Asianet Suvarna News Asianet Suvarna News

Snowfall In Pakistan: ಕಾರಿನಲ್ಲಿ ಕುಳಿತಿದ್ದವರು ಹೆಪ್ಪುಗಟ್ಟಿದರು, 21 ಮಂದಿ ಪ್ರವಾಸಿಗರು ಹಿಮಪಾತಕ್ಕೆ ಬಲಿ!

* ಭಾರೀ ಹಿಮಪಾತ ಮಕ್ಕಳು ಸೇರಿ 21 ಬಲಿ

* ಪಾಕಿಸ್ತಾನದ ಮುರ್ರಿಯಲ್ಲಿ ದುರ್ಘಟನೆ

* ರಕ್ಷಣಾ ಕಾರ್ಯ ಆರಂಭ, ಪ್ರವಾಸಿಗರಿಗೆ ನಿರ್ಬಂಧ

21 people die trapped in vehicles after heavy snowfall in Pakistan Murree pod
Author
Bangalore, First Published Jan 9, 2022, 10:03 AM IST

ಇಸ್ಲಮಾಬಾದ್(ನ.09): ಪಂಜಾಬ್‌ನ ಪಾಕಿಸ್ತಾನದ ಪರ್ವತ ಪ್ರದೇಶವಾದ ಮುರ್ರಿಯಲ್ಲಿ ಭಾರೀ ಹಿಮಪಾತದಿಂದಾಗಿ 1000 ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಸಿಲುಕಿಕೊಂಡಿವೆ. ಮಾಹಿತಿ ಪ್ರಕಾರ, ಭಾರೀ ಹಿಮಪಾತದಿಂದ 10 ಮಕ್ಕಳು ಸೇರಿದಂತೆ 21 ಜನರು ಸಾವನ್ನಪ್ಪಿದ್ದಾರೆ. ಸೇನೆಯು ಇಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈ ಪ್ರಕೃತಿ ವಿಕೋಪದ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ. ಮುರ್ರಿ ಪ್ರದೇಶದ ಈ ಗಿರಿಧಾಮ ಪ್ರದೇಶದಲ್ಲಿ ಇನ್ನೂ ಕನಿಷ್ಠ ಸಾವಿರಕ್ಕೂ ಹೆಚ್ಚು ಕಾರುಗಳು ಸಿಲುಕಿಕೊಂಡಿವೆ ಎಂದು ಹೇಳಲಾಗುತ್ತಿದೆ. ಖೈಬರ್ ಪಖ್ತುಂಖ್ವಾದಲ್ಲಿರುವ ಗಲ್ಯಾತ್‌ಗೆ ಪ್ರವೇಶಿಸಲು ಕಾರುಗಳನ್ನು ನಿಷೇಧಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಶನಿವಾರ ಈ ವಾಹನಗಳಲ್ಲಿ ಸಿಲುಕಿದವರಲ್ಲಿ 10 ಮಕ್ಕಳು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ಕನಿಷ್ಠ 10 ಮಂದಿ ಕಾರಿನಲ್ಲಿ ಕುಳಿತಿದ್ದಾಗ ಶೀತಲೀಕರಣದಿಂದ ಸಾವನ್ನಪ್ಪಿದ್ದಾರೆ.

ಈ ಎಲ್ಲಾ ಪ್ರವಾಸಿಗರು ಹಿಮಪಾತ ನೋಡಲು ಆಗಮಿಸಿದ್ದರು, ಆದರೆ ಶನಿವಾರ ಹಿಂತಿರುಗುವಾಗ ರಸ್ತೆಗಳಲ್ಲಿ ಸಿಲುಕಿಕೊಂಡರು. ಪಾಕಿಸ್ತಾನದ ಸಚಿವ ಶೇಖ್ ರಶೀದ್ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಆಗಮಿಸಿದ್ದರಿಂದ ಬ್ರಿಟಿಷ್ ವಸಾಹತುಶಾಹಿ ನಗರವಾದ ಮುರ್ರೆಯಲ್ಲಿ ಈ ಪರಿಸ್ಥಿತಿ ಉದ್ಭವಿಸಿದೆ ಎನ್ನಲಾಗಿದೆ.

ಗಿರಿಧಾಮ ಹೊಂದಿರುವ ನಗರ ಮುರ್ರಿ

ಮುರ್ರಿ ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಾಬಾದ್‌ನ ಉತ್ತರದಲ್ಲಿರುವ ಹಿಲ್ ರೆಸಾರ್ಟ್ ಪಟ್ಟಣವಾಗಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಬಹುದೊಡ್ಡ ಉದ್ಯಮವಾಗಿದೆ. ಭಾರೀ ಹಿಮಪಾತವನ್ನು ವೀಕ್ಷಿಸಲು ಇತ್ತೀಚಿನ ದಿನಗಳಲ್ಲಿ 100,000 ಕ್ಕೂ ಹೆಚ್ಚು ಕಾರುಗಳು ಮುರ್ರೆಯನ್ನು ಪ್ರವೇಶಿಸಿವೆ. ಇದರಿಂದ ನಗರದ ಒಳಗೆ ಮತ್ತು ಹೊರಗೆ ಹೋಗುವ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇನೆಯು ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿದೆ

ಪಾಕ್ ಸೇನೆ ರಸ್ತೆಗಳನ್ನು ತೆರವುಗೊಳಿಸಲು ಯತ್ನಿಸುತ್ತಿದೆ. ಮುರ್ರಿ ಬೆಟ್ಟದ ಬಳಿ ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಶೀತಲಗಾಳಿಯ ಸಮಯದಲ್ಲಿ ಸುಮಾರು 1,000 ವಾಹನಗಳು ಹೆದ್ದಾರಿಯಲ್ಲಿ ಸಿಲುಕಿಕೊಂಡಿವೆ ಎಂದು ಸಚಿವ ಶೇಖ್ ರಶೀದ್ ಹೇಳಿದ್ದಾರೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಿಮಪಾತದಿಂದ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಹವಾಮಾನವನ್ನು ತಿಳಿಯದೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದನ್ನು ಎದುರಿಸಲು ಮತ್ತು ಭೀಕರ ಹಿಮಪಾತವನ್ನು ಎದುರಿಸಲು ಸ್ಥಳೀಯ ಆಡಳಿತದ ಸಾಕಷ್ಟು ಸಿದ್ಧತೆ ಇರಲಿಲ್ಲ. ಅದನ್ನು ಪರಿಶೀಲಿಸಲಾಗುತ್ತಿದೆ.

Follow Us:
Download App:
  • android
  • ios