MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ನಾರಾಯಣಾಚಾರ್ಯರ ಹೆಂಡ್ತಿ, ಸೊಸೆಯಂದಿರು ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್!

ನಾರಾಯಣಾಚಾರ್ಯರ ಹೆಂಡ್ತಿ, ಸೊಸೆಯಂದಿರು ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್!

ರಾಮಾಚಾರಿ ಧಾರಾವಾಹಿ ಇದೀಗ 750 ಸಂಚಿಕೆಗಳನ್ನು ಪೂರೈಸಿದ್ದು, ಆ ಸಂಭ್ರಮವನ್ನು ಸೀರಿಯಲ್ ತಂಡ ಕೇಕ್ ಕತ್ತರಿಸಿ ಸೆಲೆಬ್ರೇಟ್ ಮಾಡಿದೆ.  

2 Min read
Pavna Das
Published : Dec 21 2024, 05:03 PM IST| Updated : Dec 21 2024, 05:21 PM IST
Share this Photo Gallery
  • FB
  • TW
  • Linkdin
  • Whatsapp
17

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ಅಂದ್ರೆ ಅದು ರಾಮಾಚಾರಿ. ಕಳೆದ ಮೂರು ವರ್ಷಗಳಿಂದ ಸೀರಿಯಲ್ ಭರ್ಜರಿ ಮನರಂಜನೆ ನೀಡುತ್ತಾ ಬಂದಿದೆ. ರಾಮಾಚಾರಿ ಹಾಗೂ ಚಾರು ಜೋಡಿ ವೀಕ್ಷಕರ ನೆಚ್ಚಿನ ಜೋಡಿಯಾಗಿರೋದಂತೂ ನಿಜಾ. ಇದೀಗ ಈ ಸೀರಿಯಲ್ ತಂಡ ಖುಷಿಯ ಮೂಡ್ ನಲ್ಲಿದೆ. 
 

27

ಹೌದು, ರಾಮಾಚಾರಿ ಧಾರಾವಾಹಿ (Ramchari Serial) 2022 ರ ಜನವರಿ 21 ರಂದು ಪ್ರಸಾರ ಆರಂಭಿಸಿದ್ದು, ಇದೀಗ ಸೀರಿಯಲ್ ಆರಂಭವಾಗಿ ಬರೋಬ್ಬರಿ 3 ವರ್ಷಗಳಾಗುತ್ತ ಬಂದಿದ್ದು, ಸದ್ಯ 750 ಸಂಚಿಕೆಯನ್ನು ಪೂರೈಸಿದ್ದು, ಆ ಸಂಭ್ರಮವನ್ನು ಸೀರಿಯಲ್ ತಂಡ ಜೊತೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದೆ. 
 

37

ರಾಮಾಚಾರಿ ಧಾರಾವಾಹಿಯಲ್ಲಿ ವಿಲನ್ ವೈಶಾಖ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಐಶ್ವರ್ಯ ವಿನಯ್ (Aishwarya Vinay) ಈ ಸಂಭ್ರಮದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ರಾಮಾಚಾರಿ ತಂಡಕ್ಕೆ ಕಂಗ್ರಾಜುಲೇಶನ್ಸ್. ಈ ಯೋಜನೆಯ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ. ಜೊತೆ ವೀಕ್ಷಕರು ಪ್ರೀತಿ ಕೊಟ್ಟದ್ದಕ್ಕೆ ಥ್ಯಾಂಕ್ಯೂ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ ಎಂದಿದ್ದಾರೆ. 
 

47

ಜೊತೆಗೆ ಈ ಸಂಭ್ರಮದಲ್ಲಿ ಜೊತೆಯಾಗಿ ತೆಗೆಸಿಕೊಂಡಂತಹ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ. ಸೀರಿಯಲ್ ನ ಟೆಕ್ನಿಕಲ್ ತಂಡದ ಜೊತೆಗೆ ನಾಯಕ ರಿತ್ವಿಕ್ ಕೃಪಾಕರ್, ನಾಯಕಿ ಮೌನ ಗುಡ್ಡೆಮನೆ, ಐಶ್ವರ್ಯ ವಿನಯ್, ಅಂಜಲಿ ಸುಧಾಕರ್, ಜಾನ್ಸಿ ಕಾವೇರಪ್ಪ, ವಿದ್ಯಾ ರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
 

57

ರಾಮಾಚಾರಿ ಸೀರಿಯಲ್ ನಲ್ಲಿ ನಾರಾಯಣಾಚಾರ್ಯರ ಹೆಂಡ್ತಿ, ಸೊಸೆಯರು ಅಂದ್ರೆ, ಸಂಸ್ಕಾರವಂತರು ಅಂತಾನೆ ಅರ್ಥ. ಪೂರ್ತಿಯಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಈ ತಾರೆಯರು, 750 ಸಂಚಿಕೆಗಳ ಸಂಭ್ರಮದಲ್ಲಿ ಶಾರ್ಟ್ ಡ್ರೆಸ್ ಗಳಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 
 

67

ಇನ್ನು ಸೀರಿಯಲ್ ಬಗ್ಗೆ ಹೇಳೋದಾದರೆ, ಮನೆಯವರೆಲ್ಲಾ ಜೊತೆಯಾಗಿ ಸೇರಿ ಸದ್ಯ ಕೃಷ್ಣ ಮತ್ತು ರುಕ್ಮಿಣಿ ಮದುವೆ ಮಾಡಿದ್ದಾಗಿದೆ. ಪಾಪದ ಹುಡುಗಿ ಎಂದು ಮನೆ ಸೇರಿಸಿಕೊಂಡ ರುಕ್ಮಿಣಿಯೇ ಈಗ ವಿಲನ್ ಆಗಿದ್ದಾಳೆ. ವೈಶಾಖ ಆಡಿಸಿದ ಆಟದಂತೆ ಆಡಲು, ಮನೆಯವರನ್ನ ಸೋಲಿಸೋದಕ್ಕೆನೇ ರುಕ್ಮಿಣಿ ಆ ಮನೆಗೆ ಕಾಲಿಟ್ಟಿದ್ದಾಳೆ. 
 

77

ಇನ್ನೊಂದೆಡೆ ತಪ್ಪೇ ಮಾಡದೆ ವೈಶಾಖ ಜೈಲು ಸೇರಿದ್ದಾಳೆ ಎನ್ನುವ ಮನೆಯವರು, ಅದನ್ನ ಪರಿಶೀಲಿಸಲು ತೆರಳಿದ್ದಾನೆ ರಾಮಾಚಾರಿ. ಇನ್ನು ವೈಶಾಖ ಜೈಲಿನಿಂದ ಹೊರ ಬಂದು, ಇನ್ನೂ ಏನೆಲ್ಲಾ ಕಿತಾಪತಿ ನಡೆಯುತ್ತೋ? ಅಥವಾ ರುಕ್ಮಿಣಿಗೆ ತನ್ನ ತಂದೆ -ತಾಯಿಯ ಸಾವಿಗೆ ಚಾರುನೇ ಕಾರಣ ಅನ್ನೋದು ಗೊತ್ತಾಗಿ ಮುಂದೇನು ಆಗುತ್ತೋ ಅನ್ನೋದನ್ನು ಕಾದು ನೋಡಬೇಕು. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕನ್ನಡ ಧಾರಾವಾಹಿ
ಮೌನ ಗುಡ್ಡೆಮನೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved