MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • ಶಿರಸಿ ಬಸ್ ನಿಲ್ದಾಣದಲ್ಲಿ ಕುಳಿತ ಮಹಿಳೆಗೆ 'ರೂಮ್ ಮಾಡ್ತೀನಿ ಬಾ' ಎಂದವನ ಪರಿಸ್ಥಿತಿ ಇವಾಗೇನಾಗಿದೆ ನೋಡಿ!

ಶಿರಸಿ ಬಸ್ ನಿಲ್ದಾಣದಲ್ಲಿ ಕುಳಿತ ಮಹಿಳೆಗೆ 'ರೂಮ್ ಮಾಡ್ತೀನಿ ಬಾ' ಎಂದವನ ಪರಿಸ್ಥಿತಿ ಇವಾಗೇನಾಗಿದೆ ನೋಡಿ!

ಶಿರಸಿ ಬಸ್ ನಿಲ್ದಾಣದಲ್ಲಿ ಮಹಿಳೆಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಚಪ್ಪಲಿ ಏಟು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯವನ್ನು ಶ್ಲಾಘಿಸಲಾಗುತ್ತಿದೆ. ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ನೋಡಿ..

2 Min read
Author : Sathish Kumar KH
| Updated : Jul 18 2025, 07:37 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಉತ್ತರ ಕನ್ನಡ (ಜು.17): ಶಿರಸಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಬಸ್‌ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿ, ರೂಮ್ ಮಾಡ್ತೀನಿ ಹೋಗೋಣ ಬರ್ತಿಯಾ ಎಂದು ಕೇಳಿದವನಿಗೆ ಚಪ್ಪಲಿ ಏಟು ಕೊಟ್ಟು ಬುದ್ಧಿ ಕಲಿಸಿದ್ದಾಳೆ. ಈ ಘಟನೆ ಮಹಿಳೆಯರ ಧೈರ್ಯವಂತಿಕೆಗೆ ಸಾಕ್ಷಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಭಾರೀ ವೈರಲ್ ಆಗಿದೆ.

27
Image Credit : Asianet News

ಮದ್ಯದ ನಶೆಯಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ, ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯೊಂದರ ಬಳಿ ಹೋಗಿ ಅನಾಚಾರವಾಗಿ ವರ್ತಿಸಿದ ಘಟನೆ ಸಾರ್ವಜನಿಕ ಅಸಹ್ಯಕ್ಕೆ ಕಾರಣವಾಗಿದೆ. ಯಕ್ಕಂಬಿ ಗ್ರಾಮದ ದೀಪಾ ಎಂಬ ಮಹಿಳೆ, ಬಸ್ ನಿರೀಕ್ಷಿಸುತ್ತಿದ್ದ ವೇಳೆ ಬಂದ ವ್ಯಕ್ತಿ ‘ರೂಮ್ ಮಾಡ್ತೀನಿ ಬಾ’ ಎಂಬ ಕೀಳಮಟ್ಟದ ಶಬ್ದಗಳಿಂದ ಕೆಣಕಿದ್ದು, ಕೂಡಲೇ ಕೋಪಗೊಂಡ ದೀಪಾ ಚಪ್ಪಲಿಯಿಂದ ಆತನನ್ನು ಚಪ್ಪಲಿಯಿಂದ ಥಳಿಸಿದ್ದು, ಕೆನ್ನೆಗೆ ಹೊಡೆದು ನಶೆ ಇಳಿಸಿರುವ ದೃಶ್ಯ ಹರಿದಾಡುತ್ತಿದೆ.

Related Articles

Related image1
₹200 ವಂಚಿಸಿದ ಆರೋಪಿಯನ್ನು 30 ವರ್ಷಗಳ ನಂತರ ಬಂಧಿಸಿದ ಶಿರಸಿ ಪೊಲೀಸರು!
Related image2
ಉತ್ತರ ಕನ್ನಡ ಜಿಲ್ಲೆಯ 6 ಜಲಾಶಯಗಳೂ ಶೇ.90ರಷ್ಟು ಭರ್ತಿ! ಇಲ್ಲಿದೆ ನೀರಿನ ಮಟ್ಟ
37
Image Credit : Asianet News

ಇನ್ನು ಬಸ್ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಕೂಡ ಮಹಿಳೆಯ ಬೆಂಬಲಕ್ಕೆ ನಿಂತಿದ್ದು, ಹಗಲು ಹೊತ್ತಿನಲ್ಲಿಯೇ ಸಾರ್ವಜನಿಕವಾಗಿ ಮಹಿಳೆಯೊಬ್ಬರನ್ನು ಕೆಣಕಲು ಯತ್ನಿಸಿದ ವ್ಯಕ್ತಿಯ ನಡೆಗೆ ಎಲ್ಲರೂ ಕೆಂಡಾಮಂಡಲವಾಗಿದ್ದಾರೆ. ಸ್ಥಳೀಯ ಮಾಹಿತಿ ಪ್ರಕಾರ, ಈ ವ್ಯಕ್ತಿ ಹಿಂದೆಯೂ ಇಂತಹ ಅನಾಚಾರಗಳಲ್ಲಿ ತೊಡಗಿದ್ದು, ಹಲವಾರು ಬಾರಿ ಮಹಿಳೆಯರನ್ನು ಕೆಣಕಿದ್ದಾನೆ ಎಂಬ ಆರೋಪಗಳಿವೆ. ಈತನಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಅಲ್ಲಿದ್ದ ಮಹಿಳೆಯರು ಆಗ್ರಹ ಮಾಡಿದ್ದಾರೆ.

47
Image Credit : Asianet News

ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 'ಒಬ್ಬಂಟಿ ಮಹಿಳೆಯ ಮೇಲೆ ಈ ರೀತಿಯ ಕೃತ್ಯ ಮಾಡುವುದು ಅಮಾನವೀಯವಾಗಿದೆ' ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ದೀಪಾ ಅವರ ಧೈರ್ಯವನ್ನು ಶ್ಲಾಘಿಸಿರುವ ನೆಟ್ಟಿಗರು, ಇನ್ನು ಮುಂದೆ ಯಾವುದೇ ಪುರುಷನಿಗೆ ಮಹಿಳೆಯರನ್ನು ಕಿರುಕುಳ ನೀಡುವ ಧೈರ್ಯವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

57
Image Credit : Asianet News

ಪೊಲೀಸರುವ ವಶಕ್ಕೆ ಪಡೆದು ಎಚ್ಚರಿಕೆ:

ಈ ಘಟನೆ ಸಂಬಂಧ ಸ್ಥಳೀಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಶಿರಸಿ ನಗರದ ಬಸ್ ನಿಲ್ದಾಣದಲ್ಲಿ ಸುರಕ್ಷತೆಯ ಅಭಾವದ ಕುರಿತು ಹಲವರು ಆತಂಕ ವ್ಯಕ್ತಪಡಿಸಿದ್ದು, ಮಹಿಳಾ ಪ್ರಯಾಣಿಕರ ರಕ್ಷಣೆಗಾಗಿ ಹೆಚ್ಚಿನ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.

67
Image Credit : Asianet News

ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಇದಕ್ಕೆ ನೂರಾರು ಜನರು ಕಾಮೆಂಟ್ ಮಾಡಿ ಮಹಿಳೆಯರನ್ನು ಅನುಭೋಗದ ವಸ್ತುವಂತೆ ಕಾಣುವ ಇಂಥಹ ಕಾಮುಕರಿಗೆ ಸಾರ್ವಜನಿಕವಾಗಿಯೇ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಇಂತಹ ಕಾಮುಕರ ಉಪಟಳ ಹೆಚ್ಚಾಗಿದ್ದರೂ ಭದ್ರತಾ ಸಿಬ್ಬಂದಿ ಅಥವಾ ಪೊಲೀಸರ ಕಾವಲು ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

77
Image Credit : Asianet News

ಇಂಥವರಿಗೆ ಗಂಭೀರ ಶಿಕ್ಷೆಯನ್ನು ನೀಡಬೇಕು. ಮನೆಯಲ್ಲಿ ಹೆಂಡತಿ ಪಕ್ಕದಲ್ಲಿ ಮಲಗುವಾಗಲೂ ಈತನಿಗೆ ಭಯ ಉಂಟಾಗುವಂತೆ ಮಾಡಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಸಮಾಜದಲ್ಲಿ ಮಹಿಳೆಯರ ಕುರಿತಾಗಿ ಕೆಟ್ಟದಾಗಿ ಆಲೋಚನೆ ಮಾಡುವುದನ್ನು ಬುಡಸಮೇತ ಕಿತ್ತೆಸೆಲು ಇಂತಹ ಘಟನೆಗಳ ವಿರುದ್ಧ ಮಹಿಳೆಯರು ಪ್ರತಿಭಟಿಸುವಂತಹ ವಿಡಿಯೋಗಳು ವೈರಲ್ ಆಗಬೇಕು ಎಂದು ನೆಟ್ಟಿಗರು ತಿಳಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಉತ್ತರ ಕನ್ನಡ
ಮಹಿಳೆಯರು
ವೈರಲ್ ವಿಡಿಯೋ
ವೈರಲ್ ಸುದ್ದಿ

Latest Videos
Recommended Stories
Recommended image1
Funny Viral Video: ಗಂಡನಿಂದ ಕದ್ದ ಹಣ 10 ವರ್ಷದ ನಂತ್ರ ಸಿಕ್ತು, ನೋಟು ನೋಡ್ತಿದ್ದಂತೆ ಗೋಳೋ ಅಂತ ಅತ್ತ ಮಹಿಳೆ
Recommended image2
Nayanthara Caravan: ಭಾರೀ ಕಂಡೀಷನ್ಸ್ ಹಾಕ್ತಾರಾ ನಯನತಾರಾ? ಕ್ಯಾರವಾನ್‌ ಒಳಗೆ ಏನೆಲ್ಲಾ ಇರಬೇಕಂತೆ ಗೊತ್ತಾ?
Recommended image3
ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿರೋ "ಬೈಕ್ ಶೇವಿಂಗ್" ವಿಡಿಯೋ; ಪೊಲೀಸ್ರು ನೋಡಿದ್ರೆ ಈ ಮಹಾಶಯನ ಗತಿಯೇನು?
Related Stories
Recommended image1
₹200 ವಂಚಿಸಿದ ಆರೋಪಿಯನ್ನು 30 ವರ್ಷಗಳ ನಂತರ ಬಂಧಿಸಿದ ಶಿರಸಿ ಪೊಲೀಸರು!
Recommended image2
ಉತ್ತರ ಕನ್ನಡ ಜಿಲ್ಲೆಯ 6 ಜಲಾಶಯಗಳೂ ಶೇ.90ರಷ್ಟು ಭರ್ತಿ! ಇಲ್ಲಿದೆ ನೀರಿನ ಮಟ್ಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved