MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಬಲು ದುಬಾರಿ ಉಡುಗೊರೆ ಕೊಡೋಕೆ ರೆಡಿಯಾದ 'ಟಾಲೆಂಟೆಡ್‌ ಕಲಾವಿದ'; ನಿರಾಕರಿಸಿದ ಅನುಪಮಾ ಗೌಡ!

ಬಲು ದುಬಾರಿ ಉಡುಗೊರೆ ಕೊಡೋಕೆ ರೆಡಿಯಾದ 'ಟಾಲೆಂಟೆಡ್‌ ಕಲಾವಿದ'; ನಿರಾಕರಿಸಿದ ಅನುಪಮಾ ಗೌಡ!

ನಟಿ, ನಿರೂಪಕಿ ಅನುಪಮಾ ಗೌಡಗೆ 'ಕ್ವಾಟ್ಲೆ ಕಿಚನ್'‌ ಸ್ಪರ್ಧಿ ಪ್ರಶಾಂತ್‌ ಅವರು ಕಾಲ್ಗೆಜ್ಜೆಯನ್ನು ನೀಡಿದ್ದಾರೆ. ಇದರ ಹಿಂದೆ ದೊಡ್ಡ ಕತೆಯೇ ಇದೆಯಂತೆ. ಏನದು?

2 Min read
Author : Padmashree Bhat
| Updated : Jul 21 2025, 02:02 PM IST
Share this Photo Gallery
  • FB
  • TW
  • Linkdin
  • Whatsapp
16
ಅಕ್ಕ ತಮ್ಮ ಸಂಬಂಧ
Image Credit : Asianet News

ಅಕ್ಕ-ತಮ್ಮ ಸಂಬಂಧ

ನಟಿ, ನಿರೂಪಕಿ ಅನುಪಮಾ ಗೌಡ ಅವರು ಸದ್ಯ ' ಕ್ವಾಟ್ಲೆ ಕಿಚನ್'‌ ಶೋ ನಿರೂಪಣೆ ಮಾಡುತ್ತಿದ್ದಾರೆ. ಕೆಲ ವರ್ಷಗಳಿಂದ ನಿರೂಪಣೆ ಮಾಡುತ್ತಿರುವ ಅವರು ಟಿವಿ ಕಲಾವಿದರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. 'ಗಿಚ್ಚಿ ಗಿಲಿಗಿಲಿ' ಶೋ ಸ್ಪರ್ಧಿ, ಟಾಲೆಂಟೆಡ್‌ ಕಲಾವಿದ ಪ್ರಶಾಂತ್‌ ಜೊತೆಯೂ ಇವರು ಅಕ್ಕ-ತಮ್ಮನ ಬಾಂಧವ್ಯ ಹೊಂದಿದ್ದಾರೆ.

26
ಅನುಪಮಾ ಗೌಡಗೆ ಕಾಲ್ಗೆಜ್ಜೆ ಕೊಟ್ಟ ತಮ್ಮ!
Image Credit : Asianet News

ಅನುಪಮಾ ಗೌಡಗೆ ಕಾಲ್ಗೆಜ್ಜೆ ಕೊಟ್ಟ ತಮ್ಮ!

ಈ ಪ್ರಶಾಂತ್‌ ಅವರು ಅನುಪಮಾ ಗೌಡ ಮನೆಗೆ ಹೋಗಿ ಕಾಲ್ಗೆಜ್ಜೆಯನ್ನು ಉಡುಗೊರೆ ನೀಡಿದ್ದಾರೆ. ಈ ಕಾಲ್ಗೆಜ್ಜೆ ಹಿಂದೆಯೂ ದೊಡ್ಡ ಕಥೆ ಇದೆಯಂತೆ. ಇವರಿಬ್ಬರು ಈ ವಿಷಯದ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ್ದಾರೆ. ಒಟ್ಟಿನಲ್ಲಿ ಈ ಅಕ್ಕ-ತಮ್ಮನ ಬಾಂಧವ್ಯ ನೋಡಿ ವೀಕ್ಷಕರು ಖುಷಿಪಟ್ಟಿದ್ದಾರೆ.

Related Articles

Related image1
Black Dressನಲ್ಲಿ ಮಿಂಚಿದ Anupama Gowda: ಕರಾಳ ರಾತ್ರಿಯಲ್ಲಿ ಕಂಡ ಬೆಳದಿಂಗಳ ಬಾಲೆಯೆಂದ ಫ್ಯಾನ್ಸ್‌!
Related image2
ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ ಎಂದು ಫೋಟೋ ಶೇರ್ ಮಾಡಿದ Anupama Gowda: ನೀಲಿ ಸುಂದ್ರಿ ಎಂದ ಫ್ಯಾನ್ಸ್!
36
ತಮಾಷೆ ಹೋಗಿ ಸೀರಿಯಸ್‌ ಆಯ್ತು!
Image Credit : Asianet News

ತಮಾಷೆ ಹೋಗಿ ಸೀರಿಯಸ್‌ ಆಯ್ತು!

ಹೀಗೆ ಸೆಟ್‌ನಲ್ಲಿ ಮಾತನಾಡುವಾಗ ಅನುಪಮಾ ಗೌಡ ಅವರು ಪ್ರಶಾಂತ್‌ಗೆ, “ನೀನು ನನ್ನ ತಮ್ಮ, ಕಾಲ್ಗೆಜ್ಜೆ ಕೊಡಿಸು” ಅಂತ ತಮಾಷೆಯಾಗಿ ಹೇಳಿದ್ದಾರೆ. ಆಮೇಲೆ ಇದೇ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅನುಪಮಾ ಗೌಡ ಜನ್ಮದಿನಕ್ಕೆ ಕಾಲ್ಗೆಜ್ಜೆ ಉಡುಗೊರೆ ಕೊಡಬೇಕಿತ್ತು. ಆದರೆ ಕೆಲ ತಿಂಗಳುಗಳ ಬಳಿಕವಾದರೂ ಕಾಲ್ಗೆಜ್ಜೆ ಕೊಟ್ಟಿರೋದು ಖುಷಿಯ ವಿಷಯ.

46
ಗೋಲ್ಡ್‌ ಬೇಡ!
Image Credit : Asianet News

ಗೋಲ್ಡ್‌ ಬೇಡ!

“ಇಂದು ಯಾವುದೋ ಅಂಗಡಿಗೆ ಹೋಗಿ ಕಾಲ್ಗೆಜ್ಜೆ ತಂದಿರೋದು, ಈ ಕಾಲ್ಗೆಜ್ಜೆ ಕೊಡಿಸೋಕೆ ಒಂದು ವರ್ಷ ತಗೊಂಡಿದ್ದೀಯಾ, ಇನ್ನು ಗೋಲ್ಡ್‌ ಕಡ ಕೊಡಿಸೋಕೆ ಎಷ್ಟು ವರ್ಷ ತಗೋತೀಯೋ ಏನೋ” ಎಂದು ಅನುಪಮಾ ಗೌಡ ಅವರು ಪ್ರಶಾಂತ್‌ರ ಕಾಲೆಳೆದಿದ್ದಾರೆ. ಆಮೇಲೆ 18 ಕ್ಯಾರೆಟ್‌ ಗೋಲ್ಡ್‌ ಕಡ ಕೊಡಿಸೋಕೆ ಇವರಿಬ್ಬರು ಒಪ್ಪಂದ ಮಾಡಿಕೊಂಡಿದ್ದಾರೆ. 

56
ಮಂಗಳೂರಿನಿಂದ ಗೆಜ್ಜೆ ತಂದ್ರಾ?
Image Credit : Asianet News

ಮಂಗಳೂರಿನಿಂದ ಗೆಜ್ಜೆ ತಂದ್ರಾ?

ಅಂದಹಾಗೆ ಪ್ರಶಾಂತ್‌ ಅವರು “ನಾನು ಮಂಗಳೂರಿನಿಂದ ಕಾಲ್ಗೆಜ್ಜೆ ತಂದೆ. ನಾವು ನಮ್ಮ ಮನೆಯ ದೇವರನ್ನು, ಬೆಳ್ಳಿಯ ಸಾಮಗ್ರಿಗಳನ್ನು ಅಲ್ಲಿಂದಲೇ ತಂದೆವು. ನಿಮಗೂ ಒಳ್ಳೆಯದಾಗಲಿ ಎಂದು ತಂದಿದ್ದೇನೆ” ಎಂದು ಹೇಳಿದ್ದಾರೆ. ಇದು ಸತ್ಯವೋ? ಸುಳ್ಳೋ ಎಂಬ ಅನುಪಮಾ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿಲ್ಲ.

66
‌ಕೋಳಿ ಜಗಳ ಮುಗೀತು, ತಮ್ಮನಿಗಾಗಿ ಚಿಕನ್ ತಯಾರಿಸಿದ ಅಕ್ಕ!
Image Credit : our own

‌ಕೋಳಿ ಜಗಳ ಮುಗೀತು, ತಮ್ಮನಿಗಾಗಿ ಚಿಕನ್ ತಯಾರಿಸಿದ ಅಕ್ಕ!

ಎರಡು ವಾರಗಳ ಹಿಂದೆ ಅನುಪಮಾ ಗೌಡ ಅವರ ಆಂಕರಿಂಗ್‌ ಬಗ್ಗೆ ಪ್ರಶಾಂತ್‌ ಕಾಲೆಳೆದು ಮಾತನಾಡಿದ್ದಾರೆ. ಈ ವಿಷಯಕ್ಕೆ ಅನುಪಮಾ ಬೇಸರ ಮಾಡಿಕೊಂಡ್ರು ಅಂತ ಪ್ರಶಾಂತ್‌ ಶಾಕ್‌ ಆಗಿದ್ದರು. ಆ ಬಳಿಕ ಇವರಿಬ್ಬರ ಕೋಳಿ ಜಗಳ ಮುಕ್ತಾಯವಾಗಿದೆ. ತನ್ನ ಮನೆಗೆ ಬಂದು ಕಾಲ್ಗೆಜ್ಜೆ ಕೊಟ್ಟ ಎಂಬ ಕಾರಣಕ್ಕೆ ಅನುಪಮಾ ಗೌಡ ಅವರು ಪ್ರಶಾಂತ್‌ಗೆ ಬಿಸಿ ಬಿಸಿ ಚಿಕನ್‌, ಬಸ್ಸಾರು ತಯಾರಿಸಿದ್ದರಂತೆ. ಒಟ್ಟಿನಲ್ಲಿ ಈ ಅಕ್ಕ-ತಮ್ಮನ ಬಾಂಧವ್ಯ ಹೀಗೆ ಚೆನ್ನಾಗಿರಲಪ್ಪಾ…!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕಲರ್ಸ್ ಕನ್ನಡ
ಟಿವಿ ಶೋ
ರಿಯಾಲಿಟಿ ಶೋ

Latest Videos
Recommended Stories
Recommended image1
ನಲ್ಲಿಮೂಳೆ ಸ್ಟಾರ್​​​​​ ವಿರುದ್ದ ತಿರುಗಿಬಿದ್ದ ರಘು? ಗಿಲ್ಲಿಯನ್ನ ಫ್ರೆಂಡ್ಸ್​ ಗ್ರೂಪ್​​​ ನಿಂದ ಹೊರಗಿಟ್ಟ ರಘು..!
Recommended image2
ಈ ಸಾಫ್ಟ್​ವೇರ್​ ಎಂಜಿನಿಯರ್​ಗೆ ಅತಿಮಾನುಷ ಶಕ್ತಿ ಬಂದಿದ್ಹೇಗೆ? Naa Ninna Bidalaare ಶಂಭು ವಿಡಿಯೋ ವೈರಲ್​
Recommended image3
ಅಣ್ಣಯ್ಯ ಸೀರಿಯಲ್ ಪಾರುಗೆ ರಿಯಲ್‌ನಲ್ಲಿ ಬ್ರೇಕಪ್ ಆಗೋಯ್ತಾ? ಯಾರ್ ಜೊತೆ, ಏನ್ ಕಥೆ!
Related Stories
Recommended image1
Black Dressನಲ್ಲಿ ಮಿಂಚಿದ Anupama Gowda: ಕರಾಳ ರಾತ್ರಿಯಲ್ಲಿ ಕಂಡ ಬೆಳದಿಂಗಳ ಬಾಲೆಯೆಂದ ಫ್ಯಾನ್ಸ್‌!
Recommended image2
ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ ಎಂದು ಫೋಟೋ ಶೇರ್ ಮಾಡಿದ Anupama Gowda: ನೀಲಿ ಸುಂದ್ರಿ ಎಂದ ಫ್ಯಾನ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved