MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ನಟ ವಿಜಯ್ ಸೂರ್ಯ ಮನೆಯಲ್ಲಿ ನಡೆದ ಲಕ್ಷ್ಮೀ ಪೂಜೆಯಲ್ಲಿ ಮಿಂಚಿದ ಕಿರುತೆರೆಯ ಮಹಾಲಕ್ಷ್ಮಿಯರು

ನಟ ವಿಜಯ್ ಸೂರ್ಯ ಮನೆಯಲ್ಲಿ ನಡೆದ ಲಕ್ಷ್ಮೀ ಪೂಜೆಯಲ್ಲಿ ಮಿಂಚಿದ ಕಿರುತೆರೆಯ ಮಹಾಲಕ್ಷ್ಮಿಯರು

ದೃಷ್ಟಿಬೊಟ್ಟು ಸೀರಿಯಲ್ ನಟ ವಿಜಯ್ ಸೂರ್ಯ ಮನೆಯಲ್ಲಿ ಪ್ರತಿವರ್ಷದಿಂದ ಈ ವರ್ಷವೂ ಅದ್ಧೂರಿಯಾಗಿ ಈ ಶುಕ್ರವಾರ ಲಕ್ಷ್ಮೀ ಪೂಜೆ ನಡೆಸಿದ್ದು, ಕಿರುತೆರೆಯ ಮಹಾಲಕ್ಷ್ಮಿಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

2 Min read
Pavna Das
Published : Aug 31 2025, 11:31 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಅಗ್ನಿ ಸಾಕ್ಷಿಯಲ್ಲಿ ಡಿಂಪಲ್ ಹುಡುಗ, ಚಾಕಲೇಟ್ ಬಾಯ್ ಸಿದ್ಧಾರ್ಥ್ ಆಗಿ ಗಮನ ಸೆಳೆದ ನಟ ವಿಜಯ್ ಸೂರ್ಯ, ಇದೀಗ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ದತ್ತ ಭಾಯ್ ಆಗಿ ಮಿಂಚುತ್ತಿದ್ದಾರೆ. ನಟನೆಯಲ್ಲಿ ಬ್ಯುಸಿಯಾಗಿರುವ ವಿಜಯ್ ಅದರ ಜೊತೆಗೆ ತಮ್ಮ ಶಾಸ್ತ್ರ, ಸಂಪ್ರದಾಯ ಮತ್ತು ಹಬ್ಬಗಳನ್ನು ಮರೆತಿಲ್ಲ.

27
Image Credit : Instagram

ವಿಜಯ್ ಸೂರ್ಯ ಮನೆಯಲ್ಲಿ ಪ್ರತಿವರ್ಷ ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಅದರಂತೆ ಈ ವರ್ಷ ಕೂಡ ಅದ್ಧೂರಿಯಾಗಿ ಲಕ್ಷ್ಮೀ ಪೂಜೆ ಇತ್ತೀಚೆಗೆ ನಡೆದಿತ್ತು, ಕಿರುತೆರೆಯ ಮಹಾಲಕ್ಷ್ಮೀಯರು ಸೇರಿ, ದೃಷ್ಟಿ ಬೊಟ್ಟು ತಂಡದ ಎಲ್ಲಾ ನಟ-ನಟಿಯರು ಕೂಡ ವಿಜಯ್ ಮನೆಯಲ್ಲಿ ನಡೆದ ಹಬ್ಬದಲ್ಲಿ ಭಾಗಿಯಾಗಿದ್ದರು.

Related Articles

Related image1
Kannada Serial TRP: ಹಳೆ, ಹೊಸ ಧಾರಾವಾಹಿ ಮಧ್ಯೆ ಭರ್ಜರಿ ಕಾಳಗ! ಫಸ್ಟ್‌ ಬಂದೋರು ಯಾರು?
Related image2
Varamahalakshmi 2025: ನಟ ಯಶ್‌, ರಾಧಿಕಾ ಪಂಡಿತ್‌, ಅದಿತಿ ಪ್ರಭುದೇವ ಮನೆಯಲ್ಲಿ ಭರ್ಜರಿ ಹಬ್ಬ; Photos
37
Image Credit : Instagram

ಹಬ್ಬದ ಸಂಭ್ರಮದಲ್ಲಿ ಕಿರುತೆರೆಯ ನಟಿಯರಾದ ಹಿರಿಯ ನಟಿ ವಾಣಿಶ್ರೀ, ಅನುಪಮಾ ಗೌಡ, ಕೃಷಿ ತಾಪಂಡ, ಇಶಿತಾ ವರ್ಷ, ಮುರುಗಾ, ಹಾಗೂ ದೃಷ್ಟಿ ಬೊಟ್ಟು ಧಾರಾವಾಹಿಯ ನಟ-ನಟಿಯರಾದ ಅರ್ಪಿತಾ ಮೋಹಿತೆ, ತನ್ಮಯಾ ಕಷ್ಯಪಾ, ಮೋಕ್ಷಿತಾ ವಷಿಷ್ಟ, ಧನ್ಯಾ ಪಾಟೀಲ್, ಗೌತಮಿ ಜಯರಾಮ್, ಅಮೃತಾ ಮೂರ್ತಿ ಭಾಗವಹಿಸಿದ್ದರು.

