ಕನ್ನಡ ಕಿರುತೆರೆಗೆ ನಟರಾಗಿ ಎಂಟ್ರಿ ಕೊಟ್ಟು ನಿರ್ಮಾಪಕರಾದವರು ಇವ್ರು.....
ಬಣ್ಣದ ಲೋಕಕ್ಕೆ ಕಾಲಿಡುವುದು ಸ್ವಲ್ಪ ಕಷ್ಟ. ಆದರೆ ಕಾಲಿಟ್ಟ ಮೇಲೆ ಅಲ್ಲೇ ಉಳಿದುಕೊಳ್ಳುವುದು ಮತ್ತೊಂದು ಸಾಹಸ. ನಟನಾಗಿ ಕೆಲವು ವರ್ಷಗಳ ಕಾಲ ಮಾತ್ರ ಫೇಮ್ ಇರುತ್ತದೆ. ಆದರೆ ನಿರ್ಮಾಪಕರಾಗಿ ಸದಾ ಜೀವಿಸುತ್ತಾರೆ. ನಿರ್ಮಾಪಕರಾಗಿರುವ ನಟ, ನಟಿಯರಿವರು.
ರಮೇಶ್ ಅರವಿಂದ್: ನಟ ರಮೇಶ್ ಅರವಿಂದ್ (Ramesh Aravind) ಬಿಗ್ ಬಜೆಟ್ ಸಿನಿಮಾಗಳು ಮಾತ್ರವಲ್ಲದೇ ಧಾರಾವಾಹಿಗಳನ್ನೂ ನಿರ್ಮಿಸುತ್ತಾರೆ. ನಂದಿನಿ (Nandini) ಎರಡನೇ ಭಾಗ ನಿರ್ಮಾಣ ಮಾಡಿದ ರಮೇಶ್, ಸದ್ಯ ಸುಂದರಿ (Sundari) ಧಾರಾವಾಹಿಗೆ ಬಂಡವಾಳ ಹಾಕಿದ್ದಾರೆ.
ಶ್ರುತಿ ನಾಯ್ಡು: ನೂರಾರು ಧಾರಾವಾಹಿಗಳಲ್ಲಿ ನಟಿಸಿರುವ ಶ್ರುತಿ ನಾಯ್ಡು (Shruti Naidu) ದೇವಿ, ಮಹಾದೇವಿ (Mahadevi), ಬ್ರಹ್ಮಗಂಟು, ಮನಸ್ಸೆಲ್ಲಾ ನೀನಿ (Manasella Nene), ಯಾರೇ ನೀ ಮೋಹಿನಿಗೆ ಬಂಡವಾಳ ಹಾಕಿದ್ದಾರೆ.
ಸ್ವಪ್ನ ಕೃಷ್ಣ: ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಸ್ವಪ್ನ (Swapna Krishna) ಸುಬ್ಬಲಕ್ಷ್ಮಿ ಸಂಸಾರ ನಿರ್ಮಾಣ ಮಾಡಿದ್ದಾರೆ ಹಾಗೂ ಈಗ ಸತ್ಯ (Sathya) ಧಾರಾವಾಹಿಗೆ ಬಂಡವಾಳ ಹಾಕಿದ್ದಾರೆ. ಕಿಚ್ಚ ಸುದೀಪ್ ಅವರ ಪೈಲ್ವಾನ್ (Pailwan) ಚಿತ್ರವನ್ನೂ ಸ್ವಪ್ನ ಅವರೇ ನಿರ್ಮಾಣ ಮಾಡಿದ್ದು.
ದಿಲೀಪ್ ರಾಜ್: ಆರ್ಜೆ ಆಗಿ ಕೆಲಸ ಮಾಡಿದ ದಿಲೀಪ್ (Dilip Raj) ವಿದ್ಯಾ ವಿನಾಯಕ, ಪಾರು (Paru) ಮತ್ತು ಹಿಟ್ಲರ್ ಕಲ್ಯಾಣ (Hitlery Kalyana) ನಿರ್ಮಾಣ ಮಾಡುತ್ತಿದ್ದಾರೆ.
ನಿರ್ಮಲಾ ಚೆನ್ನಪ್ಪ: ರಾಜ್ಯ ಪ್ರಶಸ್ತಿ ಪಡೆದಿರುವ ನಟಿ ನಿರ್ಮಲಾ ಚೆನ್ನಪ್ಪ (Niramapa Chennappa) ಅವರು ಕನ್ನಡ ಸಂಗೀತ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಾರೆ. ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ನಲ್ಲಿ ಹೆಚ್ಚಾಗಿ ಅವಕಾಶ ನೀಡುತ್ತಾರೆ.
ಜಗನ್ನಾಥ್ ಚಂದ್ರಶೇಖರ್: ಸೀತಾ ವಲ್ಲಭ ಧಾರಾವಾಹಿಯಲ್ಲಿ ನಟಿಸುವಾಗ ಜಗನ್, 'ರಕ್ಷಾ ಬಂಧನ' ನಿರ್ಮಾಣ ಮಾಡಿದ್ದರು, ಆನಂತರ ಈಗ ಅತಿ ಹೆಚ್ಚು ಟಿಆರ್ಪಿ ಪಡೆಯುತ್ತಿರುವ ಲಕ್ಷಣ ಧಾರಾವಾಹಿಯಲ್ಲಿಯೂ ನಟಿಸಿ, ನಿರ್ಮಾಣದ ಹೊಣೆಯೂ ಹೊತ್ತಿದ್ದಾರೆ.
ರಕ್ಷ್: ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಾ ನಟ ವೇದಾಂತ್ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸಂಪೂರ್ಣ ನಿರ್ಮಾಣ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.