Asianet Suvarna News Asianet Suvarna News

ಇಂದಿನಿಂದ 48 ದಿನ ಅಯೋಧ್ಯೆಯಲ್ಲಿ ಬ್ರಹ್ಮಕಲಶಾಭಿಷೇಕೋತ್ಸವ: 400 ಋತ್ವಿಜರಲ್ಲಿ 360 ಮಂದಿ ಕನ್ನಡಿಗರು

ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದು ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಬ್ರಹ್ಮಕಲಶಾಭಿಷೇಕೋತ್ಸವ ಕಾರ್ಯಕ್ರಮ ಇನ್ನು 48 ದಿನಗಳ ಪರ್ಯಂತ ನಡೆಯಲಿದೆ. ಇದರಲ್ಲಿ 400 ಮಂದಿ ಋತ್ವಿಜರು ಭಾಗಿಯಾಗಲಿದ್ದು, ಇದರಲ್ಲಿ 360 ಮಂದಿ ಕನ್ನಡಿಗರೇ ಇದ್ದಾರೆ.

48 days Brahmakalasabhishekotsava in Ayodhya from today 360 out of 400 Ritvijas are Kannadigas akb
Author
First Published Jan 23, 2024, 8:02 AM IST

ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದು ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಬ್ರಹ್ಮಕಲಶಾಭಿಷೇಕೋತ್ಸವ ಕಾರ್ಯಕ್ರಮ ಇನ್ನು 48 ದಿನಗಳ ಪರ್ಯಂತ ನಡೆಯಲಿದೆ. ಇದರಲ್ಲಿ 400 ಮಂದಿ ಋತ್ವಿಜರು ಭಾಗಿಯಾಗಲಿದ್ದು, ಇದರಲ್ಲಿ 360 ಮಂದಿ ಕನ್ನಡಿಗರೇ ಇದ್ದಾರೆ.

ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ-ವಿಧಾನಗಳು ಇಂದು ಬೆಳಗ್ಗೆ 6ರಿಂದಲೇ ಆರಂಭವಾಗಿದ್ದು ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಸಂಜೆ ಮತ್ತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ.  ಇದಕ್ಕೆ ಪೂರಕವಾಗಿ ಬೆಳಗ್ಗೆ ಅರಣಿ ಮಥನದೊಂದಿಗೆ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.

ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ದಿನ ರಜೆ ನಿರಾಕರಿಸಿದ ಮ್ಯಾನೇಜರ್‌, ರಾಜೀನಾಮೆ ನೀಡಿ ಹೊರಬಂದ ರಾಮಭಕ್ತ!

ಮೊದಲ ದಿನ ಗಣಪತಿ ಹವನ, ಪೂಜೆ ಬಳಿಕ ತತ್ವ ಹವನ ನಡೆಯಲಿದೆ. ತತ್ವಕಲಶ ಪ್ರತಿಷ್ಠಾಪಿಸಿ, ಬೆಳಗ್ಗೆ 10ಕ್ಕೆ ಸ್ವತಃ ಪೇಜಾವರ ಶ್ರೀಗಳು ರಾಮಲಲ್ಲಾನಿಗೆ ಅಭಿಷೇಕ ನೆರವೇರಿಸಲಿದ್ದಾರೆ. ದಿನಂಪ್ರತಿ 4 ದಿನಗಳ ಕಾಲ ತಲಾ 2 ಕುಂಡಗಳಲ್ಲಿ ತತ್ವ ಹವನ ನಡೆಯಲಿದೆ. ಜ.24 ರಿಂದ ಪ್ರತಿದಿನ ವಿವಿಧ ತಂತ್ರಗ್ರಂಥಗಳ ಮಹಾಹವನ ನೆರವೇರಲಿದೆ. ನವಗ್ರಹ, ಭೂವರಾಹ ಮಂತ್ರ, ಅಷ್ಟ ಮಹಾಮಂತ್ರ ಸೇರಿ 48 ದಿನ ವಿವಿಧ ಹವನಗಳು ನಡೆಯುತ್ತವೆ.

ಕೊನೆ 5 ದಿನ ಮಹತ್ವ: ಬ್ರಹ್ಮಕಲಶಾಭಿಷೇಕ ಮಾ.10ರ ವರೆಗೆ 48 ದಿನ ನಿರಂತರವಾಗಿ ನಡೆಯಲಿದೆ. ಆದರೆ ಕೊನೇ 5 ದಿನ ಮಹತ್ವದ್ದಾಗಿದ್ದು, ಮಾ.6 ರಿಂದ 10ರವರೆಗೆ ಪ್ರತಿದಿನ 250 ಕಲಶಗಳ ಪ್ರತಿಷ್ಠೆಯಾಗಿ ಅಭಿಷೇಕ ನಡೆಯಲಿದೆ ಎಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಪ್ರಾಂಶುಪಾಲ ಸತ್ಯನಾರಾಯಣ ಆಚಾರ್ಯ ಅಯೋಧ್ಯೆಯಿಂದ ಮಾಹಿತಿ ನೀಡಿದ್ದಾರೆ.  ತಿಳಿಸಿದರು.

ರಾಮಲಲ್ಲಾ ಧರಿಸಿದ್ದ ಆಭರಣಗಳ ವಿಶೇಷತೆಗಳೇನು? ಇಲ್ಲಿದೆ ಡೀಟೇಲ್ಸ್‌!

Follow Us:
Download App:
  • android
  • ios