ಇನ್ಮುಂದೆ ಗಟ್ಟಿಮೇಳ ಸೀರಿಯಲ್ ಬರಲ್ಲ; 'ಅಣ್ಣಯ್ಯ' ಸ್ಟೈಲ್ನಲ್ಲಿ ಮುಗಿಸೇ ಬಿಟ್ರು!
ಗಟ್ಟಿಮೇಳ ಇಲ್ಲ ವೇದಾಂತ್ ಬರ್ತಿಲ್ಲ....ಬೇಸರದಲ್ಲಿ ಜೀ ಕನ್ನಡ ವೀಕ್ಷಕರು. ಅಣ್ಣಯ್ಯ ಸಿನಿಮಾ ಕ್ಲೈಮ್ಯಾಕ್ಸ್ ಇದೆ ಅಂತಾರೆ.
ಕನ್ನಡ ಕಿರುತೆರೆ ಜನಪ್ರಿಯ 'ಗಟ್ಟಿಮೇಳ' ಧಾರಾವಾಹಿ ಅಂತ್ಯವಾಗುತ್ತಿದೆ. ಸುಮಾರು 5 ವರ್ಷಗಳ ಕಾಲ ಮನೋರಂಜಿಸಿರುವ ಕಲಾವಿದರನ್ನು ಮಿಸ್ ಮಾಡಿಕೊಳ್ಳುತ್ತೀವಿ ಅಂತಿದ್ದಾರೆ ವೀಕ್ಷಕರು.
![article_image2](https://static-ai.asianetnews.com/images/01hkw1ggwkgajnr3ym1n1p0kv4/p7_300x301xt.jpg)
ಯಾವ ಕಾರಣಕ್ಕೆ ನಿಲ್ಲಿಸುತ್ತಿದ್ದಾರೆ? ಆ ಸಮಯಕ್ಕೆ ಯಾವ ಸೀರಿಯಲ್ ಬರುತ್ತೆ? ವೇದಾಂತ್ ಮುಂದೆ ಏನ್ ಮಾಡ್ತಾರೆ ಅನ್ನೋದು ಜನರ ಪ್ರಶ್ನೆ ಅಗಿದೆ.
ಅಂತಿಮ ಸಂಚಿಕೆಯಲ್ಲಿ ವಸಿಷ್ಠ ಫ್ಯಾಮಿಲಿ ಭಾವುಕರಾಗುತ್ತಾರೆ ರಾಜಿ ಮಾಡಿಕೊಂಡು ಒಂದಾಗಲು ಮನಸ್ಸು ಮಾಡುತ್ತಾರೆ. ಡ್ರಮ್ಯಾಟಿಕ್ ಟ್ವಿಸ್ಟ್ ನೀಡಲು ಸುಹಾಸಿ ತಯಾರಿ ಮಾಡಿರುವ ವಿಷಪೂರಿತ ಆಹಾರವನ್ನು ಸೇವಿಸುತ್ತಾನೆ.
ಸುಹಾಸಿನಿ ಮಾಡಿರುವ ಕೆಟ್ಟ ಕೆಲಸವನ್ನು ಗಮನಿಸಿ ವೇದಾಂತ್ ಊಟ ಮಾಡದಂತೆ ಅಮೂಲ್ಯ ಮತ್ತು ವೈದೇಹಿ ಒತ್ತಾಯ ಮಾಡುತ್ತಾರೆ. ಸುಹಾಸಿನಿಯನ್ನು ಅಪಾರವಾಗಿ ನಂಬಿರುವ ವೇದಾಂತ್ ಒಂದು ನಿಮಿಷವೂ ಯೋಚನೆ ಮಾಡದೆ ಊಟ ಮಾಡುತ್ತಾನೆ.
ಈ ಅಂತ್ಯವನ್ನು ವೀಕ್ಷಕರು ಅಣ್ಣಯ್ಯ ಸಿನಿಮಾಗೆ ಹೋಲಿಸಿದ್ದಾರೆ.ವೇದಾಂತ್ ಸಾವಿನ ಸ್ಥಿತಿಯಲ್ಲಿ ಇರುವುದನ್ನು ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಅಮೂಲ್ಯ ಪರಿಸ್ಥಿತಿ ಏನಾಗಬಹುದು ಎಂದು ಗೆಸ್ ಮಾಡುತ್ತಿದ್ದಾರೆ.
ಸೀರಿಯಲ್ ಒಂದೆರಡು ವರ್ಷ ಟ್ರ್ಯಾಕ್ ಮಿಸ್ ಮಾಡಿಕೊಂಡಿತ್ತು. ಹಲವಾರು ಕಲಾವಿದರು ಬಂದ್ರು ಬಿಟ್ರು ಏನ್ ಏನೋ ಟ್ವಿಸ್ಟ್ ನೀಡಲಾಗಿತ್ತು. ಈ ಸಮಯದಲ್ಲಿ ಗೊಂದಲ ಕ್ರಿಯೇಟ್ ಆಗಿದ್ದು ನಿಜ.
ಅಲ್ಲದೆ ವೇದಾಂತ್ ಸೀರಿಯಲ್ ನಡುವೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಮೂಲ್ಯ ತಮಿಳು ಸೀರಿಯಲ್ ಸಹಿ ಮಾಡಿ ಬ್ಯುಸಿಯಾಗಿಬಿಟ್ಟರು.