ಬಾವಲಿಗಳಿಂದ ಜನಕ್ಕೆ ಕೊರೋನಾ ಬರಲ್ಲ: 64 ವಿಜ್ಞಾನಿಗಳು
ಬಾವಲಿಗಳು ಕೊರೋನಾ ಹರಡುತ್ತವೆ ಎಂಬ ಭೀತಿಯಿಂದ ದೇಶದ ಹಲವೆಡೆ ಜನರು ಮರಗಳ ರೆಂಬೆ- ಕೊಂಬೆಗಳನ್ನು ಕತ್ತರಿಸಲಾರಂಭಿಸಿದ್ದಾರೆ. ಹೀಗಿರುವಾಗ ವಿಜ್ಞಾನಿಗಳು ಬಾವಲಿಯಿಂದ ಕೊರೋನಾ ಹರಡಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಬಾವಲಿಗಳು ಕೊರೋನಾ ಹರಡುತ್ತವೆ ಎಂಬ ಭೀತಿಯಿಂದ ದೇಶದ ಹಲವೆಡೆ ಜನರು ಮರಗಳ ರೆಂಬೆ- ಕೊಂಬೆಗಳನ್ನು ಕತ್ತರಿಸುತ್ತಿರುವಾಗಲೇ ಅಚ್ಚರಿಯ ಮಾಹಿತಿ ಬಹಿರಂಗ.
ಬಾವಲಿಗಳಿಂದ ಮನುಷ್ಯರಿಗೆ ನೇರವಾಗಿ ಕೊರೋನಾ ಹರಡುವುದಿಲ್ಲ ಎಂದು 64 ವಿಜ್ಞಾನಿಗಳು ತಿಳಿಸಿದ್ದಾರೆ.
ಬಾವಲಿಗಳ ಮೇಲೆ ಅಧ್ಯಯನ ಮಾಡುವ ವೈದ್ಯರ ತಂಡವು ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದು, 40ರಿಂದ 70 ವರ್ಷಗಳ ಹಿಂದೆ ಸಾರ್ಸ್-ಕೊರೋನಾ ವೈರಸ್ ರೂಪವನ್ನೇ ಹೋಲುವ ವೈರಸ್ವೊಂದು ಆರ್ಎಟಿಜಿ13 ಎಂಬ ಜಾತಿಯ ಬಾವಲಿಗಳಲ್ಲಿ ಕಂಡುಬಂದಿತ್ತು.
ಆದರೆ ಅದು ಮಾನವನ ಶ್ವಾಸಕೋಶದ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ.
ಹಾಗಾಗಿ ಬಾವಲಿಗಳಿಂದ ಮನುಷ್ಯನಿಗೆ ನೇರವಾಗಿ ಸೋಂಕು ಹರಡುವುದಿಲ್ಲ ಎಂದು ಅಭಿಪ್ರಾಯ ಮಂಡಿಸಿದ್ದಾರೆ.
ಭಾರತದ ಎರಡು ರೀತಿಯ ಬಾವಲಿಗಳಲ್ಲಿ ಕೊರೋನಾ ವೈರಸ್ ಇದೆ.
ಆದರೆ ಆ ವೈರಸ್ ಈಗಿನ ಸೋಂಕಿಗೆ ಕಾರಣವಲ್ಲ ಎಂದು ಇತ್ತೀಚೆಗೆ ಭಾರತೀಯ ವೈದ್ಯಕೀಯ ಮಂಡಳಿ ಹೇಳಿತು.