MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ದುಡ್ಡು ಬೇಕಾ? ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮನೆ ಮುಖ್ಯ ದ್ವಾರದಲ್ಲಿ ಹೀಗೆ ಮಾಡಿ..

ದುಡ್ಡು ಬೇಕಾ? ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮನೆ ಮುಖ್ಯ ದ್ವಾರದಲ್ಲಿ ಹೀಗೆ ಮಾಡಿ..

ನೀವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸೋದಾದ್ರೆ, ಮನೆಯ ಮುಖ್ಯ ದ್ವಾರದಲ್ಲಿ ಈ ಕ್ರಮಗಳನ್ನು ಮಾಡಿ. ಇದರಿಂದ ಲಕ್ಷ್ಮೀ ದೇವಿ ಸಂತಸಗೊಳ್ಳೋದಲ್ಲದೇ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ.  

2 Min read
Suvarna News
Published : Jun 06 2023, 03:49 PM IST
Share this Photo Gallery
  • FB
  • TW
  • Linkdin
  • Whatsapp
17

ಸನಾತನ ಧರ್ಮದಲ್ಲಿ, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತೆ. ತಾಯಿ ಲಕ್ಷ್ಮಿಯನ್ನು(Goddess Lakshmi) ಪೂಜಿಸೋದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತೆ. ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ತುಂಬಾ ಚಂಚಲಳಾಗಿದ್ದಾಳೆ ಎಂಬ ಧಾರ್ಮಿಕ ನಂಬಿಕೆಯಿದೆ. ಅವರು ಒಂದೇ ಸ್ಥಳದಲ್ಲಿ ದೀರ್ಘಕಾಲ ಉಳಿಯೋದಿಲ್ಲ. ಈ ಕಾರಣದಿಂದಾಗಿ, ಜೀವನದಲ್ಲಿ ಸಂತೋಷ ಮತ್ತು ದುಃಖ ಮುಂದುವರಿಯುತ್ತೆ.

27

ಜಾತಕ ಮತ್ತು ವಾಸ್ತು ದೋಷದಲ್ಲಿ(Vastu dosh) ಅಶುಭ ಗ್ರಹಗಳ ಪ್ರಭಾವದಿಂದಾಗಿ, ವ್ಯಕ್ತಿಯ ಜೀವನದಲ್ಲಿ ದುಃಖವೂ ಬರುತ್ತೆ. ತಜ್ಞರ ಪ್ರಕಾರ, ವಾಸ್ತು ನಿಯಮಗಳನ್ನು ಉಲ್ಲಂಘಿಸುವ ಮೂಲಕ, ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತೆ. ಜೀವನದಲ್ಲಿ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ತಾಯಿ ಲಕ್ಷ್ಮಿಯನ್ನು ಪೂಜಿಸಿ. ಅಲ್ಲದೆ, ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು, ಮನೆಯ ಮುಖ್ಯ ದ್ವಾರದಲ್ಲಿ ಈ ಕ್ರಮಗಳನ್ನು ಮಾಡಿ. 

37

ನೀವು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಬಯಸೋದಾದ್ರೆ, ಮನೆಯ ಮುಖ್ಯ ಬಾಗಿಲಿನ ಮೇಲೆ ತಾಯಿ ಲಕ್ಷ್ಮಿಯ ಪಾದಗಳ ಚಿತ್ರವನ್ನು ಇರಿಸಿ. ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ ಚರಣ ಗೃಹವನ್ನು ಪ್ರವೇಶಿಸುವಂತೆ ಇರಬೇಕು. ಈ ಪರಿಹಾರವನ್ನು ಮಾಡೋದರಿಂದ, ತಾಯಿ ಲಕ್ಷ್ಮಿ ಸಂತೋಷವಾಗಿರುತ್ತಾಳೆ(Happiness).

47

ಪ್ರತಿದಿನ ಸಂಜೆ ಮನೆಯ ಮುಖ್ಯ ದ್ವಾರದಲ್ಲಿ ಗೋಧಿ ಹಿಟ್ಟಿನಿಂದ (Flour) ರಂಗೋಲಿ ಮಾಡಿ. ಈ ಪರಿಹಾರ ಮಾಡೋದರಿಂದ, ವಾಸ್ತು ದೋಷ ತೆಗೆದು ಹಾಕಲಾಗುತ್ತೆ ಮತ್ತು ತಾಯಿ ಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ ಎಂದು ನಂಬಲಾಗಿದೆ.

57

ಕೆಟ್ಟ ದೃಷ್ಟಿಯು ಮನೆಯ ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತೆ ಅಥವಾ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯದ ಪರಿಸ್ಥಿತಿಯನ್ನು ಸೃಷ್ಟಿಸುತ್ತೆ. ಇದನ್ನು ತಪ್ಪಿಸಲು, ಪ್ರತಿ ಶನಿವಾರ ಮನೆಯ ಮುಖ್ಯ ಬಾಗಿಲಿಗೆ ನಿಂಬೆ-ಮೆಣಸನ್ನು(Lemon-chilli) ಕಟ್ಟಿ.
 

67

ಮನೆಯ ಮುಖ್ಯ ದ್ವಾರದಲ್ಲಿ ಗಣೇಶನ (Lord Ganesh) ಪ್ರತಿಮೆಯನ್ನು ಸ್ಥಾಪಿಸಿ. ಜೊತೆಗೆ, ಪ್ರತಿದಿನ ಗಣೇಶನನ್ನು ಪೂಜಿಸಿ. ಈ ಪರಿಹಾರವನ್ನು ಮಾಡೋದರಿಂದ, ತಾಯಿ ಲಕ್ಷ್ಮಿ ಮತ್ತು ಗಣೇಶ ಸಂತೋಷವಾಗಿರುತ್ತಾರೆ. ಅವನ ಅನುಗ್ರಹದಿಂದ, ಆದಾಯ ಮತ್ತು ಅದೃಷ್ಟ ಹೆಚ್ಚಾಗುತ್ತೆ.
 

77

ಸನಾತನ ಧರ್ಮದಲ್ಲಿ, ಮನೆಯ ಮುಖ್ಯ ದ್ವಾರದಲ್ಲಿ ತೋರಣ ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ, ಮಾವು(Mango leaves) ಅಥವಾ ಅರಳಿ ಎಲೆಗಳಿಂದ ತೋರಣ ತಯಾರಿಸಿ ಅದನ್ನು ಮನೆಯ ಮುಖ್ಯ ಬಾಗಿಲಿನ ಮೇಲೆ ಇರಿಸಲಾಗುತ್ತೆ. ಈ ಪರಿಹಾರವನ್ನು ಮಾಡೋದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತೆ ಎಂಬ ನಂಬಿಕೆ ಇದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved