Nagini 2: ದಮಯಂತಿ ಪಾತ್ರಕ್ಕೆ ಎಂಟ್ರಿ ಕೊಟ್ಟ ರೇಖಾ ಸಾಗರ್!
ನಾಗಿಣಿ 2 ತಂಡ ಹೊರ ನಡೆದ ಜೆನಿಫರ್, ಎಂಟ್ರಿ ಕೊಟ್ಟ ರೇಖಾ ಸಾಗರ್...
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿಯಿಂದ ನಟಿ ಜೆನಿಫರ್ ಆಂಟೋನಿ ಹೊರ ನಡೆದಿದ್ದರು.
ದಮಯಂತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಜೆನಿಫರ್ ಸ್ಥಾನಕ್ಕೆ ಈಗ ನಟಿ ರೇಖಾ ಸಾಗರ್ (Rekha Sagar) ಎಂಟ್ರಿ ಕೊಟ್ಟಿದ್ದಾರೆ.
ಸ್ಟಾರ್ ಸುವರ್ ವಾಹಿನಿಯ ಮನಸ್ಸೆಲ್ಲಾ ನೀನೇ ಧಾರಾವಾಹಿಯಲ್ಲಿ ನಟಿ ರೇಖಾ ಸಾಗರ್ ನಟಿಸಿದ್ದರು. ಇದೀಗ ನಾಗಿಣಿ ಟೀಮ್ಗೆ ಎಂಟ್ರಿ ಆಗಿದ್ದಾರೆ.
ಆರತಿಗೊಬ್ಬ ಕೀರ್ತಿಗೊಬ್ಬ ಮತ್ತು ಅಮ್ನೋರು ಧಾರಾವಾಹಿಯಲ್ಲಿ ಈ ನಟಿ ನಟಿಸಿದ್ದಾರೆ. ಆದರೆ ಈ ಎರಡೂ ಧಾರಾವಾಹಿಗಳು ಅರ್ಧಕ್ಕೇ ನಿಂತಿದ್ದವು.
'ಕಲಾವಿದರಿಗೆ ಕೈಯಲ್ಲಿ ಕೆಲಸವಿದ್ದರೆ ಅದೇ ಸ್ಪೂರ್ತಿ. ವಯಸ್ಸಿಗಿಂತ ದೊಡ್ಡ ಪಾತ್ರ ಮತ್ತು ಚಿಕ್ಕ ಪಾತ್ರ ಮಾಡಲು ಪ್ರೇರೇಪಿಸುತ್ತದೆ,' ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ರೇಖಾ ಹೇಳಿ ಕೊಂಡಿದ್ದರು.
'ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ ವಯಸ್ಸಿಗೆ ಮೀರಿದ ಪಾತ್ರ ನನ್ನದ್ದು. ಹಿರಿಯ ನಟ ವಿಜಯಕಾಶಿ ಅವರ ಪತ್ನಿಯಾಗಿ ಕಾಣಿಸಿಕೊಂಡೆ,' ಎಂದಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ರೇಖಾ ಸಾಗರ್ ಅವರು ರೀಲ್ಸ್ ಮತ್ತು ಹೊಸ ಫೋಟೋಶೂಟ್ಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.