MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Lakshmi Nivasa Serial: ಆಗ ಒಂದಾಗದೋರು ಈಗ ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಜೊತೆಯಾದ ಧನಂಜಯ, ಪ್ರಕೃತಿ ಪ್ರಸಾದ್

Lakshmi Nivasa Serial: ಆಗ ಒಂದಾಗದೋರು ಈಗ ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಜೊತೆಯಾದ ಧನಂಜಯ, ಪ್ರಕೃತಿ ಪ್ರಸಾದ್

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿದ್ದೇಗೌಡ್ರನ್ನು ಮದುವೆ ಆಗಬೇಕು ಅಂತ ಪೂರ್ವಿ ಕನಸು ಕಂಡಿದ್ದಳು. ಆದರೆ ಆಗಿರಲಿಲ್ಲ. ಈಗ ಈ ಜೋಡಿ ಒಂದಾಗಿದೆ. 

1 Min read
Padmashree Bhat
Published : Aug 12 2025, 07:02 AM IST| Updated : Aug 12 2025, 10:22 AM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಹೌದು, ಸಿದ್ದೇಗೌಡ್ರು ಅಂದ್ರೆ ತುಂಬ ಇಷ್ಟ ಅಂತ ಪೂರ್ವಿ ಸಾಕಷ್ಟು ಬಾರಿ ಹೇಳಿದ್ದಳು. ಅವರ ಜೊತೆ ಮದುವೆ ಆಗುವ ಕನಸು ಕಂಡಿದ್ದಳು. ನಿಶ್ಚಿತಾರ್ಥ ಆಗಿ ಮದುವೆವರೆಗೂ ಹೋಗಿದ್ದರೂ ಕೂಡ ಮದುವೆ ಆಗಲೇ ಇಲ್ಲ. ಸಿದ್ದೇಗೌಡ್ರು ಭಾವನಾಳನ್ನು ಇಷ್ಟಪಟ್ದಿದ್ದರು.

25
Image Credit : Asianet News

ಈಗ ಈ ಜೋಡಿ ಒಂದಾಗಿದೆ. ಹೌದು, ಪೂರ್ವಿ ಪಾತ್ರಧಾರಿ ಪ್ರಕೃತಿ ಪ್ರಸಾದ್‌ ಹಾಗೂ ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ಅವರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರೆಡಿಯಾಗಿದೆ. ಈ ಬಗ್ಗೆ ಇವರಿಬ್ಬರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

Related Articles

Related image1
Lakshmi Nivasa Serial: ದೇವ್ರೇ ಜಯಂತ್​ಗೆ 'ಗೂಬೆ' ಸಿಗದಿರಲಿ ಎಂದು ಹರಕೆ ಹೊತ್ತ ಸೀರಿಯಲ್​ ಪ್ರೇಮಿಗಳು!
Related image2
Lakshmi Nivasa Serial: 133 ಎಪಿಸೋಡ್‌ಗಳಿಂದ ವೀಕ್ಷಕರು ಕಾಯುತ್ತಿದ್ದ ಸಮಯ ಬಂದೇಬಿಡ್ತಾ?
35
Image Credit : Asianet News

ಈ ಸಿನಿಮಾಕ್ಕೆ ʼಶುಭ ನಾಮ ಸಂವತ್ಸರʼ ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರಕ್ಕೆ ವಿಶ್ವನಾಥ್‌ ನಾಯ್ಕ್‌ ಎನ್ನುವವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್‌ ಜೊತೆಗೆ ಇಡೀ ಚಿತ್ರತಂಡ ಪೋಸ್‌ ನೀಡಿದೆ.

45
Image Credit : Asianet News

ಹೊಸ ಆರಂಭ, ಹೊಸ ಪ್ರಯಾಣ! ಅದ್ಭುತ ಪ್ರತಿಭಾನ್ವಿತ ಸಜ್ಜನ್ ಸರ್ ನಿರ್ದೇಶನದ ಈ ಅದ್ಭುತ ಸಿನಿಮಾದ ಭಾಗವಾಗಲು ರೋಮಾಂಚನಗೊಂಡಿರುವೆ. ನನ್ನ ಆತ್ಮೀಯ ಸ್ನೇಹಿತ ಧನಂಜಯ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿರುವುದು ಇನ್ನೂ ವಿಶೇಷವಾಗಿದೆ. ಇದಕ್ಕಿಂತ ಉತ್ತಮ ತಂಡವನ್ನು ನಾನು ಕೇಳಲು ಸಾಧ್ಯವೇ ಇರಲಿಲ್ಲ! ತುಂಬಾ ಧನ್ಯಳಾಗಿದ್ದೇನೆ! ಮುಂದೆ ಏನಾಗಲಿದೆ ಎಂದು ತಿಳಿದುಇಕೊಳ್ಳಲು ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳು ಬೇಕು! ಎಂದು ನಟಿ ಪ್ರಕೃತಿ ಪ್ರಸಾದ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. 

55
Image Credit : Asianet News

ನಕ್ಷತ್ರಗಳ ಕೆಳಗೆ ಕನಸು ಕಾಣುವುದರಿಂದ ಹಿಡಿದು ಈಗ ಜನರ ಮನಸ್ಸಿನಲ್ಲಿ ನಿಲ್ಲುವವರೆಗೆ, ಈ ಪ್ರಯಾಣವು ಮ್ಯಾಜಿಕ್‌ ಆಗಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿಯೇ ನನ್ನ ದೊಡ್ಡ ಶಕ್ತಿ. ಇದು ನಿಜಕ್ಕೂ ಹೊಸ ಆರಂಭ, ಪ್ಯಾನ್‌ ಇಂಡಿಯಾ ವೇದಿಕೆಯಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಕನಸು. ನಾನು ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಜೊತೆ ಮಾಡಿದಂತೆ ಈ ಪಾತ್ರಕ್ಕೂ ತುಂಬ ಕಷ್ಟಪಡುವೆ. ನನಗೆ ಈಗ ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ಎಂದಿಗಿಂತಲೂ ಹೆಚ್ಚು ಬೇಕು ಎಂದು ನಟ ಧನಂಜಯ ಅವರು ಬರೆದುಕೊಂಡಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸೆಲೆಬ್ರಿಟಿಗಳು
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved