MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ಹಿಂದೂಗಳ ಮೇಲಿನ ದಾಳಿ ಅಲ್ಲಲ್ಲಿ ನಡೆದ ಅಪರಾಧ ಕೃತ್ಯವೇ ಹೊರತು, ವ್ಯವಸ್ಥಿತ ದಾಳಿಯಲ್ಲ: ಬಾಂಗ್ಲಾದೇಶ

ಹಿಂದೂಗಳ ಮೇಲಿನ ದಾಳಿ ಅಲ್ಲಲ್ಲಿ ನಡೆದ ಅಪರಾಧ ಕೃತ್ಯವೇ ಹೊರತು, ವ್ಯವಸ್ಥಿತ ದಾಳಿಯಲ್ಲ: ಬಾಂಗ್ಲಾದೇಶ

Bangladesh's response to attacks on Hindus: ದಕ್ಷಿಣ ಏಷ್ಯಾದಲ್ಲಿ ಭಾರತ-ಬಾಂಗ್ಲಾದೇಶ ಸಂಬಂಧ ಮತ್ತೆ ಚರ್ಚೆಯಲ್ಲಿದೆ. ಭಾರತದ ಕಳವಳಕ್ಕೆ ಢಾಕಾ ಪ್ರತಿಕ್ರಿಯಿಸಿದ್ದು,  ಅಪರಾಧ ಪ್ರಕರಣಗಳೇ ಹೊರತು, ವ್ಯವಸ್ಥಿತ ಕಿರುಕುಳವಲ್ಲ ಎಂದಿದೆ.

2 Min read
Ravi Janekal
Published : Dec 28 2025, 09:53 PM IST
Share this Photo Gallery
  • FB
  • TW
  • Linkdin
  • Whatsapp
15
ಬಾಂಗ್ಲಾದೇಶದಲ್ಲಿ ಹಿಂದೂಗಳ ಬಗ್ಗೆ ಭಾರತಕ್ಕೆ ಯಾಕೆ ಕಳವಳ?
Image Credit : ANI

ಬಾಂಗ್ಲಾದೇಶದಲ್ಲಿ ಹಿಂದೂಗಳ ಬಗ್ಗೆ ಭಾರತಕ್ಕೆ ಯಾಕೆ ಕಳವಳ?

ಭಾರತದ ವಿದೇಶಾಂಗ ಸಚಿವಾಲಯ (MEA) ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಇದನ್ನು ಒಪ್ಪಲಾಗದು ಎಂದು ಹೇಳಿದ್ದ MEA, ಆರೋಪಿಗಳನ್ನು ಶೀಘ್ರದಲ್ಲೇ ನ್ಯಾಯದ ಮುಂದೆ ತರಲಾಗುವುದು ಎಂದು ಭರವಸೆ ವ್ಯಕ್ತಪಡಿಸಿತ್ತು. ವಿಶೇಷವಾಗಿ, ಡಿಸೆಂಬರ್ 18 ರಂದು ಮೈಮೆನ್‌ಸಿಂಗ್‌ನಲ್ಲಿ 27 ವರ್ಷದ ಹಿಂದೂ ಗಾರ್ಮೆಂಟ್ಸ್ ಉದ್ಯೋಗಿ ದೀಪು ಚಂದ್ರ ದಾಸ್ ಅವರ ಹತ್ಯೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಇದಲ್ಲದೆ, ರಾಜ್‌ಬರಿ ಜಿಲ್ಲೆಯಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನೂ ಉಲ್ಲೇಖಿಸಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹತ್ಯೆ, ಬೆಂಕಿ ಹಚ್ಚುವುದು ಮತ್ತು ಭೂಮಿ ಕಬಳಿಕೆಯಂತಹ ಸಾವಿರಾರು ಹಿಂಸಾತ್ಮಕ ಘಟನೆಗಳು ನಡೆದಿವೆ ಎಂದು ಭಾರತ ಹೇಳಿದೆ.

25
ಭಾರತದ ಕಳವಳಕ್ಕೆ ಬಾಂಗ್ಲಾದೇಶ ಹೇಳಿದ್ದೇನು?
Image Credit : ANI

ಭಾರತದ ಕಳವಳಕ್ಕೆ ಬಾಂಗ್ಲಾದೇಶ ಹೇಳಿದ್ದೇನು?

ಇದಕ್ಕೆ ಉತ್ತರವಾಗಿ, ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತದ ಹೇಳಿಕೆಗಳು ಸತ್ಯಕ್ಕೆ ದೂರವಾದವು ಮತ್ತು ಉತ್ಪ್ರೇಕ್ಷೆಯಿಂದ ಕೂಡಿವೆ ಎಂದು ಹೇಳಿದೆ. ಭಾರತದ ಹೇಳಿಕೆಗಳು ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ತಪ್ಪು ಆಧರಿಸಿವೆ ಎಂದು ಢಾಕಾ ಹೇಳಿದೆ. ತಮ್ಮ ದೇಶವು ಕೋಮು ಸೌಹಾರ್ದತೆಯ ಸುದೀರ್ಘ ಸಂಪ್ರದಾಯವನ್ನು ಹೊಂದಿದೆ ಮತ್ತು ಯಾವುದೇ ರೀತಿಯ ತಪ್ಪು, ಪ್ರೇರಿತ ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ಬಾಂಗ್ಲಾದೇಶ ಹೇಳಿದೆ.

Related Articles

Related image1
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ
Related image2
ಬಾಂಗ್ಲಾ: ಮೃತ ದೀಪು ಇಸ್ಲಾಂ ಅವಹೇಳನಕ್ಕೆ ಸಾಕ್ಷಿಯೇ ಇಲ್ಲ
35
ಹಿಂದೂಗಳ ಮೇಲಿನ ದಾಳಿ ಅಲ್ಲಲ್ಲಿ ನಡೆದ ಘಟನೆಗಳು - ಬಾಂಗ್ಲಾದೇಶ
Image Credit : X@amitmalviya

ಹಿಂದೂಗಳ ಮೇಲಿನ ದಾಳಿ ಅಲ್ಲಲ್ಲಿ ನಡೆದ ಘಟನೆಗಳು - ಬಾಂಗ್ಲಾದೇಶ

ಕೆಲವು ವ್ಯವಸ್ಥಿತ ಪ್ರಯತ್ನಗಳ ಭಾಗವಾಗಿ, ಬೇರೆ ಬೇರೆ ಅಪರಾಧ ಪ್ರಕರಣಗಳನ್ನು ಅಲ್ಪಸಂಖ್ಯಾತರ ಮೇಲಿನ ವ್ಯಾಪಕ ಕಿರುಕುಳ ಎಂದು ಬಿಂಬಿಸಲಾಗುತ್ತಿದೆ ಎಂದು ಢಾಕಾ ಆರೋಪಿಸಿದೆ. ಇಂತಹ ಹೇಳಿಕೆಗಳು ಆಯ್ದು ಪ್ರಚಾರ ಮಾಡಲಾಗುತ್ತಿದ್ದು, ಇದು ದೇಶದ ವರ್ಚಸ್ಸಿಗೆ ಧಕ್ಕೆ ತರುವುದಲ್ಲದೆ, ಭಾರತದಲ್ಲಿರುವ ತಮ್ಮ ಜನರು ಮತ್ತು ರಾಯಭಾರ ಕಚೇರಿಗಳ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಯತ್ನವಾಗಿದೆ ಎಂದು ಬಾಂಗ್ಲಾದೇಶ ಹೇಳಿದೆ.

