Asianet Suvarna News Asianet Suvarna News

ಈ ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್‌ ಮಾಡಿಸಿಕೊಂಡ ನಂತರ 18 ಜನರ ದೃಷ್ಟಿಯೇ ಹೋಯ್ತು!

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಹೆಚ್ಚಿನವರಿಗೆ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಚಿರಂಜೀವಿ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

18 people allegedly lose eyesight after surgery at rajasthan ash
Author
First Published Jul 12, 2023, 4:23 PM IST

ಜೈಪುರ (ಜುಲೈ 12, 2023): ಕಣ್ಣು ಇಲ್ಲದವರು ಆಪರೇಷನ್‌ ಮಾಡಿಸಿಕೊಂಡ್ರೆ ಕಣ್ಣು ಬರುತ್ತೆ. ಆದರೆ, ಈ ರ್ಕಾರಿ ಆಸ್ಪತ್ರೆಯಲ್ಲಿ, ಅದ್ರಲ್ಲೂ ಕಾಂಗ್ರೆಸ್‌ ಸರ್ಕಾರದ ಚಿರಂಜೀವಿ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 18 ಮಂದಿ ದೃಷ್ಟಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಹೌದು, ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ 18 ಜನರು ತಮ್ಮ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಹೆಚ್ಚಿನವರಿಗೆ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಚಿರಂಜೀವಿ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದೂ ತಿಳಿದುಬಂದಿದೆ. ಅದರೂ, ಕೆಲವು ರೋಗಿಗಳು ತೀವ್ರವಾದ ಕಣ್ಣಿನ ನೋವಿನ ಬಗ್ಗೆ ದೂರು ನೀಡಿದ ನಂತರ, ತಮ್ಮನ್ನು ಆಸ್ಪತ್ರೆಗೆ ಸೇರಿಸಲು ಅವರನ್ನು ಕೇಳಲಾಯಿತು. ರೋಗಿಗಳಿಗೆ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಮಾಡಿದರೂ, ಕೆಲವು ಸಂದರ್ಭಗಳಲ್ಲಿ, ಎರಡು ವಾರಗಳಲ್ಲಿ 3 ಬಾರಿ ಆಪರೇಷನ್‌ ಮಾಡಿಸಿಕೊಂಡ್ರೂ ಕಳೆದುಕೊಂಡ ದೃಷ್ಟಿಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ.

ಇದನ್ನು ಓದಿ: ಈ ಬಾಲಕಿಯ ಕಾಲು ಮುಟ್ಟಿದ್ರೂ ಅಸಾಧ್ಯ ನೋವು, ನಡೆದ್ರೆ ಪ್ರಾಣಾನೇ ಹೋದಂತಾಗುತ್ತೆ: ಇದೆಂತ ವಿಚಿತ್ರ ಕಾಯಿಲೆ!

ಈ ಬಗ್ಗೆ ಮಾಧ್ಯಮಗಳಿಗೆ ಹಲವು ರೋಗಿಗಳು ತಮ್ಮ ನೋವು ತೋಡಿಕೊಂಡಿದ್ದಾರೆ. "ಒಂದು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ನೋವಾಗುತ್ತಿದೆ ಮತ್ತು ಕಣ್ಣಿನಲ್ಲಿ ನೀರು ಬರುತ್ತಿದೆ. ಇದು ಸೋಂಕು ಮತ್ತು ನಿಧಾನವಾಗಿ ಗುಣವಾಗುತ್ತದೆ ಎಂದು ವೈದ್ಯರು ಹೇಳಿದರು’’ ಎಂದೂ ರೋಗಿಯಾದ ಚಂದಾ ದೇವಿ ತಿಳಿಸಿದರು. ಹಾಗೆ, ‘ಜೂನ್ 23ರಂದು ಆಪರೇಷನ್ ಮಾಡಿದ ಬಳಿಕ ಜುಲೈ 5ರ ವರೆಗೆ ದೃಷ್ಟಿ ಇತ್ತು, ಜುಲೈ 6-7ರಿಂದ ದೃಷ್ಟಿ ಹೋಯಿತು, ಮತ್ತೆ ಆಪರೇಷನ್ ಮಾಡಿದರೂ ದೃಷ್ಟಿ ಬರಲಿಲ್ಲ’ ಎಂದು ಮತ್ತೊಬ್ಬ ರೋಗಿ ತಿಳಿಸಿದ್ದಾರೆ. ಹಾಗೆ, ದೃಷ್ಟಿ ಕಳೆದುಕೊಳ್ಳಲು ಸೋಂಕು ಕಾರಣ ಎಂದು ವೈದ್ಯರು ತಿಳಿಸಿದ್ದು, ಸೋಂಕನ್ನು ಗುಣಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದೂ ಹೇಳಿದರು.

