ಸಿಂಹ ಸಾವು ಬೆನ್ನಲ್ಲೇ, ತಮಿಳ್ನಾಡಲ್ಲಿ 56 ಆನೆಗಳಿಗೆ ಕೋವಿಡ್ ಟೆಸ್ಟ್!
* ಹೆಣ್ಣು ಸಿಂಹವೊಂದು ಕೊರೋನಾದಿಂದಾಗಿ ಸಾವು
* ಸಿಂಹ ಸಾವು ಬೆನ್ನಲ್ಲೇ, ತಮಿಳ್ನಾಡಲ್ಲಿ 56 ಆನೆಗಳಿಗೆ ಕೋವಿಡ್ ಟೆಸ್ಟ್
* ಸಮೀಪದ 2 ಉದ್ಯಾನವನಗಳಲ್ಲಿ ಇರುವ 56 ಆನೆಗಳ ಗಂಟಲು ದ್ರವ ಪರೀಕ್ಷೆಗೆ ಸೂಚನೆ
ಚೆನ್ನೈ(ಜೂ.09): ಇಲ್ಲಿನ ಅರಣ್ಯದಲ್ಲಿ ಹೆಣ್ಣು ಸಿಂಹವೊಂದು ಕೊರೋನಾದಿಂದಾಗಿ ಸಾವಿಗೀಡಾಗಿ ಮತ್ತು ಇತರ 9 ಸಿಂಹಗಳು ಕೋವಿಡ್ಗೆ ತುತ್ತಾಗಿರುವ ಬೆನ್ನಲ್ಲೇ, ಸಮೀಪದ 2 ಉದ್ಯಾನವನಗಳಲ್ಲಿ ಇರುವ 56 ಆನೆಗಳ ಗಂಟಲು ದ್ರವ ಪರೀಕ್ಷೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಸೂಚಿಸಿದೆ.
ಹೀಗಾಗಿ 56 ಆನೆಗಳ ಗಂಟಲು ದ್ರವವನ್ನು ಸಂಗ್ರಹಿಸಲಾಗಿದ್ದು, ಕೋವಿಡ್ ಪರೀಕ್ಷೆಗಾಗಿ ಉತ್ತರ ಪ್ರದೇಶದ ಇಜ್ಜತ್ನಗರದಲ್ಲಿರುವ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈನ ವಂದಲೂರು ಎಂಬಲ್ಲಿರುವ ಅರಿಗ್ನಾರ್ ಅಣ್ಣಾ ಪ್ರಾಣಿ ಸಂಗ್ರಹಾಲಯದ ಉದ್ಯಾನದಲ್ಲಿ ಗುರುವಾರವಷ್ಟೇ ಸಿಂಹಿಣಿಯೊಂದು ಕೋವಿಡ್ಗೆ ಬಲಿಯಾಗಿತ್ತು. ಅಲ್ಲದೆ 11 ಸಿಂಹಗಳ ಪೈಕಿ 9 ಸಿಂಹಗಳಲ್ಲಿ ಕೋವಿಡ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಸಚಿವ ಕೆ. ರಾಮಚಂದ್ರನ್ ಅವರು ಆನೆಗಳ ಕೋವಿಡ್ ಪರೀಕ್ಷೆಗೆ ಆದೇಶಿಸಿದ್ದಾರೆ.