MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • Nelamangala Python: ಜಕ್ಕಸಂದ್ರ ಜನರ ಜೀವ ಬಾಯಿಗೆ ಬರಿಸಿದ ಹೆಬ್ಬಾವು; ನೀರಗಂಟಿಯಿಂದ ಸಿಕ್ತು ಬಿಗ್ ಟ್ವಿಸ್ಟ್!

Nelamangala Python: ಜಕ್ಕಸಂದ್ರ ಜನರ ಜೀವ ಬಾಯಿಗೆ ಬರಿಸಿದ ಹೆಬ್ಬಾವು; ನೀರಗಂಟಿಯಿಂದ ಸಿಕ್ತು ಬಿಗ್ ಟ್ವಿಸ್ಟ್!

ನೆಲಮಂಗಲದ ಜಕ್ಕಸಂದ್ರದಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ ಎಂದು ವೈರಲ್ ಆದ ಫೋಟೋ, ವಾಸ್ತವದಲ್ಲಿ ಎಐ-ಸೃಷ್ಟಿತ ನಕಲಿ ಚಿತ್ರವೆಂದು ಬಯಲಾಗಿದೆ. ಗ್ರಾಮದ ವಾಟರ್‌ಮೆನ್‌ಗೆ ಬುದ್ಧಿ ಕಲಿಸಲು ಅವರ ಸ್ನೇಹಿತರೇ ಈ ತಮಾಷೆ ಮಾಡಿದ್ದು, ಉರಗ ರಕ್ಷಕರ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ.

1 Min read
Author : Sathish Kumar KH
Published : Jun 19 2026, 10:07 PM IST
Share this Photo Gallery
  • FB
  • TW
  • Linkdin
  • Whatsapp
14
Image Credit : Asianet News

ಬೆಂಗಳೂರು ಗ್ರಾಮಾಂತರ: ಕಳೆದೆರಡು ದಿನಗಳಿಂದ ನೆಲಮಂಗಲ ತಾಲ್ಲೂಕಿನ ಜಕ್ಕಸಂದ್ರ ಭಾಗದ ಜನರ ನಿದ್ದೆಗೆಡಿಸಿದ್ದ 'ದೈತ್ಯ ಹೆಬ್ಬಾವಿನ' ರಹಸ್ಯ ಕೊನೆಗೂ ಬಯಲಾಗಿದೆ. ಬೃಹತ್ ಗಾತ್ರದ ಹೆಬ್ಬಾವೊಂದು ರಸ್ತೆಯ ಪಕ್ಕದ ಮನೆಯೊಂದರ ಕಾಂಪೌಂಡ್ ಒಳಗಿನ ವರಾಂಡದಲ್ಲಿ ಕಾಣಿಸಿಕೊಂಡಿದೆ ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿ ಆತಂಕ ಸೃಷ್ಟಿಸಿತ್ತು. ಆದರೆ, ಅಸಲಿಗೆ ಇದು ನಿಜವಾದ ಹಾವಲ್ಲ, ಬದಲಾಗಿ ಗೆಳೆಯರ ಗುಂಪೊಂದು ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ 'ನಕಲಿ' ಫೋಟೋ ಎಂಬುದು ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
Image Credit : Asianet News

ಘಟನೆಯ ಹಿನ್ನೆಲೆ:

ಜಕ್ಕಸಂದ್ರ ಗ್ರಾಮದ ನಿವಾಸಿಗಳ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಬೃಹತ್ ಹೆಬ್ಬಾವಿನ ಫೋಟೋವೊಂದು ಹರಿದಾಡುತ್ತಿತ್ತು. ಫೋಟೋ ನೋಡಿದ ಜನ ಜಕ್ಕಸಂದ್ರದಲ್ಲಿ ಓಡಾಡಲು ಭಯಬಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಖ್ಯಾತ ಉರಗ ರಕ್ಷಕ ಸ್ನೇಕ್ ಅರುಣ್ ಅವರು ಸುಮಾರು 2 ಗಂಟೆಗಳ ಕಾಲ ಇಡೀ ಪರಿಸರದಲ್ಲಿ ಜಾಲಾಡಿದರು. ಆದರೆ ಎಲ್ಲಿಯೂ ಹಾವಿನ ಸುಳಿವು ಸಿಗಲಿಲ್ಲ. ತದನಂತರ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಎಐ ಬಳಸಿ ಸೃಷ್ಟಿಸಿದ ಚಿತ್ರ ಎಂಬುದು ಸಾಬೀತಾಯಿತು.

Related Articles

Related image1
ನೆಲಮಂಗಲದಲ್ಲಿ ಕೊಳಕುಮಂಡಲ ಬೆನ್ನಲ್ಲೇ ನಾಗರಹಾವಿನ ಮರಿಗಳು ಪ್ರತ್ಯಕ್ಷ: ಜನರಿಗೆ ಎಚ್ಚರಿಕೆ ಕೊಟ್ಟ ಉರಗ ತಜ್ಞರು!
Related image2
ನೆಲಮಂಗಲದಲ್ಲಿ ರಾಶಿ ರಾಶಿ ಕೊಳಕು ಮಂಡಲ ಹಾವುಗಳು ಪತ್ತೆ; ಕೇವಲ 16 ಹಾವು ರಕ್ಷಣೆ, ಉಳಿದೆಲ್ಲವೂ ಪರಾರಿ!
34
Image Credit : Asianet News

ವಾಟರ್‌ಮೆನ್‌ಗೆ ಬುದ್ಧಿ ಕಲಿಸಲು ಹೋಗಿ ಊರನ್ನೇ ಹೆದರಿಸಿದರು!

ಈ ಕಿಡಿಗೇಡಿತನದ ಹಿಂದೆ ಒಂದು ತಮಾಷೆಯ ಕಾರಣವಿತ್ತು. ಗ್ರಾಮದ ವಾಟರ್‌ಮೆನ್ ಪ್ರಸಾದ್ ಎಂಬುವವರು ಮನೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಬುದ್ಧಿ ಕಲಿಸಲು ಮತ್ತು ಅವರ ಮನೆ ಬಳಿ ಬರದಂತೆ ಹೆದರಿಸಲು ಅವರ ಸ್ನೇಹಿತರೇ ಈ ಪ್ಲಾನ್ ಮಾಡಿದ್ದರು. ಎಐ ಮೂಲಕ ದೈತ್ಯ ಹೆಬ್ಬಾವಿನ ಫೋಟೋ ಸೃಷ್ಟಿಸಿ, ಅದು ಜಕ್ಕಸಂದ್ರದಲ್ಲೇ ಇದೆ ಎಂದು ಹರಿಬಿಟ್ಟಿದ್ದರು.

44
Image Credit : Asianet News

ಯಾವಾಗ ಇದು ಕೇವಲ ಎಐ ಫೋಟೋ ಮತ್ತು ವಾಟರ್‌ಮೆನ್ ಕಾಲೆಳೆಯಲು ಮಾಡಿದ ತಂತ್ರ ಎಂದು ಗೊತ್ತಾಯಿತೋ, ಅಲ್ಲಿಯವರೆಗೆ ಭಯದಲ್ಲಿದ್ದ ಗ್ರಾಮಸ್ಥರು ಬಿದ್ದು ಬಿದ್ದು ನಕ್ಕಿದ್ದಾರೆ. ಆದರೆ, ಇಂತಹ ಸುಳ್ಳು ಸುದ್ದಿಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮತ್ತು ಉರಗ ರಕ್ಷಕರು ಮನವಿ ಮಾಡಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಹಾವು
ಬೆಂಗಳೂರು
ಬೆಂಗಳೂರು ಗ್ರಾಮಾಂತರ

Latest Videos
Recommended Stories
Recommended image1
ಟೀ-ಶರ್ಟ್ ಮೇಲಿದ್ದ ಅದೊಂದೇ ವಾಕ್ಯಕ್ಕೆ 'JOB Chance' ಕಳೆದುಕೊಂಡ ಯುವತಿ!
Recommended image2
Chimpanzee: ಅಳುತ್ತಿದ್ದ ವ್ಯಕ್ತಿಯನ್ನು ನೋಡಿ ಚಿಂಪಾಂಜಿ ಮಾಡಿದ್ದೇನು? ವಿಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ!
Recommended image3
Viral Note: 'ನನ್ನ ಚಿಕ್ಕಮ್ಮನಿಗೆ ಬೇಗ ಸಾವು ಕೊಡು ದೇವ್ರೇ..!: ಹುಂಡಿಯಲ್ಲಿ ಸಿಕ್ಕ 20 ರೂ. ನೋಟಿನ ಬರಹ ವೈರಲ್
Related Stories
Recommended image1
ನೆಲಮಂಗಲದಲ್ಲಿ ಕೊಳಕುಮಂಡಲ ಬೆನ್ನಲ್ಲೇ ನಾಗರಹಾವಿನ ಮರಿಗಳು ಪ್ರತ್ಯಕ್ಷ: ಜನರಿಗೆ ಎಚ್ಚರಿಕೆ ಕೊಟ್ಟ ಉರಗ ತಜ್ಞರು!
Recommended image2
ನೆಲಮಂಗಲದಲ್ಲಿ ರಾಶಿ ರಾಶಿ ಕೊಳಕು ಮಂಡಲ ಹಾವುಗಳು ಪತ್ತೆ; ಕೇವಲ 16 ಹಾವು ರಕ್ಷಣೆ, ಉಳಿದೆಲ್ಲವೂ ಪರಾರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved