MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Ninagaagi Serial: ನೀವು ಅಂದುಕೊಂಡವರು ಯಾರೂ ಅಲ್ಲ… ನಿನಗಾಗಿ ಸೀರಿಯಲ್ ನಿಜವಾದ ವಿಲನ್ ಇವರೇ ನೋಡಿ…

Ninagaagi Serial: ನೀವು ಅಂದುಕೊಂಡವರು ಯಾರೂ ಅಲ್ಲ… ನಿನಗಾಗಿ ಸೀರಿಯಲ್ ನಿಜವಾದ ವಿಲನ್ ಇವರೇ ನೋಡಿ…

ನಿನಗಾಗಿ ಧಾರಾವಾಹಿಯಲ್ಲಿ ನಿಜವಾದ ವಿಲನ್ ಯಾರು ಅನ್ನೋದೆ ವೀಕ್ಷಕರಿಗೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ರಾಣಾ, ದೇವಿ, ಕಪಿಲ್ ಇವರಲ್ಲಿ ವಿಲನ್ ಯಾರು?

2 Min read
Author : Pavna Das
Published : Jul 10 2025, 05:44 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : social media

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯಲ್ಲಿ (Ninagaagi Serial) ಸದ್ಯ ಸಖತ್ ಇಂಟ್ರೆಸ್ಟಿಂಗ್ ಆದ ಎಪಿಸೋಡ್ ಗಳು ನಡೆಯುತ್ತಿವೆ. ತನ್ನ ಮನೆಗೆ ಸೇರಿದ ಜೀವ, ರಚನ, ಕೃಷ್ಣ ಮತ್ತು ಬಾಲನಿಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ.

28
Image Credit : social media

ಜೀವಾ ಆ ಮನೆಗೆ ಬಂದಿರೋದು ಮೊದಲೇ ರಾಣಾ, ಕಪಿಲ್ ಸೇರಿ ಮನೆಯವರಿಗೆ ಯಾರಿಗೂ ಇಷ್ಟ ಇಲ್ಲ. ಆದರೂ ಅಪ್ಪನ ಕೊನೆಯ ಆಸೆಯಂತೆ ಹಾಗೂ ರಚನಾ ಒತ್ತಾಯದ ಮೇರೆಗೆ ಜೀವಾ ಆ ಮನೆಗೆ ಕಾಲಿಟ್ಟಿದ್ದಾನೆ. ಮನೆಗೆ ಕಾಲಿಟ್ಟ ಮೇಲೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಿವೆ. ಅದರಲ್ಲೂ ಆಸ್ತಿಯೆಲ್ಲಾ ಕೃಷ್ಣ ಹೆಸರಲ್ಲಿದೆ ಎಂದು ಗೊತ್ತಾದಾ ಮೇಲೆ ಮಗುವನ್ನು ಸಾಯಿಸೋದಕ್ಕೂ ಪ್ರಯತ್ನಿಸಿದ್ದಾರೆ.

Related Articles

Related image1
Ninagaagi Serial- ಅತ್ತೆಯ ವಿಧವೆ ಶಾಸ್ತ್ರ: ಸೊಸೆ ರಚನಾಗೆ ಈ ವಾರದ ಕಿಚ್ಚನ ಚಪ್ಪಾಳೆ!
Related image2
Ninagagi Serial ನಟ ಬಾಲಗೆ ಪತ್ರ ಬರೆದ ಪ್ರೇಕ್ಷಕ; ಕನ್ನಡ ಕಿರುತೆರೆಯಲ್ಲಿ ಅಪರೂಪದ ಕ್ಷಣ!
38
Image Credit : social media

ಈಗಾಗಲೇ ಜೀವಾ ಮೇಲೆ ದಾಳಿಯಾಗಿದೆ, ಜೀವನನ್ನು ರಕ್ಷಿಸಲು ಬಂದು ರಚನಾ ಎರಡು ಕೈಗಳಿಗೂ ಪೆಟ್ಟಾಗಿದೆ. ಆದರೆ ತನ್ನ ಮೇಲೆ ದಾಳಿ ಮಾಡಲು ಬಂದವರು ಯಾರು ಅನ್ನೋದು ಮಾತ್ರ ಜೀವಾ ಮುಂದೆ ಗುಟ್ಟಾಗಿಯೇ ಉಳಿದಿದೆ.

48
Image Credit : social media

ಇನ್ನೊಂದೆಡೆ ಮನೆಗೆ ಬಂದ ಮಂತ್ರವಾದಿ ಸಹ ಈ ಮನೆಯಲ್ಲಿ ದುಷ್ಟ ಶಕ್ತಿ ಇದೆ ಎನ್ನುತ್ತಾ, ನೇರವಾಗಿ ರಚನಾ ಮುಂದೆ ನಿಂತು ಈಕೆಯಲ್ಲೇ ದುಷ್ಟ ಶಕ್ತಿ ಇದೆ ಎಂದು ಹೇಳಿದೆ. ಆದರೆ ಆ ಮಂತ್ರವಾದಿಯ ವೇಷದಲ್ಲಿ ಬಂದಿರೋನು ನಿಜವಾದ ಮಂತ್ರವಾದಿ ಅಲ್ಲ ಅನ್ನೋದು ಜೀವಾ ಮತ್ತು ಬಾಲ ಮುಂದೆ ಬಯಲಾಗಿದೆ.

58
Image Credit : social media

ಇದೆಲ್ಲಾ ನಡೆಯುತ್ತಿರುವಾಗ ಇಲ್ಲಿ ನಿಜವಾದ ವಿಲನ್ ಯಾರು ಅನ್ನೋದೆ ವೀಕ್ಷಕರ ಪಾಲಿನ ಕಗ್ಗಂಟಾಗಿದೆ. ಯಾಕಂದ್ರೆ ಒಂದು ರೀತಿಯಲ್ಲಿ ನೋಡಿದ್ರೆ ರಾಣಾ ಎಲ್ಲರ ಎದುರಲ್ಲೇ ತನ್ನ ಕೋಪ ತಾಪವನ್ನು ಪ್ರದರ್ಶಿಸುತ್ತಿದ್ದಾನೆ. ಇನ್ನೊಂದೆಡೆ ಕಪಿಲ್ ಅಣ್ಣನ ಮಾತಿನಂತೆ, ಈ ಆಸ್ತಿಯೆಲ್ಲಾ ತಮಗೆ ಆಗಬೇಕೆಂಬ ದುರಾಸೆಯಿಂದ ಸ್ವಂತ ಅಣ್ಣ ಜೀವನನ್ನು ಕೊಲ್ಲೋದಕ್ಕೂ ಹಿಂದೆ ಮುಂದೆ ಯೋಚಿಸದೆ, ನೇರವಾಗಿಯೇ ಯುದ್ಧಕ್ಕೆ ನಿಂತಂತೆ ಸಜ್ಜಾಗಿದ್ದಾನೆ.

68
Image Credit : social media

ಇವರಿಬ್ಬರ ಮೇಲೆ ಸಂಶಯ ಇದ್ದರೂ ಇನ್ನೊಂದು ಸಂಶಯ ಇರೋದು ದೇವಿ ಮೇಲೆ. ಜೀವಾ ತಂಗಿ ದೇವಿ ಎಲ್ಲರ ಮುಂದೆ ಒಳ್ಳೆಯವಳಂತೆ ಕಾಣಿಸಿಕೊಂಡರೂ ಆಕೆ ನಿಜವಾದ ವಿಲನ್ ಆಗಿರಬಹುದು ಅನ್ನೋದು ಜನರ ಅಭಿಪ್ರಾಯವಾಗಿದೆ.

78
Image Credit : social media

ರಚನಾ ಮೇಲೆ ದಾಳಿ ಮಾಡಿದ್ದು ಹೆಣ್ಣು, ಆಕೆಯ ಕಾಲಲ್ಲಿ ಗೆಜ್ಜೆ, ಕೈಯಲ್ಲಿ ಬಳೆ ಇರೋದನ್ನು ರಚನಾ ನೋಡಿದ್ದಳು. ಮತ್ತೊಂದೆಡೆ ಕಳ್ಳ ಮಂತ್ರವಾದಿ ಸಹ ಇದನ್ನೆಲ್ಲಾ ನಾನು ಆಕೆ ಹೇಳಿಯೇ ಮಾಡಿದ್ದು ಎಂದಿದ್ದಾನೆ. ಹಾಗಾಗಿ ಎಲ್ಲಾದಕ್ಕೂ ಕಾರಣ ಒಬ್ಬ ಹೆಣ್ಣು ಅನ್ನೋದು ಗೊತ್ತಾಗಿದೆ. ಇಲ್ಲಿ ಸಂಶಯ ಬರುವಂತಹ ಬೇರೆ ಯಾವ ಹೆಣ್ಣೂ ಕೂಡ ಇಲ್ಲ. ಹಾಗಾಗಿ ಎಲ್ಲರ ದೃಷ್ಟಿ ದೇವಿಯತ್ತ ಇದೆ.

88
Image Credit : social media

ದೇವಿ ತುಂಬಾನೆ ಒಳ್ಳೆಯವಳಂತೆ ನಟಿಸುತ್ತಿದ್ದಾಳೆ. ಆದರೆ ಹಿಂದಿನಿಂದ ಆಕೆ ಜೀವನನ್ನು ಕೊಲ್ಲೋದಕ್ಕೆ ಹಾಗೂ ಈ ಮನೆಯಿಂದ ಓಡಿಸಿ, ಆಸ್ತಿಯಲ್ಲಿ ಪಾಲು ಆತನಿಗೆ ಸಿಗದೇ ಇರಲು ಈ ಪ್ರಯತ್ನಗಳನ್ನೆಲ್ಲಾ ಮಾಡುತ್ತಿರುವ ಸಾಧ್ಯತೆ ಇದೆ. ಯಾವುದಕ್ಕೂ ಯಾರು ನಿಜವಾದ ವಿಲನ್ ಅನ್ನೋದನ್ನು ನೋಡಲು ಸೀರಿಯಲ್ ನೋಡಲೇಬೇಕು. ಕರಿಮಣಿ ಧಾರಾವಾಹಿಯಲ್ಲಿ ಅರುಂಧತಿಯೇ ಬ್ಲ್ಯಾಕ್ ರೋಸ್ ಆದಂತೆ, ಇದರಲ್ಲೂ ದೇವಿನೇ ವಿಲನ್ ಆಗಿರಲೂಬಹೂದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Recommended image2
ಪ್ರೀತಮ್‌ನಲ್ಲಿ 'ಕಾಳಿದಾಸ'ನನ್ನು ಕಂಡ ಶಿವಣ್ಣ: ಅಪ್ಪಾಜಿನೇ ಅಂದ್ಕೊಂಡು 7 ವರ್ಷದ ಬಾಲಕನ ಕಾಲಿಗೆ ಮುತ್ತಿಟ್ಟ ಹ್ಯಾಟ್ರಿಕ್ ಹೀರೋ!
Recommended image3
37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್
Related Stories
Recommended image1
Ninagaagi Serial- ಅತ್ತೆಯ ವಿಧವೆ ಶಾಸ್ತ್ರ: ಸೊಸೆ ರಚನಾಗೆ ಈ ವಾರದ ಕಿಚ್ಚನ ಚಪ್ಪಾಳೆ!
Recommended image2
Ninagagi Serial ನಟ ಬಾಲಗೆ ಪತ್ರ ಬರೆದ ಪ್ರೇಕ್ಷಕ; ಕನ್ನಡ ಕಿರುತೆರೆಯಲ್ಲಿ ಅಪರೂಪದ ಕ್ಷಣ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved