Asianet Suvarna News Asianet Suvarna News

KMC Heart Replacement: ಮಣಿಪಾಲ ಕೆಎಂಸಿಯಲ್ಲಿ ಶಸ್ತ್ರಚಿಕಿತ್ಸೆಯಿಲ್ಲದೆ ಯಶಸ್ವಿಯಾಗಿ ಹೃದಯ ಕವಾಟದ ಬದಲಾವಣೆ

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗದ  ತಂಡವು ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಇಲ್ಲದೆ ಮಹಾಪಧಮನಿಯ ಕವಾಟವನ್ನು ಯಶಸ್ವಿಯಾಗಿ ಬದಲಾಯಿಸುವುದರ  ಮೂಲಕ ರೋಗಿಗಳಿಗೆ ಮರು ಜನ್ಮ ನೀಡಿದೆ. 

KMC Cardiologists perform Heart Valve Replacement without open heart surgery gow
Author
First Published Nov 24, 2022, 4:08 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
 
ಉಡುಪಿ (ನ.24): ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ.ಟಾಮ್ ದೇವಾಸಿಯಾ, ಸಹಾಯಕ ಪ್ರಾಧ್ಯಾಪಕಿ ಡಾ.ಮೋನಿಕಾ ಜೆ ಮತ್ತು ಹೃದಯ ಶಸ್ತ್ರ ಚಿಕಿತ್ಸಾ  ವಿಭಾಗದ ಸಹ ಪ್ರಾಧ್ಯಾಪಕ ಡಾ.ಗುರುಪ್ರಸಾದ್ ರೈ ಅವರ ತಂಡವು ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಇಲ್ಲದೆ ಮಹಾಪಧಮನಿಯ ಕವಾಟವನ್ನು ಯಶಸ್ವಿಯಾಗಿ ಬದಲಾಯಿಸುವುದರ  ಮೂಲಕ ರೋಗಿಗಳಿಗೆ ಮರು ಜನ್ಮ ನೀಡಿದೆ.  ಟ್ರಾನ್ಸ್‌ಕ್ಯಾಥೆಟರ್ ಎರೋಟಿಕ್ ವಾಲ್ವ್ ಇಂಪ್ಲಾಂಟೇಷನ್  (TAVI) ನಂತರ ಕೆಲವೇ ದಿನಗಳಲ್ಲಿ  ರೋಗಿಗಳನ್ನು ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ  ಬಿಡುಗಡೆ ಮಾಡಲಾಗುದೆ. ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಬದಲಾವಣೆಯನ್ನು (TAVR) ದೇಶದ ಕೆಲವು ಹೃದ್ರೋಗ ತಜ್ಞರು ಮಾತ್ರ  ಮಾಡುತ್ತಾರೆ.ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ 'ದಿ ಟೀಮ್ ತಾವಿ ' ಇದುವರೆಗೆ ಇಂತಹ ಅನೇಕ ಚಿಕಿತ್ಸಾ ವಿಧಾನವನ್ನು  ಯಶಸ್ವಿಯಾಗಿ ನಡೆಸಿದೆ.

76 ವರ್ಷ ವಯಸ್ಸಿನ ಪುರುಷ ರೋಗಿಯು ಒಂದು ತಿಂಗಳಿನಿಂದ  ತೀವ್ರವಾದ  ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು, ಇದರ ತೊಂದರೆ  ಕ್ರಮೇಣ ಹೆಚ್ಚುತ್ತಿತ್ತು.  ಅವರ 2D ಎಕೋ  ತೀವ್ರವಾದ ಕ್ಯಾಲ್ಸಿಫಿಕ್ ಮಹಾಪಧಮನಿಯ ಸ್ಟೆನೋಸಿಸ್ ಅನ್ನು ತೋರಿಸುತಿತ್ತು.  ಪರಿಧಮನಿಯ ಆಂಜಿಯೋಗ್ರಾಮ್ ಸಾಮಾನ್ಯವಾಗಿತ್ತು. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ರೋಗಿಯು ಹೆಚ್ಚಿನ ಅಪಾಯವನ್ನು ಹೊಂದಿದ್ದರಿಂದ ನಾವು ಈ ರೋಗಿಗೆ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಬದಲಾವಣೆಯನ್ನು ಮಾಡಲಾಯ್ತು. ಇದು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ಕೋವಿಡ್ ಯುಗದಲ್ಲಿ ಮಾಡಿದ ಮೊದಲ ತಾವಿಚಿಕಿತ್ಸಾ ವಿಧಾನ ಆಗಿತ್ತು. 

ಅಯ್ಯೋ ನೋವು ಅಂದ್ರೂ ಬಿಡ್ಲಿಲ್ಲ, ಅನಸ್ತೇಶಿಯಾ ಬಳಸದೆ 23 ಮಹಿಳೆಯರಿಗೆ ಸರ್ಜರಿ !

ಕೆಲವೇ ದಿನಗಳಲ್ಲಿ ರೋಗಿಯು ಸಂತೋಷದಿಂದ ಮತ್ತು ಆರೋಗ್ಯವಂತರಾಗಿ  ಮನೆಗೆ ತೆರಳಿದ್ದಾರೆ. 72 ವರ್ಷ ವಯಸ್ಸಿನ ಪುರುಷ ರೋಗಿಯು ತೀವ್ರವಾದ ಉಸಿರಾಟದ ತೊಂದರೆ ಮತ್ತು  ತಲೆತಿರುಗುವಿಕೆಯಿಂದ ಬಳಲುತ್ತಿದ್ದರು . ಹೃದಯದ ಮೌಲ್ಯಮಾಪನದಲ್ಲಿ ಅವರು ತೀವ್ರವಾದ ಕ್ಯಾಲ್ಸಿಫಿಕ್ ಮಹಾಪಧಮನಿಯ ಸ್ಟೆನೋಸಿಸ್ ಅನ್ನು ಹೊಂದಿರುವುದು ಕಂಡುಬಂದಿತ್ತು. ಅವರು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯನ್ನು ಹೊಂದಿದ್ದರು, ಅವರನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಅವರನ್ನು ಅಸಾಧ್ಯವಾಗಿತ್ತು.  ಅವರಿಗೆ ತಾವಿ ಚಿಕಿತ್ಸಾ ವಿಧಾನದ ಮೂಲಕ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟವನ್ನು ಬದಲಾಯಿಸಲಾಯಿತು ಮತ್ತು ರೋಗಿಯನ್ನು  ಟ್ರಾನ್ಸ್‌ಕ್ಯಾಥೆಟರ್ ಎರೋಟಿಕ್ ವಾಲ್ವ್ ಬದಲಾವಣೆಯ ( TAVR  ) ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಯಿತು ಇಂದು ವೈದ್ಯರ ತಂಡ ತಿಳಿಸಿದೆ.

Shocking: 21 ದಿನಗಳ ಹೆಣ್ಣು ಶಿಶುವಿನ ಹೊಟ್ಟೆಯಿಂದ 8 ಭ್ರೂಣ ಹೊರತೆಗೆದ ವೈದ್ಯರು!

ಭಾರತದಲ್ಲಿ,ಎಡ ಕುಹರದ (ಎಲ್ವಿ)  ತೀವ್ರ ಎಡ ಕುಹರದ ಅಪಸಾಮಾನ್ಯ ಕ್ರಿಯೆ 30% ಕ್ಕಿಂತ ಕಡಿಮೆ ಇರುವ ರೋಗಿಗಳಲ್ಲಿ ಕೆಲವೇ ಕೆಲವು ಹೃದ್ರೋಗ ತಜ್ಞರು ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟವನ್ನು ಅಳವಡಿಸಿದ್ದಾರೆ. ಇಲ್ಲಿ ದಾಖಲಾದ ರೋಗಿಗೆ 10%  ಇತ್ತು. ಬಹಳಷ್ಟು ಚರ್ಚೆಯ ನಂತರ, ಅಂತಿಮವಾಗಿ ನಮ್ಮ ತಾವಿ  ತಂಡವು ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟವನ್ನು ಅಳವಡಿಸಲು ನಿರ್ಧರಿಸಿತು. ತಾವಿಯ ನಂತರ  ರೋಗಿಯ ಸ್ಥಿತಿಯು ಸುಧಾರಿಸಿತು.  ಕುಟುಂಬದವರು ಮತ್ತು ವೈದ್ಯರು 24 ಗಂಟೆಗಳಲ್ಲಿ ರೋಗಿಯ ಸ್ಥಿತಿಯಲ್ಲಿ ಮಹತ್ತರವಾದ ಬದಲಾವಣೆಯನ್ನು ಗಮನಿಸಿದರು.

Follow Us:
Download App:
  • android
  • ios