ತೀವ್ರ ಕಣ್ಣಿನ ನೋವಿನ ಬಗ್ಗೆ ರೋಗಿಗಳು ದೂರಿದಾಗ ಆಸ್ಪತ್ರೆಯ ಅಧಿಕಾರಿಗಳು ತಮ್ಮನ್ನು ಮತ್ತೆ ಆಸ್ಪತ್ರೆಗೆ ದಾಖಲಿಸುವಂತೆ ಕೇಳಿಕೊಂಡರು. ಅವರು ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರವೂ - ಅವರಲ್ಲಿ ಕೆಲವರು ಎರಡಕ್ಕಿಂತ ಹೆಚ್ಚು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ತಮ್ಮ ಕಳೆದುಕೊಂಡ ದೃಷ್ಟಿಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಆದರೆ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಅಧಿಕಾರಿಗಳು ತಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ ಮತ್ತು ರೋಗಿಗಳಿಂದ ದೂರುಗಳನ್ನು ಸ್ವೀಕರಿಸಿದ ನಂತರ ತನಿಖೆ ನಡೆಯುತ್ತಿದೆ ಎಂದೂ ಹೇಳಿದರು.

ಇದನ್ನೂ ಓದಿ: ಮುದ್ದು ಕಂದಮ್ಮನ ಮೇಲೆ ಕಾರು ಹತ್ತಿಸಿ ಮಗಳ ಸಾವಿಗೆ ಕಾರಣವಾದ ತಾಯಿ: ಜರ್ಝರಿತವಾದ ಕುಟುಂಬ

ಅದರೆ, ಹಲವಾರು ರೋಗಿಗಳ ಸಂಬಂಧಿಕರು ವೈದ್ಯಕೀಯ ಸಿಬ್ಬಂದಿಯ ಕೊರತೆಯ ಮನೋಭಾವವನ್ನು ಆರೋಪಿಸಿದ್ದು, ಅವರ ರೋಗಿಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿಲ್ಲ ಮತ್ತು ತಮ್ಮ ರೋಗಿಗಳಿಗೆ ನೋವು ಇದ್ದರೂ ಮನೆಗೆ ಕರೆದೊಯ್ಯಲು ಹೇಳಿದರು ಎಂದೂ ತಿಳಿಸಿದರು. ಈ ಮಧ್ಯೆ, ಆಸ್ಪತ್ರೆಯ ಅಧಿಕಾರಿಗಳು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. "ವೈದ್ಯರ ಕಡೆಯಿಂದ ಯಾವುದೇ ಲೋಪವಾಗಿಲ್ಲ. ಇದೀಗ ಮೈಕ್ರೋಬಯಾಲಜಿ ತನಿಖೆ ನಡೆಯುತ್ತಿದೆ. ಅದು ಮುನ್ನೆಲೆಗೆ ಬಂದಾಗ ಅವರು ಹೇಳುತ್ತಾರೆ" ಎಂದು ಎಸ್‌ಎಂಎಸ್ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಎಚ್‌ಒಡಿ ಡಾ.ಪಂಕಜ್ ಶರ್ಮಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸತ್ತರೂ ಹೊತ್ತುಕೊಂಡು ರಕ್ಷಿಸಿದ್ದ ಮರಿ ಕೋತಿಯನ್ನೇ ತಿಂದ ಹೆತ್ತ ತಾಯಿ: ಕಾರಣ ಕಂಡುಕೊಂಡ ಸಂಶೋಧಕರೇ ಶಾಕ್‌!

Latest Videos
Follow Us:
Download App:
  • android
  • ios