಂಪ್ರದಾಯಿಕ ಕಲಾವಿದರು ಧೂಮಪಾನ ಮಾಡುತ್ತಿದ್ದಾರೆ. ಹೀಗಿರುವಾಗ ಈ ಟ್ವೀಟ್‌ನಲ್ಲಿಯೂ ಸಹ, ಬಳಕೆದಾರರು ಅವರನ್ನು ಸಾಕಷ್ಟು ಟೀಕಿಸುತ್ತಿದ್ದಾರೆ.

ಸುಮಾರು ಎಂಟೂವರೆ ವರ್ಷದ ಹಿಂದಿನ ಟ್ವೀಟ್‌ ವೈರಲ್

ಮತ್ತೊಂದೆಡೆ, ಲೀನಾ ಮಣಿಮೇಕಲೈ ಅವರ ಹಳೆಯ ಟ್ವೀಟ್‌ನ ಸ್ಕ್ರೀನ್ ಶಾಟ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಟ್ವೀಟ್ ಮೂಲಕ ಲೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸಿದ್ದಾರೆ. ಈ ಟ್ವೀಟ್ 13 ಸೆಪ್ಟೆಂಬರ್ 2013ರಂದು ಮಾಡಲಾಗುತ್ತು ಎಂದು ಹೇಳಲಾಗಿದೆ. ಈ ಟ್ವೀಟ್‌ನಲ್ಲಿ ಲೀನಾ ಅವರು ಮೋದಿ ದೇಶದ ಪ್ರಧಾನಿಯಾದರೆ, ನಾನು ನನ್ನ ಪಾಸ್‌ಪೋರ್ಟ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ನನ್ನ ಪೌರತ್ವವನ್ನು ಶಾಶ್ವತವಾಗಿ ತ್ಯಜಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂದಿದ್ದಾರೆ.

ಪೋಸ್ಟರ್‌ ವಿವಾದದ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ 'ಕಾಳಿ' ಸಿನಿಮಾ, ದೆಹಲಿ ಪೊಲೀಸರಿಂದ FIR!

Scroll to load tweet…

ಸ್ಕ್ರೀನ್ ಶಾಟ್ ಹಂಚಿಕೊಂಡು ಲೀನಾ ಪ್ರಶ್ನಿಸಿದ ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ 

Scroll to load tweet…

ಅದೇ ಸಮಯದಲ್ಲಿ, ಮತ್ತೊಬ್ಬ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಲೀನಾ ಅವರ ಈ ಟ್ವೀಟ್‌ನ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಮೇಡಂ ಲೀನಾ ಮಣಿಮೇಕಲೈ, ನೀವು ಇನ್ನೂ ನಿಮ್ಮ ಭರವಸೆ ಮತ್ತು ನಿರ್ಣಯವನ್ನು ಪೂರೈಸಿಲ್ಲ ಎಂದು ಬರೆದಿದ್ದಾರೆ. ಈಗ ನರೇಂದ್ರ ಮೋದಿ ಪ್ರಧಾನಿಯಾಗಿ ಎಂಟು ವರ್ಷಗಳಾಗಿವೆ. ನೀವು ಇನ್ನೂ ಚೀನಾ ಅಥವಾ ಪಾಕಿಸ್ತಾನಕ್ಕೆ ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿಲ್ಲ. ನೀವು ಈ ದೇಶಕ್ಕೆ ಹೊರೆಯಾಗಿದ್ದೀರಿ ಎಂದಿದ್ದಾರೆ.