47
Image Credit : Instagram

ಹಿರಿಯ ನಟಿ ವಾಣಿಶ್ರೀ ಅವರು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಬ್ಬದ ಸಂಭ್ರಮದ ಫೋಟೊಗಳನ್ನು ಸೆರೆ ಹಿಡಿದು, ಶೇರ್ ಮಾಡಿದ್ದಾರೆ. ಹಬ್ಬದಲ್ಲಿ ಭಾಗಿಯಾದ ನಟಿಯರ ಜೊತೆಗಿನ ಫೋಟೊ, ಬಳೆ ಶಾಸ್ತ್ರದ ಫೋಟೊ ಹಾಗೂ ಇತರ ಸಂಭ್ರಮದ ಫೋಟೊಗಳನ್ನು ಹಂಚಿಕೊಂಡು ಅದರ ಜೊತೆಗೆ ನಟ ವಿಜಯ್ ಸೂರ್ಯಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

57
Image Credit : Instagram

ಕುಟುಂಬ ಎಂದರೆ ಒಂದು ಮನೆಯನ್ನು ಮೀರಿ ವಿಸ್ತರಿಸಬಹುದು. ಅದು ಯಾವಾಗಲೂ ನಾವು ನಮ್ಮ ಮನೆಗೆ ಬರುತ್ತಿದ್ದೇವೆ ಎನ್ನುವ ಭಾವನೆಯನ್ನು ಸಹ ನೀಡುತ್ತದೆ. ವಿಜಯ್ ನೀವು ಲಕ್ಷ್ಮಿ ಪೂಜೆಗೆ ಆಹ್ವಾನಿಸಿದಾಗ ನಮ್ಮದೇ ಕುಟುಂಬ ಎಂದೇ ಅನಿಸಿತು.

67
Image Credit : Instagram

ನಾನು ಈ ಉದ್ಯಮದಲ್ಲಿ ಸಂಪರ್ಕದಲ್ಲಿರೋದು ಬಹಳ ಕಡಿಮೆ ಜನರೊಂದಿಗೆ. ನಾವು ದಶಕದಿಂದ ಒಬ್ಬರಿಗೊಬ್ಬರು ಪರಿಚಿತರು. ನೀವು ನನಗೆ ತಿಳಿದಿರುವ ಅತ್ಯಂತ ಅದ್ಭುತ ಮನುಷ್ಯ. ತುಂಬಾ ವೃತ್ತಿಪರ, ಸಮಯಪ್ರಜ್ಞೆ, ಪ್ರತಿಭಾನ್ವಿತ. ನಿಮ್ಮ ಭವಿಷ್ಯಕ್ಕೆ ನನ್ನ ಎಲ್ಲಾ ಶುಭಾಶಯಗಳು. ಆದರೆ ಇನ್ನೂ ಮುಂದೆ ನಿಮ್ಮ ತಾಯಿಯನ್ನು ಪ್ರೀತಿಸುತ್ತೇನೆ. ಈ ಎಲ್ಲಾ ಮೌಲ್ಯಗಳನ್ನು ನಿಮಗೆ ನೀಡಿದ್ದಕ್ಕಾಗಿ ಮತ್ತು ನಿಮಗೆ ರಕ್ಷಣೆಯಾಗಿರುವುದಕ್ಕೆ. ಥ್ಯಾಂಕ್ಯೂ ಎಂದು ವಾಣಿಶ್ರೀ ಬರೆದುಕೊಂಡಿದ್ದಾರೆ.

77
Image Credit : Instagram

ವರಮಹಾಲಕ್ಷ್ಮೀ ಪೂಜೆಯೂ ಕಳೆದು ಹಲವು ದಿನಗಳೇ ಆಗಿದೆ. ಆದರೆ ವಿಜಯ್ ಸೂರ್ಯ ಮನೆಯಲ್ಲಿ ಯಾವಾಗಲೂ ಅದನ್ನು ಬೇರೆ ದಿನದಲ್ಲಿಯೇ ಆಚರಿಸುತ್ತಾರೆ. ಜೊತೆಗೆ ಕನ್ನಡ ಕಿರುತೆರೆಯ ಎಲ್ಲಾ ತಾರೆಯರನ್ನು, ತಾವು ನಟಿಸುತ್ತಿರುವ ಸೀರಿಯಲ್ ತಂಡವನ್ನು ಸಹ ಆಹ್ವಾನಿಸಿ ಸತ್ಕರಿಸುತ್ತಾರೆ. ಕಳೆದ ವರ್ಷವೂ ಬಹಳ ಸಂಭ್ರಮದಿಂದ ಹಬ್ಬ ನಡೆದಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ವಿಜಯ್ ಸೂರ್ಯ
ನಟ ಸೂರ್ಯ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Gowri Shankara: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಖಡಕ್ ಡಿಸಿ ಆಗಿ ಎಂಟ್ರಿ ಕೊಟ್ಟ ಅಶ್ವಿನಿ
Recommended image2
‘ರಾಜಕುಮಾರಿ’ ಧಾರಾವಾಹಿ ನಟಿ ಗಗನ ಭಾರಿ ನಟನೆಯ ಕುರಿತು ವೀಕ್ಷಕರ ಅಸಮಾಧಾನ
Recommended image3
ದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?
Related Stories
Recommended image1
Kannada Serial TRP: ಹಳೆ, ಹೊಸ ಧಾರಾವಾಹಿ ಮಧ್ಯೆ ಭರ್ಜರಿ ಕಾಳಗ! ಫಸ್ಟ್‌ ಬಂದೋರು ಯಾರು?
Recommended image2
Varamahalakshmi 2025: ನಟ ಯಶ್‌, ರಾಧಿಕಾ ಪಂಡಿತ್‌, ಅದಿತಿ ಪ್ರಭುದೇವ ಮನೆಯಲ್ಲಿ ಭರ್ಜರಿ ಹಬ್ಬ; Photos
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved