MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ

ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ

ಎದ್ದೇಳಿ ಹಿಂದೂಗಳೇ, ಇದು ನಟಿ ಕಾಜಲ್ ಅಗರ್ವಾಲ್ ಸನಾತನಿಗಳಿಗೆ ನೀಡಿದ ಕರೆ.ನೀವು ಮೌನವಾಗಿದ್ದರೆ ಅದರಿಂದ ರಕ್ಷಣೆ ಸಿಗುವುದಿಲ್ಲ. ಬಾಂಗ್ಲಾದೇಶ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ನಟಿ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

2 Min read
Chethan Kumar
Published : Dec 26 2025, 08:39 PM IST
Share this Photo Gallery
  • FB
  • TW
  • Linkdin
  • Whatsapp
16
 ಬಾಂಗ್ಲಾ ಹಿಂದೂ ಮೇಲಿನ ದಾಳಿಗೆ ನಟಿ ಆಕ್ರೋಶ
Image Credit : actress kajal

ಬಾಂಗ್ಲಾ ಹಿಂದೂ ಮೇಲಿನ ದಾಳಿಗೆ ನಟಿ ಆಕ್ರೋಶ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಸತತ ದಾಳಿಯಾಗುತ್ತಿದೆ. ದೀಪು ಚಂದ್ರದಾಸ್ ಮೇಲೆ ಉದ್ರಿಕ್ತರ ಗುಂಪು ದಾಳಿ ಮಾಡಿ ಹತ್ಯೆಗೈದಿದೆ. ಮತ್ತೋರ್ವ ಹಿಂದೂವಿನ ಮೇಲೆ ದಾಳಿಯಾಗಿದೆ, ಸುಲಿಗೆ ಆರೋಪದಲ್ಲಿ ಅಮೃತ್ ಮೊಂಡಲ್ ಅನ್ನೋ ಹಿಂದೂವಿನ ಮೇಲೆ ದಾಳಿಯಾಗಿದೆ. ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿಗೆ ಜಾಗತಿಕ ಮಟ್ಟದಲ್ಲಿ ಯಾವುದೇ ಖಂಡನೆ, ಆಕ್ರೋಶ ವ್ಯಕ್ತವಾಗುತ್ತಿಲ್ಲ. ಇತ್ತ ಭಾರತದಲ್ಲೂ ಅಲ್ಲೊಂದು ಇಲ್ಲೊಂದು ಪ್ರತಿಭಟನೆ, ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದೀಗ ನಟಿ ಕಾಜಲ್ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ.

26
ಎದ್ದೇಳಿ ಹಿಂದೂಗಳು, ಮೌನ ನಿಮ್ಮನ್ನು ರಕ್ಷಿಸುವುದಿಲ್ಲ
Image Credit : actress kajal aggarwal

ಎದ್ದೇಳಿ ಹಿಂದೂಗಳು, ಮೌನ ನಿಮ್ಮನ್ನು ರಕ್ಷಿಸುವುದಿಲ್ಲ

ಎದ್ದೇಳಿ ಹಿಂದೂಗಳೇ ಎಂದು ನಟಿ ಕಾಜಲ್ ಅಗರ್ವಾಲ್ ಹಿಂದೂಗಳ ಬಡಿದೆಬ್ಬಿಸಿದ್ದಾರೆ. ನೀವು ಮೌನವಾಗಿ ಕುಳಿತರೆ ಯಾರು ನಿಮ್ಮನ್ನ ರಕ್ಷಿಸುವುದಿಲ್ಲ ಎಂದು ಕಾಜಲ್ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಹಾಕಿದ್ದಾರೆ. ಬಾಂಗ್ಲಾದೇಶ ಹಿಂದೂಗಳ ಮೇಲಿನ ದಾಳಿಗೆ ವಿಶ್ವ ಮೌನವಾಗಿದೆ. ಕನಿಷ್ಠ ಭಾರತೀಯ ಹಿಂದೂಗಳೇ ಎದ್ದೇಳಿ ಎಂದು ನಟಿ ಕರೆ ನೀಡಿದ್ದಾರೆ.

Related Articles

Related image1
Kajal Aggarwal Net Worth: 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಕಾಜಲ್ ಅಗರ್ವಾಲ್ ಆಸ್ತಿ ಎಷ್ಟುಗೊತ್ತಾ?
Related image2
Dhaka Hindu Temple Demolition: ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ದ್ವೇಷ; ಢಾಕಾದಲ್ಲಿ ದುರ್ಗಾ ದೇವಾಲಯ ಧ್ವಂಸ, ಭಾರತ ಆಕ್ರೋಶ
36
ಆಲ್ ಐಯ್ಸ್ ಆನ್ ಬಾಂಗ್ಲಾದೇಶ
Image Credit : instagram

ಆಲ್ ಐಯ್ಸ್ ಆನ್ ಬಾಂಗ್ಲಾದೇಶ

ಗಾಜಾ ಮೇಲಿನ ದಾಳಿ, ರಾಫಾ ಮೇಲಿನ ದಾಳಿ ಸೇರದಂತೆ ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವ ಯುದ್ಧಕ್ಕೆ ಭಾರತದಲ್ಲಿ ಭಾರಿ ಪ್ರತಿಕ್ರಿಯೆ, ಖಂಡನೆ ವ್ಯಕ್ತವಾಗಿತ್ತು. ಆಲ್ ಐಯ್ಸ್ ಆನ್ ಗಾಜಾ, ಆಲ್ ಐಯ್ಸ್ ಆನ್ ರಾಫಾ ಎಂದು ಬಾಲಿವುಡ್ ಸೆಲೆಬ್ರೆಟಿಗಳಿಂದ ಹಿಡಿದು ಎಲ್ಲರೂ ಟ್ವೀಟ್, ಪೋಸ್ಟ್ ಮಾಡಿದ್ದರು. ಆದರೆ ಬಾಂಗ್ಲಾದೇಶ ಹಿಂದೂಗಳ ಮೇಲೆ ಯಾರ ಕಣ್ಣು ಇಲ್ಲ. ಇದಕ್ಕೆ ನಟಿ ಕಾಜಲ್ ಅಗರ್ವಾಲ್, ಎಲ್ಲರ ಕಣ್ಣು ಬಾಂಗ್ಲಾದೇಶ ಹಿಂದೂ ಮೇಲೆ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

46
ಬಾಂಗ್ಲಾದ ಭೀಕರ ಚಿತ್ರಣ ಅನಾವರಣ ಮಾಡಿದ ನಟಿ
Image Credit : Kajal Aggarwal FB

ಬಾಂಗ್ಲಾದ ಭೀಕರ ಚಿತ್ರಣ ಅನಾವರಣ ಮಾಡಿದ ನಟಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಭೀಕರ ದಾಳಿ ಚಿತ್ರವನ್ನು ಕಾಜಲ್ ಅಗರ್ವಾಲ್ ಪೋಸ್ಟ್ ಮೂಲಕ ಹೇಳಿದ್ದಾರೆ. ಫೋಟೋ ಪೋಸ್ಟ್ ಮಾಡಿರುವ ಕಾಜಲ್, ನಾವು ಸುಮ್ಮನ್ನಿದ್ದರೆ ಘನಘೋರ ದುರಂತ ಸಂಭವಿಸಲಿದೆ ಎಂದು ಭಾರತೀಯರನ್ನು ಬಡಿದೆಬ್ಬಿಸಿದ್ದಾರೆ.

56
ಕೆಲ ನಟಿ ನಟಿಯರಿಂದ ಖಂಡನೆ
Image Credit : Asianet News

ಕೆಲ ನಟಿ ನಟಿಯರಿಂದ ಖಂಡನೆ

ಗಾಜಾ, ರಾಫಾ ಮೇಲೆ ಎಲ್ಲರು ಕಣ್ಣಿಟ್ಟಿದ್ದರೆ, ಬಾಂಗ್ಲಾ ಮೇಲೆ ಯಾರೂ ಇಲ್ಲ. ಈ ಪೈಕಿ ನಟಿ ಕಾಜಲ್ ಅಗರ್ವಾಲ್ ಸೇರಿದಂತೆ ಕೆಲ ಸೆಲೆಬ್ರೆಟಿಗಳು ಘಟನೆ ಖಂಡಿಸಿದ್ದಾರೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸೇರಿದಂತೆ ಕೆಲ ಸೆಲೆಬ್ರೆಟಿಗಳು ಹಿಂದೂಗಳ ಮೇಲಿನ ದಾಳಿ ಖಂಡಿಸಿದ್ದಾರೆ.

ಕೆಲ ನಟಿ ನಟಿಯರಿಂದ ಖಂಡನೆ

66
ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಗಂಭೀರ
Image Credit : X

ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಗಂಭೀರ

ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಕೈಮೀರಿದೆ. ಮೊಹಮ್ಮದ್ ಯೂನಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ನಿರಂತರವಾಗಿ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಹಿಂದೂಗಳ ಮೇಲಿನ ದಾಳಿ, ಹತ್ಯೆ ಒಂದಡೆಯಾದರೆ , ಇದೀಗ ಹಿಂದೂಗಳ ಶ್ರದ್ಧಾಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಬಾಂಗ್ಲಾದೇಶದಲ್ಲಿ ಶತಮಾನಗಳಿಂದ ಪೂಜಿಸಿಕೊಂಡು ಬರುತ್ತಿದ್ದ ಆಲದ ಮರವನ್ನೇ ಕಡಿದು ಹಾಕಿದ್ದಾರೆ.

ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಗಂಭೀರ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕಾಜಲ್ ಅಗರ್ವಾಲ್
ಬಾಂಗ್ಲಾದೇಶ
ಹಿಂದೂ

Latest Videos
Recommended Stories
Recommended image1
Salman Khan Birthday: 60 ವರ್ಷದ ಎವರ್’ಗ್ರೀನ್ ಬ್ಯಾಚುಲರ್ ಸಲ್ಮಾನ್ ಖಾನ್ ನೆಟ್ ವರ್ತ್ ಇಷ್ಟೊಂದಾ?
Recommended image2
ವಿಜಯ್ ದೇವರಕೊಂಡ ಜೊತೆಗಿನ ಮದುವೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ 'ಗರ್ಲ್‌ ಫ್ರೆಂಡ್' ರಶ್ಮಿಕಾ ಮಂದಣ್ಣ!
Recommended image3
'ಧುರಂಧರ್' ಸಿನಿಮಾ ಮನೆಯೊಳಗೆ ಇರುವ ಒಂದು ದೊಡ್ಡ 'ಭಯಾನಕ ನಾಯಿ' ಎಂದ ರಾಮ್‌ ಗೋಪಾಲ್ ವರ್ಮಾ!
Related Stories
Recommended image1
Kajal Aggarwal Net Worth: 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಕಾಜಲ್ ಅಗರ್ವಾಲ್ ಆಸ್ತಿ ಎಷ್ಟುಗೊತ್ತಾ?
Recommended image2
Dhaka Hindu Temple Demolition: ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ದ್ವೇಷ; ಢಾಕಾದಲ್ಲಿ ದುರ್ಗಾ ದೇವಾಲಯ ಧ್ವಂಸ, ಭಾರತ ಆಕ್ರೋಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved