ಅಪ್ಘಾನಿಸ್ತಾನದಿಂದ ಭಾರತಕ್ಕೆ ಬಂದವರಲ್ಲಿ ಕೊರೋನಾ!
* ಯುದ್ದಪೀಡಿತ ಅಫ್ಘಾನ್ ನಿಂದ ಬಂದವರಲ್ಲಿ ಕೊರೋನಾ ಸೋಂಕು
* 16 ಮಂದಿಗೆ ಕೊರೊನಾ ಸೋಂಕು
* ನಿನ್ನೆ ಬಂದ 78 ಮಂದಿ ಬ್ಯಾಚ್ನಲ್ಲಿ ಕಾಣಿಸಿಕೊಂಡಿರುವ ಸೋಂಕು
ನವದೆಹಲಿ(ಆ.25): ಯುದ್ದಪೀಡಿತ ಅಫ್ಘಾನ್ನಲ್ಲಿ ತಾಲಿಬಾನಿಯರ ಅಟ್ಟಹಾದ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಅಲ್ಲಿಂದ ನಾಗರಿಕರನ್ನು ರಕ್ಷಿಸಲು ಏರ್ಲಿಫ್ಟ್ ಆರಂಭಿಸಿವೆ. ಈ ಏರ್ಲಿಫ್ಟ್ ಮೂಲಕ ಈವರೆಗೆ 800ಕ್ಕೂ ಹೆಚ್ಚು ನಾಗರಿಕರ ರಕ್ಷಣೆ ಮಾಡಲಾಗಿದೆ. ಆದರೀಗ ಈ ಏರ್ಲಿಫ್ಟ್ನಿಂದ ಮತ್ತೊಂದು ಆತಂಕ ಎದುರಾಗಿದೆ. ಹೌದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ನಿನ್ನೆ ಮಂಗಳವಾರ ಏರ್ಲಿಫ್ಟ್ ಮಾಡಲಾಗಿದ್ದ 78 ಮಂದಿ ಬ್ಯಾಚ್ನಲ್ಲಿ 16 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇನ್ನು ಈ ಏರ್ಲಿಫ್ಟ್ ವೇಳೆ 44 ಆಫ್ಘನ್ ಸಿಖ್ಖರು, ಪವಿತ್ರ ಗುರು ಗ್ರಂಥ ಸಾಹೀಬ್ನ ಮೂರು ಗ್ರಂಥಗಳ ಸಮೇತ ಭಾರತಕ್ಕೆ ಬಂದಿದ್ದರು. ಆದರೀಗ ಈ ಪವಿತ್ರ ಗ್ರಂಥ ಹೊತ್ತು ತಂದವರಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ਵਾਹੁ ਵਾਹੁ ਬਾਣੀ ਨਿਰੰਕਾਰ ਹੈ
— Hardeep Singh Puri (@HardeepSPuri) August 24, 2021
ਤਿਸੁ ਜੇਵਡੁ ਅਵਰੁ ਨ ਕੋਇ ।।
Blessed to receive & pay obeisance to three holy Swaroop of Sri Guru Granth Sahib Ji from Kabul to Delhi a short while ago.@narendramodi @AmitShah @MEAIndia pic.twitter.com/91iX91hfR7
ಇನ್ನು ಭಾರತಕ್ಕೆ ಬಂದಿದ್ದ ಗುರು ಗ್ರಂಥ ಸಾಹಿಬ್ನ್ನು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಗೌರವದಿಂದ ಬರ ಮಾಡಿಕೊಂಡು, ಅದನ್ನು ತಲೆ ಮೇಲೆ ಹೊತ್ತುಕೊಂಡೇ ಹೋಗಿದ್ದರೆಂಬುವುದು ಉಲ್ಲೇಖನೀಯ.