- Home
- News
- World News
- Inside Finland s underground city: ಇದು ಜಗತ್ತಿನ ಅತ್ಯಂತ ಸುರಕ್ಷಿತ ಸ್ಥಳ: ಪರಮಾಣು ಬಾಂಬ್ ಹಾಕಿದ್ರೂ ಮನೆಯೊಳಗಿರೋರು ಸೇಫ್!
Inside Finland s underground city: ಇದು ಜಗತ್ತಿನ ಅತ್ಯಂತ ಸುರಕ್ಷಿತ ಸ್ಥಳ: ಪರಮಾಣು ಬಾಂಬ್ ಹಾಕಿದ್ರೂ ಮನೆಯೊಳಗಿರೋರು ಸೇಫ್!
ಜಗತ್ತು ಇಂದು ಪರಮಾಣು ಭೀತಿಯಲ್ಲಿದೆ. ಯುರೋಪಿ ಈ ಒಂದು ದೇಶ ತನ್ನ ನಾಗರಿಕರ ಸುರಕ್ಷತೆಗಾಗಿ ಅಂಡರ್ಗ್ರೌಂಡ್ನಲ್ಲಿ ಸಿಟಿ ನಿರ್ಮಿಸಿದೆ, ಇದು ಎಷ್ಟು ಸುರಕ್ಷಿತವಾಗಿದೆ ಎಂದರೆ ಪರಮಾಣು ಬಾಂಬ್, ಯಾವುದೆ ಜೈವಿಕ ದಾಳಿ ನಡೆಸಿದರೂ ಇಲ್ಲಿ ನಾಗರಿಕರು ಬಂಕರ್ಗಳಲ್ಲಿ ತಿಂಗಳಗಟ್ಟಲೆ ಸೇಫ್!

ಇದು ಜಗತ್ತಿನ ಅತ್ಯಂತ ಸುರಕ್ಷಿತ ಸ್ಥಳ
ಜಗತ್ತು ಈಗ ಭಯಾನಕ ಸ್ಥಿತಿಗೆ ಬಂದು ನಿಂತಿದೆ. ಅಮೆರಿಕ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿ, ಅತ್ಯಂತ ಶಕ್ತಿಯುತ ಬಾಂಬ್ಗಳ ಸುರಿಯುತ್ತಿದೆ. ಇಂಥ ಬೆದರಿಕೆಗಳು ಇದ್ದಾಗ ನೆಮ್ಮದಿಯಾಗಿ ಬದುಕಲು ಸಾಧ್ಯವೇ? ನಮ್ಮ ಭಾರತಕ್ಕೂ ಪಾಕಿಸ್ತಾನ ಪರಮಾಣು ದಾಳಿ ಮಾಡುವ ಬೆದರಿಕೆ ಹಾಕುತ್ತಿದೆ. ಹೀಗೆ ಪ್ರತಿದೇಶ ಪರಮಾಣು ಬಾಂಬ್ಗಳು ಹೊಂದಿರುವುದರಿಂದ ಪರಸ್ಪರ ಬೆದರಿಕೆ ಒಡ್ಡುತ್ತಿರುವುದರಿಂದ ಭವಿಷ್ಯದಲ್ಲಿ ಮಾನವ ಬದುಕುವುದು ಹೇಗೆ? ಮನುಷ್ಯನಿಗೆ ಸುರಕ್ಷಿತ ಸ್ಥಳವಾದರೂ ಎಲ್ಲಿದೆ? ಈ ರೀತಿ ನಿಮಗೆ ಯೋಚನೆ ಬಂದಿರಬಹುದಲ್ಲವೇ?
ಫಿನ್ಲ್ಯಾಂಡ್ ಅಂಡರ್ಗ್ರೌಂಡ್ ಸಿಟಿ
ಈಗಿನ ಯುದ್ಧಗಳು ಮೊದಲಿನಂತೆ ಗಡಿಗಳಲ್ಲಷ್ಟೇ, ಸೈನಿಕರ ಮಧ್ಯೆಯಷ್ಟೇ ನಡೆಯುವುದಿಲ್ಲ. ಶತ್ರುಗಳು ನೇರವಾಗಿ ದೇಶದ ಮಹಾನಗರಗಳನ್ನ ಟಾರ್ಗೆಟ್ ಮಾಡಿ ಕ್ಷಿಪಣಿ ಹಾರಿಸಬಹುದು. ಅವು ಮುಂಬೈಗೂ ಬಂದು ಬಿಳಬಹುದು. ಅಥವಾ ಬೆಂಗಳೂರಿಗೂ ತಲುಪಬಹುದು. ಭವಿಷ್ಯದಲ್ಲಿ ನಡೆಯಬಹುದಾದ ಯುದ್ಧವೇ ಭಯಾನಕ. ಹಾಗಾದರೆ ಮನುಷ್ಯ ಸುರಕ್ಷಿತವಾಗಿ ಬದುಕುವುದು ಹೇಗೆ?
ಪರಮಾಣು ಬಾಂಬ್ ದಾಳಿಯಿಂದಲೂ ಸುರಕ್ಷಿತ
ಉತ್ತರ ಯುರೋಪಿನ ಒಂದು ದೇಶವಾದ ಫಿನ್ಲ್ಯಾಂಡ್ ಅಂಥ ಸಂದರ್ಭ ನಿಭಾಯಿಸಲೆಂದೆ ಗಮನಾರ್ಹವಾದುದನ್ನು ಸಾಧಿಸಿದೆ. ಆ ದೇಶದ ರಾಜಧಾನಿ ಹೆಲ್ಸಿಂಕಿಯ ಸುಂದರವಾದ ಬೀದಿಗಳು, ಕಟ್ಟಡಗಳ ಕೆಳಗೆ, ಸಂಪೂರ್ಣ ಭೂಗತ ನಗರವಿದೆ! ಸ್ಥಳೀಯರು ಇದನ್ನು 'ಸೆಕೆಂಡ್ ಸಿಟಿ' ಎಂದೇ ಕರೆಯುತ್ತಾರೆ.. ಭೂಗತ ಬಂಡೆಯಿಂದ ಕೆತ್ತಲಾದ ಈ ವ್ಯವಸ್ಥೆಯನ್ನು ವಿಶ್ವದ ಅತ್ಯಂತ ಸುರಕ್ಷಿತ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಯಾವುದೇ ಪರಮಾಣು ದಾಳಿ, ವಿಷಕಾರಿ ಅನಿಲ ಅಥವಾ ಜೈವಿಕ ಶಸ್ತ್ರಾಸ್ತ್ರಗಳ ಬಳಕೆಯಿಂದಲೂ ಏನೂ ಮಾಡಲಾಗದು!
ಫಿನ್ಲ್ಯಾಂಡ್ಗೆ ಇಂಥದ್ದೊಂದು ಐಡಿಯಾ ಬಂದಿದ್ದು ಯಾವಾಗ?
ಫಿನ್ಲೆಂಡ್ನ ಈ ಸುರಕ್ಷಿತ ಸ್ಥಳ ರಾತ್ರೋರಾತ್ರಿ ನಿರ್ಮಿಸಿದ್ದಲ್ಲ. ಇದರ ಹಿಂದೆ ಐತಿಹಾಸಿಕ ಕಹಿ ಅನುಭವಗಳಿವೆ. 1939 ರಲ್ಲಿ ಎರಡನೇ ಮಹಾಯುದ್ಧದ ವೇಳೆ ಸೋವಿಯತ್ ರಷ್ಯಾ ಫಿನ್ಲೆಂಡ್ ಅನ್ನು ಆಕ್ರಮಿಸಿತು. ಅದು ಶೀತಲ ಸಮರದಿಂದ ಕಲಿತ ಕಹಿ ಅನುಭವಳಿಂದ ಪುಟ್ಟ ದೇಶ ಫಿನ್ಲ್ಯಾಂಡ್ ತನ್ನ ಭದ್ರತೆಗಾಗಿ ಸುರಕ್ಷಿತ ಸ್ಥಳದ ಬಗ್ಗೆ ಯೋಜಿಸಲು ಪ್ರಾರಂಭಿಸಿತು. ಅಂದಿನಿಂದ ಫಿನ್ನಿಷ್ ಸರ್ಕಾರವು ದೇಶಾದ್ಯಂತ 5500 ಕ್ಕೂ ಹೆಚ್ಚು ಅತ್ಯಾಧುನಿಕ ಆಶ್ರಯಗಳು ಅಥವಾ ಬಂಕರ್ಗಳನ್ನು ನಿರ್ಮಿಸಿದೆ.
ಈ ಬಂಕರ್ಗಳಲ್ಲಿ ಎಷ್ಟು ಜನರಿಗೆ ಆಶ್ರಯ ನೀಡಬಹುದು?
ಹೆಲ್ಸಿಂಕಿ ನಗರದ ಒಟ್ಟು ಜನಸಂಖ್ಯೆಯೇ ಸುಮಾರು 675,000. ಆದರೆ ಈ ಭೂಗತ ಬಂಕರ್ಗಳು ಏಕಕಾಲದಲ್ಲಿ ಸುಮಾರು 1 ಮಿಲಿಯನ್ ಜನರಿಗೆ ಆಶ್ರಯ ನೀಡುವ ಸಾಮರ್ಥ್ಯವನ್ನು ಹೊಂದಿವೆ. ಇದರರ್ಥ ನಗರದ ಪ್ರತಿಯೊಬ್ಬ ನಾಗರಿಕರಿಗೂ ಅಷ್ಟೇ ಅಲ್ಲ, ಹೊರಗಿನಿಂದ ಬರುವ ಸಂದರ್ಶಕರಿಗೂ ಸಾಕಷ್ಟು ಸ್ಥಳಾವಕಾಶವಿದೆ. ಈ ಸಿದ್ಧತೆಯನ್ನು ಕಾನೂನುಬದ್ಧಗೊಳಿಸಲು, ಫಿನ್ನಿಷ್ ಸರ್ಕಾರವು 1954 ರಲ್ಲಿ ಕಠಿಣ ನಿಯಮವನ್ನು ಜಾರಿಗೆ ತಂದಿತು. ಈ ನಿಯಮದಡಿಯಲ್ಲಿ 1,200 ಚದರ ಮೀಟರ್ಗಿಂತ ದೊಡ್ಡದಾದ ಯಾವುದೇ ಹೊಸ ಕಟ್ಟಡವು ಅದರ ನೆಲಮಾಳಿಗೆಯಲ್ಲಿ ಬಾಂಬ್ ನಿರೋಧಕ ಆಶ್ರಯವನ್ನು ಹೊಂದಿರಬೇಕು ಎಂದು ಮಾಡಿತು.
ಈ ಪರಮಾಣು ನಿರೋಧ ಬಂಕರ್ನ ವಿಶೇಷತೆ ಏನು?
ನೆಲದ ಕೆಳಗೆ ಸುಮಾರು 25 ಮೀಟರ್ (80 ಅಡಿ) ಆಳದಲ್ಲಿ ನಿರ್ಮಿಸಲಾದ ಈ ಬಂಕರ್ಗಳು ಆಧುನಿಕ ನಗರಕ್ಕಿಂತ ಕಡಿಮೆಯಿಲ್ಲ. ಉದಾಹರಣೆಗೆ, 2003 ರಲ್ಲಿ ಪೂರ್ಣಗೊಂಡ 71,000 ಘನ ಮೀಟರ್ ಆಶ್ರಯವು ಏಳು ಅಂತಸ್ತಿನ ಕಟ್ಟಡದಷ್ಟು ದೊಡ್ಡದಾಗಿದೆ. ಇದು ಈಜುಕೊಳ, ಕ್ರೀಡಾ ಪಿಚ್, ಜಿಮ್ ಮತ್ತು ಮಕ್ಕಳ ಆಟದ ಉದ್ಯಾನವನವನ್ನು ಒಳಗೊಂಡಿದೆ. ಇದರ ಮುಖ್ಯ ದ್ವಾರವು ಎರಡು ಬ್ಲ್ಯೂ ಬ್ಲಾಸ್ಟ್ ಬಾಗಿಲುಗಳನ್ನು ಹೊಂದಿದೆ. ಮೊದಲ ಬಾಗಿಲು ಬೃಹತ್ ಬಾಂಬ್ ಸ್ಫೋಟದ ಪ್ರಬಲ ಆಘಾತ ತರಂಗಗಳನ್ನು ಹೀರಿಕೊಳ್ಳುತ್ತದೆ, ಆದರೆ ಎರಡನೇ ಬಾಗಿಲು ಅಪಾಯಕಾರಿ ರಾಸಾಯನಿಕಗಳು, ಜೈವಿಕ, ಪರಮಾಣು ವಿಕಿರಣದ ಪ್ರವೇಶವನ್ನು ಸಂಪೂರ್ಣವಾಗಿ ತಡೆಯುತ್ತವೆ.
72 ಗಂಟೆಗಳ ಒಳಗೆ ತುರ್ತು ಸಿದ್ಧತೆ
ಈ ಬಂಕರ್ಗಳ ಬಗ್ಗೆ ನೀವು ನಂಬಲಾಗದ ವಿಷಯವೆಂದರೆ ಅವುಗಳನ್ನು ಸುಲಭವಾಗಿ ಕೈಬಿಡಲಾಗುವುದಿಲ್ಲ. ಸಾಮಾನ್ಯ ದಿನಗಳಲ್ಲಿ ಸ್ಥಳೀಯ ನಾಗರಿಕರು ಕ್ರೀಡೆ, ಜಿಮ್ಮಿಂಗ್ ಮತ್ತು ಇತರ ಚಟುವಟಿಕೆಗಳಿಗಾಗಿ ಇದನ್ನ ಬಳಸುತ್ತಲೇ ಇರುತ್ತಾರೆ. ಇದರಿಂದಾಗಿ ಅವರು ಭೂಗತ ಸಮಯ ಕಳೆಯಲು ಒಗ್ಗಿಕೊಂಡಿದ್ದಾರೆ. ರಾಷ್ಟ್ರೀಯ ತುರ್ತು ಪರಿಸ್ಥಿತಿ ಅಥವಾ ಯುದ್ಧ ಭುಗಿಲೆದ್ದರೆ, ಈ ಸಾರ್ವಜನಿಕ ಸ್ಥಳಗಳು 72 ಗಂಟೆಗಳ ಒಳಗೆ ಬೃಹತ್, ಸುರಕ್ಷಿತ ಶಿಬಿರವಾಗಿ ರೂಪಾಂತರಗೊಳ್ಳುತ್ತವೆ. ಬಂಕ್ ಹಾಸಿಗೆಗಳು, ದೊಡ್ಡ ಕುಡಿಯುವ ನೀರಿನ ಟ್ಯಾಂಕ್ಗಳು ಮತ್ತು ಪೋರ್ಟಬಲ್ ಶೌಚಾಲಯಗಳು ಎಲ್ಲವೂ ಇದರಲ್ಲಿ ನಿರ್ಮಿಸಲಾಗಿದೆ. ಇದು ತಿಂಗಳುಗಳವರೆಗೆ ಯಾವುದೇ ಅಪಾಯವಿಲ್ಲದೆ ಸುರಕ್ಷಿತ ಮತ್ತು ಯಾವುದೇ ಸಮಸ್ಯೆ ಇಲ್ಲದೆ ವಾಸ ಮಾಡಬಹುದಾಗಿದೆ.
ಸುರಕ್ಷತೆ ವಿಷಯದಲ್ಲಿ ಭಾರತದಲ್ಲೇನು ವ್ಯವಸ್ಥೆ?
ಈಗ ಒಮ್ಮೆ ಯೋಚಿಸಿ, ಭಾರತಕ್ಕೂ ಅಮೆರಿಕ, ಚೀನಾ, ಪಾಕಿಸ್ತಾನದಿಂದ ಪರಮಾಣ ಬೆದರಿಕೆಗಳು ಆಗಾಗ ಕೇಳಿಬರುತ್ತಿವೆ. ಪಾಕಿಸ್ತಾನದಿಂದ ಈ ಆಪಾಯವಂತೂ ತಪ್ಪಿದ್ದಲ್ಲ. ಹೀಗಿರುವಾಗ ಭವಿಷ್ಯದ ಸುರಕ್ಷತೆಗೆ ನಾವು ಹೇಗೆ ಸಿದ್ದರಾಗಿದ್ದೇವೆ. ನಮ್ಮಲ್ಲಿ ಬಂಕರ್ಗಳಿಲ್ಲ, ಬೆಂಗಳೂರು, ಮುಂಬೈ, ದೆಹಲಿಯಂಥ ಮಹಾನಗರಗಳಲ್ಲಿ ಬಂಕರ್ಗಳಿಲ್ಲ. ಹೀಗಿರುವಾಗ ಭವಿಷ್ಯದಲ್ಲಿ ಪರಮಾಣ ಬಾಂಬ್ನಂತ ದಾಳಿಯಾದಾಗ ಜನರು ಹೇಗೆ ಸುರಕ್ಷಿತವಾಗಿ ಇರಬಲ್ಲರು? ಈ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ಕಾಮೆಂಟ್ನಲ್ಲಿ ತಿಳಿಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