45
ಕೊಲೆಯಾದ ವ್ಯಕ್ತಿ ಪಾತಕಿ - ಢಾಕಾ
Image Credit : Getty

ಕೊಲೆಯಾದ ವ್ಯಕ್ತಿ ಪಾತಕಿ - ಢಾಕಾ

ಭಾರತ ಎತ್ತಿದ ಒಂದು ಪ್ರಕರಣದ ಬಗ್ಗೆ ಬಾಂಗ್ಲಾದೇಶ ಬೇರೆಯೇ ಸತ್ಯಾಂಶಗಳನ್ನು ಮುಂದಿಟ್ಟಿದೆ. ಢಾಕಾದ ಪ್ರಕಾರ, ಉಲ್ಲೇಖಿಸಲಾದ ವ್ಯಕ್ತಿ ಪಾತಕಿಗಳ ಪಟ್ಟಿಯಲ್ಲಿದ್ದ ಅಪರಾಧಿಯಾಗಿದ್ದು, ಮುಸ್ಲಿಂ ಸಹಚರನೊಂದಿಗೆ ಸುಲಿಗೆ ಮಾಡುವಾಗ ಕೊಲೆಯಾಗಿದ್ದಾನೆ ಎನ್ನಲಾಗಿದೆ. ನಂತರ ಆ ಸಹಚರನನ್ನು ಬಂಧಿಸಲಾಯಿತು. ಈ ಘಟನೆಯನ್ನು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಎಂದು ನೋಡುವುದು ದಾರಿತಪ್ಪಿಸುವ ಮತ್ತು ಸತ್ಯಕ್ಕೆ ದೂರವಾದ ಸಂಗತಿ ಎಂದು ಬಾಂಗ್ಲಾದೇಶ ಹೇಳಿದೆ.

55
ಭಾರತ-ಬಾಂಗ್ಲಾದೇಶ ಸಂಬಂಧದ ಮೇಲೆ ಪರಿಣಾಮ?
Image Credit : Getty

ಭಾರತ-ಬಾಂಗ್ಲಾದೇಶ ಸಂಬಂಧದ ಮೇಲೆ ಪರಿಣಾಮ?

ಇಂತಹ ದಾರಿತಪ್ಪಿಸುವ ಹೇಳಿಕೆ, ಸುದ್ದಿ ಹರಡುವುದನ್ನು ನಿಲ್ಲಿಸುವಂತೆ ಬಾಂಗ್ಲಾದೇಶವು ಭಾರತಕ್ಕೆ ಮನವಿ ಮಾಡಿದೆ. ಏಕೆಂದರೆ ಇದು ಎರಡೂ ದೇಶಗಳ ನಡುವಿನ ಉತ್ತಮ ನೆರೆಹೊರೆಯ ಸಂಬಂಧ ಮತ್ತು ಪರಸ್ಪರ ನಂಬಿಕೆಯನ್ನು ದುರ್ಬಲಗೊಳಿಸಬಹುದು. ಇಂತಹ ಹೇಳಿಕೆಗಳು ದ್ವಿಪಕ್ಷೀಯ ಸಂಬಂಧಗಳಲ್ಲಿ ಅನಗತ್ಯ ಉದ್ವಿಗ್ನತೆಯನ್ನು ಉಂಟುಮಾಡಬಹುದು ಎಂದು ಢಾಕಾ ಸೂಚಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಬಾಂಗ್ಲಾದೇಶ
ಭಾರತ ಸುದ್ದಿ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ಕಣ್ಣಿಲ್ಲದ ತಾಯಿಗೆ ಕರುಳಬಳ್ಳಿಯ ಕಾವಲು: ಕಣ್ಣು ಕಾಣದೇ ಹೋದರು ತನ್ನ ಹೆಣ್ಣು ಮಕ್ಕಳ ಆರೈಕೆಯಿಂದ ಐದು ವರ್ಷಗಳ ಕಾಲ ಬದುಕಿದ ಸಿಂಹಿಣಿ
Recommended image2
ಮದುವೆ ದಿನವೇ ವರನಿಗೆ ಮುತ್ತು ಕೊಡಲು ಬಂದ ಮಾಜಿ ಗೆಳತಿ: ನೆಲಕ್ಕೆ ಕೆಡವಿ ಬಾರಿಸಿದ ವಧು: ವೀಡಿಯೋ
Recommended image3
ಚೀನಾದಲ್ಲಿ 700 ಕಿ.ಮೀ ವೇಗದ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
Related Stories
Recommended image1
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ
Recommended image2
ಬಾಂಗ್ಲಾ: ಮೃತ ದೀಪು ಇಸ್ಲಾಂ ಅವಹೇಳನಕ್ಕೆ ಸಾಕ್ಷಿಯೇ ಇಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved