MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • 'ಸ್ನೇಹದ ಕಡಲಲ್ಲಿ' ಶಿವರಾಜ್-ಪಲ್ಲವಿ ಸಂಭ್ರಮದಲ್ಲಿ 'ನಿನ್ನ ಜೊತೆ ನನ್ನ ಕಥೆ' ಅಜಿತ್-ಭೂಮಿ! ಇದು ಮಹಾಸಂಗಮ!

'ಸ್ನೇಹದ ಕಡಲಲ್ಲಿ' ಶಿವರಾಜ್-ಪಲ್ಲವಿ ಸಂಭ್ರಮದಲ್ಲಿ 'ನಿನ್ನ ಜೊತೆ ನನ್ನ ಕಥೆ' ಅಜಿತ್-ಭೂಮಿ! ಇದು ಮಹಾಸಂಗಮ!

'ಸ್ನೇಹದ ಕಡಲಲ್ಲಿ' ಧಾರಾವಾಹಿ ಶಿವರಾಜ್‌ ತಂಗಿ ಮದುವೆ ಆಗಲಿದೆಯಾ? ಹೀಗೊಂದು ಸಂಭ್ರಮದ ವಿಡಿಯೋ ರಿಲೀಸ್‌ ಆಗಿದ್ದು, 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿ ಅಜಿತ್‌, ಭೂಮಿ ಎಂಟ್ರಿಯಾಗಿದೆ. 

1 Min read
Padmashree Bhat
Published : Jul 18 2025, 04:33 PM IST| Updated : Jul 18 2025, 04:38 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಇಂದ್ರಜಿತ್‌, ಪಲ್ಲವಿ ಮದುವೆಯಾಗಿದೆ. ಆದರೆ ಮೊದಲ ರಾತ್ರಿಯ ದಿನವೇ ಇಂದ್ರಜಿತ್‌ ಎಂಥ ನೀಚ, ದುಷ್ಟ ಎನ್ನೋದು ಪಲ್ಲವಿಗೆ ಗೊತ್ತಾಗಿತ್ತು. ಹೀಗಾಗಿ ಅವಳು ಗಂಡನ ಮನೆ ಬಿಟ್ಟು ಹೊರಗಡೆ ಬಂದಳು.

25
Image Credit : Asianet News

ಗಂಡನ ಮನೆಯಿಂದ ಹೊರಗಡೆ ಬಂದ ಪಲ್ಲವಿಗೆ ಶಿವರಾಜ್‌ ಎನ್ನುವ ಅದ್ಭುತವಾದ ವ್ಯಕ್ತಿಯ ಸಹಾಯ ಸಿಕ್ಕಿತ್ತು. ಇವರಿಬ್ಬರ ನಿರ್ಮಲ ಸ್ನೇಹಕ್ಕೆ ಇಂದ್ರಜಿತ್‌ ಕಪ್ಪುಚುಕ್ಕೆ ಬರುವ ಹಾಗೆ ಮಾತನಾಡುತ್ತಿದ್ದನು.

Related Articles

Related image1
Lakshmi Nivasa Serial: ಇಷ್ಟುದಿನ ಬಚ್ಚಿಟ್ಟಿದ್ದ ವಿಶ್ವ-ಜಾಹ್ನವಿ ಸತ್ಯ ಒಂದೇ ಬಾರಿಗೆ ಸ್ಫೋಟ! ಮುಂದೇನ್‌ ಕಥೆ?
Related image2
Kannada Serial TRP: ಹಳೆ, ಹೊಸ ಧಾರಾವಾಹಿ ಮಧ್ಯೆ ಭರ್ಜರಿ ಕಾಳಗ! ಫಸ್ಟ್‌ ಬಂದೋರು ಯಾರು?
35
Image Credit : Asianet News

ಇಂದ್ರಜಿತ್‌ ಜೊತೆ ಸಂಬಂಧ ಇದೆ ಎಂದು ಅವನು ಪಲ್ಲವಿಗೆ ನಿತ್ಯವೂ ಕೊಂಕು ನುಡಿಯುತ್ತಿದ್ದನು. ಇದರಿಂದ ಶಿವರಾಜ್‌ಗಾಗಲೀ, ಪಲ್ಲವಿಗಾಗಲೀ ನೆಮ್ಮದಿಯಿಂದ ಬದುಕಲು ಆಗುತ್ತಿರಲಿಲ್ಲ. ಈಗ ಪಲ್ಲವಿ ಚಾರಿತ್ರ್ಯದ ಮೇಲೆ ಅಪಕೀರ್ತಿ ಬರುವ ಹಾಗೆ ಮಾಡಿದ್ದಾನೆ.

45
Image Credit : Asianet News

ಆ ದುಷ್ಟ ಇಂದ್ರಜಿತ್ ಒಂದೇ ಕಾಲೇಜಿನಲ್ಲಿ, ಒಂದೇ ರೂಮ್‌ನಲ್ಲಿ ಶಿವರಾಜ್‌, ಪಲ್ಲವಿ ಲಾಕ್‌ ಆಗುವಂತೆ ಮಾಡಿದ್ದನು. ಅಷ್ಟೇ ಅಲ್ಲದೆ ಪಲ್ಲವಿ ಚಳಿಯಿಂದ ನಡುಗುತ್ತಿದ್ದಳು. ಆಗ ಶಿವರಾಜ್‌ ತನ್ನ ಶರ್ಟ್‌ ಬಿಚ್ಚಿ ಪಲ್ಲವಿಗೆ ಕೊಟ್ಟನು. ಅಲ್ಲಿಗೆ ಪೊಲೀಸರು, ಪಲ್ಲವಿ ಮನೆಯವರು ಬರುವಂತೆ ಮಾಡಿದ ಇಂದ್ರಜಿತ್‌ ಎಲ್ಲರ ಮುಂದೆ ಪಲ್ಲವಿ-ಶಿವು ಸಂಬಂಧಕ್ಕೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದನು.

55
Image Credit : Asianet News

ಪ್ರತಿಸಲ ಕಾಪಾಡುವ ಶಿವರಾಜ್‌ನನ್ನು ಈ ಬಾರಿ ಕಾಪಾಡಬೇಕು ಎಂದು ಪಲ್ಲವಿ, “ನಾನು ಇಷ್ಟಪಟ್ಟು ಶಿವರಾಜ್‌ ಜೊತೆ ಇದ್ದೆ” ಎಂದು ಹೇಳಿದ್ದಾಳೆ. ಇದನ್ನು ಕೇಳಿ ಅವಳ ಮನೆಯವರು ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದಾರೆ. ಶಿವರಾಜ್‌ ತಂಗಿ ಮದುವೆ ನಡೆಯಲಿದೆ. ಇದೇ ಸೋಮವಾರದಿಂದ ರಾತ್ರಿ 8-9 ಗಂಟೆಗೆ ʼನಿನ್ನ ಜೊತೆ ನನ್ನ ಕಥೆʼ - ಸ್ನೇಹದ ಕಡಲಲ್ಲಿ "ಮಹಾಸಂಗಮ" ಪ್ರಸಾರ ಆಗಲಿದೆ. ʼನಿನ್ನ ಜೊತೆ ನನ್ನ ಕಥೆʼ ಧಾರಾವಾಹಿಯ ಅಜಿತ್‌, ಭೂಮಿ, ಶಿವರಾಜ್‌-ಪಲ್ಲವಿ ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ
ಸ್ಟಾರ್ ಸುವರ್ಣ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved