MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನಟ ತಾಂಡವ್‌ರಾಮ್ ಹಿನ್ನೆಲೆಯೇನು? ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿದ್ದೇಕೆ? ಇಂಚಿಂಚು ಮಾಹಿತಿ..

ನಟ ತಾಂಡವ್‌ರಾಮ್ ಹಿನ್ನೆಲೆಯೇನು? ನಿರ್ದೇಶಕ ಭರತ್ ಮೇಲೆ ಗುಂಡು ಹಾರಿಸಿದ್ದೇಕೆ? ಇಂಚಿಂಚು ಮಾಹಿತಿ..

ಕನ್ನಡ ಧಾರಾವಾಹಿ ನಟ ತಾಂಡವ್‌ರಾಮ್ ಅವರು 'ದೇವನಾಂಪ್ರಿಯ' ಚಿತ್ರದ ನಿರ್ದೇಶಕ ಭರತ್ ನಾವುಂದ ಅವರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ಆದರೆ, ಈ ತಾಂಡವ್ ರಾಮ್ ಯಾರು, ಆತನ ಹಿನ್ನೆಲೆಯೇನು ಹಾಗೂ ಧಾರಾವಾಹಿಯಿಂದ ಸಿನಿಮಾಗೆ ಹೇಗೆ ಬಂದರು, ಯಾವ್ಯಾವ ಸಿನಿಮಾ ಮಾಡಿದ್ದಾರೆ? ಇದೀಗ ಘಟನೆಗೆ ಕಾರಣವಾದ ಅಂಶಗಳೇನು ಎಂನ ಮಾಹಿತಿ ಇಲ್ಲಿದೆ ನೋಡಿ..

3 Min read
Author : Sathish Kumar KH
Published : Nov 19 2024, 03:09 PM IST
Share this Photo Gallery
  • FB
  • TW
  • Linkdin
  • Whatsapp
19

ಕನ್ನಡ ಕಿರುತೆರೆಯ ಧಾರಾವಾಹಿಗಳು ಹಾಗೂ ಕೆಲವು ಸಿನಿಮಾಗಳಲ್ಲಿಯೂ ನಾಯಕ ನಟ ತಾಂಡವ್‌ರಾಮ್ @ ತಾಂಡವೇಶ್ವರ ಅವರು ಮೂಲತಃ ಹಾಸನ ಜಿಲ್ಲೆಯವರು. ಜೋಡಿ ಹಕ್ಕಿ ಧಾರಾವಾಹಿಯ ಮೂಲಕ ಕರ್ನಾಟಕದ ಜನತೆಗೆ ಹಳ್ಳಿ ಹುಡುಗನಾಗಿ ಭಾರೀ ಇಷ್ಟವಾಗಿದ್ದರು. ಇದಾದ ನಂತರ ಧಾರಾವಾಹಿ ತಂದುಕೊಟ್ಟ ಖ್ಯಾತಿಯನ್ನು ಇಟ್ಟುಕೊಂಡು ಸಿನಿಮಾಗಳಲ್ಲಿಯೂ ನಟಿಸಲು ಮುಂದಾಗಿದ್ದರು. ಹೀಗಾಗಿ, ದೇವನಾಂಪ್ರಿಯ ಸಿನಿಮಾ ಮಾಡುವುದಕ್ಕೆ ನಿರ್ದೇಶಕ ಭರತ್ ಅವರೊಂದಿಗೆ ಸಾಥ್ ನೀಡಿದ್ದಾರೆ. 

29

ಇನ್ನು ನಾಯಕನಾಗಿ ಮೊದಲ ಸಿನಿಮಾದಲ್ಲಿ ನಟಿಸಬೇಕಿದ್ದರಿಂದ ಸ್ವತಃ ನಟನೇ ನಿರ್ದೇಶಕರಿಗೆ ಹಣ ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರಿಂದ 6 ಲಕ್ಷ ರೂ. ಹಣವನ್ನೂ ಕೊಟ್ಟಿದ್ದಾರೆ. ಆದರೆ, ಇಲ್ಲಿ ನಿರ್ದೇಶಕ ಭರತ್ ಸಿನಿಮಾ ಮಾಡೊಲ್ಲ ಎಂದು ಹೇಳಿದ ನಂತರ ಹಣ ವಾಪಸ್ ಕೊಡು ಎಂದರೂ ಕೊಡುವುದಿಲ್ಲ ಎಂದು ಹೇಳಿ ನಟನಿಗೆ ಕೋಪ ಬರಲು ಕಾರಣವಾಗಿದ್ದಾರೆ. ಇದನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಸ್ವತಃ ತಾನೇ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಯತ್ನ ಮಾಡಿ ಇದೀಗ ಕಂಬಿ ಎಣಿಸುವಂತಹ ಪರಿಸ್ಥಿತಿ ತಂದಿಟ್ಟುಕೊಂಡಿದ್ದಾರೆ.

39

ಹಾಸನದಿಂದ ಬಂದು ಬೆಂಗಳೂರಿನ ಚಂದ್ರಲೇಔಟ್‌ನಲ್ಲಿರುವ ನಟ ತಾಂಡವೇಶ್ವರ ಹಾಗೂ ಚಲನಚಿತ್ರ ನಿರ್ದೇಶಕ ಭರತ್ ನವುಂದ ಮೊದಲಿನಿಂದಲೂ ಪರಿಚಯಸ್ಥರು. ದೇವನಾಂಪ್ರಿಯ ಎಂಬ ಚಲನಚಿತ್ರ ನಿರ್ದೇಶಿಸುವ ವಿಚಾರವಾಗಿ ಮಾತುಕತೆ ನಡೆಸುತ್ತಿದ್ದರು. ಸದ್ಯಕ್ಕೆ ಯಾರೂ ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರು ಸಿಕ್ಕಿರಲಿಲ್ಲ. ಹೀಗಾಗಿ, ನಟ ತಾಂಡವೇಶ್ವರ್ ಅವರೇ ಹಂತ ಹಂತವಾಗಿ ಒಟ್ಟು 6 ಲಕ್ಷ ರೂಪಾಯಿಗಳನ್ನು ಈವರೆಗೆ ನಿರ್ದೇಶಕರಾದ ಭರತ್ ಅವರಿಗೆ ನೀಡಿದ್ದಾರೆ. ನಿಮ್ಮ ಕಥೆ ಹಾಗೂ ನಿರ್ದೇಶನದ ಕಾರ್ಯಕ್ಕೆ ಇದನ್ನು ಬಳಸಿಕೊಳ್ಳಿ, ಮುಂದೆ ನಿರ್ಮಾಪಕರು ಸಿಕ್ಕಿದ ನಂತರ ಸಿನಿಮಾ ಮಾಡೋಣ ಎಂದು ಹೇಳಿಕೊಂಡಿದ್ದರು.

49

ಇದೀಗ ದೇವನಾಂಪ್ರಿಯ ಸಿನಿಮಾಗೆ ನಿರ್ಮಾಕರಾಗಿ ಹಾಸನದವರಾದ ಕುಮಾರಸ್ವಾಮಿ ಅವರು ಹಣ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಈವರೆಗೆ ಚಿತ್ರಕ್ಕೆ ನಿರ್ಮಾಪಕರು ಹಣ ಒದಗಿಸುತ್ತಿದ್ದುದ್ದರಿಂದ ಹಾಗೂ ಈಗಾಗಲೇ ಚಿತ್ರ ನಿರ್ದೇಶನ ಪ್ರಾರಂಭವಾಗಿ 2 ವರ್ಷ ಕಳೆದಿದೆ. ಆದರೆ, ಸಹ ನಿರ್ದೇಶಕರು ತ್ವರಿತಗತಿಯಲ್ಲಿ ಚಿತ್ರ ನಿರ್ದೇಶನವನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ, ನಟ ತಾಂಡವೇಶ್ವರ್ ನೀಡಿರುವ 6 ಲಕ್ಷ ರೂಪಾಯಿಗಳನ್ನು ಮರಳಿಸುವಂತೆ ಕೇಳುತ್ತಿದ್ದರು.

59

ದಿನಾಂಕ:18/11/2024 ರಂದು ಚಂದ್ರಲೇಔಟ್ ಪೊಲೀಸ್ ಠಾಣೆಯ ಸರಹದ್ದಿನ ಬಸವೇಶ್ವರ ಬಡಾವಣೆಯಲ್ಲಿ ನಿರ್ಮಾಪಕ ಕುಮಾರಸ್ವಾಮಿ ಅವರ ಕಛೇರಿಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸುವ ಸಲುವಾಗಿ ಸಂಜೆ 6.30 ಗಂಟೆಗೆ ಈ ಮೂವರು ಮತ್ತು ಇನ್ನೂ ಕೆಲವರು ಸಭೆ ಸೇರಿದ್ದರು. ಹಣಕಾಸಿನ ವಿಚಾರ ಮಾತನಾಡುತ್ತಿದ್ದ ಸಂಧರ್ಭದಲ್ಲಿ ತಾಂಡವೇಶ್ವರ್ ಅವರು ತಮ್ಮ ಬಂದೂಕಿನಿಂದ ನಿರ್ದೇಶಕರಾದ ಭರತ್ ನವುಂದ ರವರ ಕಡೆ ಗುಂಡು ಹಾರಿಸಿದ್ದರು. ಆಗ ನಿರ್ದೇಶಕ ಭರತ್ ತಪ್ಪಿಸಿಕೊಂಡಿದ್ದರಿಂದ ಗುಂಡು ಕಛೇರಿ ಕೊಠಡಿಯ ಆರ್.ಸಿ.ಸಿ ಗೋಡೆಗೆ ತಗುಲಿರುತ್ತದೆ. ನಂತರ ಭರತ್ ನವುಂದ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಠಾಣಾ 500 109 2.2.2 3, 27, 30 ಸೆಕ್ಷನ್  ಅಡಿ ಕೇಸ್ ದಾಖಲು ಆಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

69

ದೇವನಾಂಪ್ರಿಯ ಸಿನಿಮಾದ ಬಗ್ಗೆ: ಕನ್ನಡ ಚಿತ್ರರಂಗದ ಸ್ಟಾರ್ ನಟ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ಮುಗಿಲ್‌ಪೇಟೆ ಚಿತ್ರ ನಿರ್ದೇಶಿಸಿದ್ದ ಭರತ್ ಎಸ್. ನಾವುಂದ ಅವರು ದೇವನಾಂಪ್ರಿಯ ಕನ್ನಡ-ತೆಲುಗು ದ್ವಿಭಾಷಾ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದರು. ಇದೊಂದು ಕೌಟುಂಬಿಕ ಪ್ರತೀಕಾರದ ಕಥೆಯಾಗಿದ್ದು, ಪೂರ್ಣ ಪ್ರಮಾಣದ ನಾಯಕನಾಗಿ ತಾಂಡವ್ ರಾಮ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಜೋಡಿ ಹಕ್ಕಿ ಧಾರಾವಾಹಿ ಮತ್ತು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ ತಾಂಡವ್ ರಾಮ್, ಈ ಹಿಂದೆ ಪೋಷಕ ಪಾತ್ರಗಳಲ್ಲಿ ಕೆಲವು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ನಿರ್ದೇಶಕ ಭರತ್ ಅವರೊಂದಿಗಿನ ಈ ಚಿತ್ರದಲ್ಲಿ ಅವರು ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದು, ಕನಿಷ್ಠ 20 ಪ್ರಮುಖ ನಟರನ್ನು ಸಿನಿಮಾಗೆ ಕರೆತರಲು ನಿರ್ದೇಶಕರು ಉದ್ದೇಶ ಹೊಂದಿದ್ದರು. ಇದೀಗ ನಿರ್ದೇಶಕ ಮತ್ತು ನಟರ ಮದ್ಯೆ ನಡೆದ ಘಟನೆಯಿಂದ ಸಿನಿಮಾ ಬಹುತೇಕ ಸ್ಥಗಿತವಾಗಲಿದೆ ಎಂಬ ಸುಳಿವು ಸಿಕ್ಕಿದೆ.

79

ಸಿನಿಮಾ ನಿರ್ದೇಶಕ ಭರತ್ ನಾವುಂದ ಮಾಧ್ಯಮಗಳೊಂದಿಗೆ ಮಾತನಾಡಿ, ದೇವನಾಂಪ್ರಿಯ ನನ್ನ 3ನೇ ಸಿನಿಮಾ ಆಗಿದ್ದು, ಮೂರು ವರ್ಷದಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ತುಂಬಾ ಡಿಲೆ ಆಗ್ತಿದೆ ಅಂತ ನಾನೇ ಹೇಳಿದ್ದೆ. ಮೊನ್ನೆ ಜೂನ್ ನಲ್ಲಿ ಸೆಕೆಂಡ್ ಶೆಡ್ಯೂಲ್ ಆಗಿತ್ತು. ಟೆಕ್ನಿಷಿಯನ್ಸ್ ಗೆ ಪೇಮೆಂಟ್ ಆಗಿರಲಿಲ್ಲ. ಅವರ ಆಫೀಸ್ ಬಾಯ್ ನಿಂದ ಗನ್ ತರಿಸಿದ್ದರು. ನನ್ನ ಸ್ನೇಹಿತರ ಜೊತೆ ಎನ್.ಎಮ್.ಸುರೇಶ್ ಅವರಿಗೆ ತಿಳಿಸಿ ಕಂಪ್ಲೆಂಟ್ ಕೊಡಿಸಿದ್ದೆವು. ತಾಂಡವ್ ರಾಮ್ ಜೊತೆ ಮೂರು ವರ್ಷದಿಂದ  ನಾನಿದ್ದೇನೆ. ನಾನು ಸಾಲ ತಗೊಂಡಿಲ್ಲ. ಅವರ ಸಿನಿಮಾಗಾಗಿ ಕೆಲಸ ಮಾಡಿದ್ದೀನಿ. ಕೊಟ್ಟಿರುವ ಪೇಮೆಂಟ್ ವಾಪಸ್ ಕೊಡು ಅಂದ್ರೆ ಹೇಗೆ? ಸಿನಿಮಾ ಕಂಪ್ಲೀಟ್ ತಾಂಡವ್ ರಾಮ್ ಇಂಚಾರ್ಜ್ ತಗೊಂಡಿದ್ದರು ಎಂದು ಹೇಳಿದರು.

89

ಇನ್ನು ನನಗೆ ನಿರ್ಮಾಪಕರ ಟಚ್ ಇರಲಿಲ್ಲ. ಅಲ್ಪಸ್ವಲ್ಪ ದುಡ್ಡಲ್ಲೆ ಜೀವನ ನಡಿಬೇಕು. ಟೆಕ್ನಿಷಿಯನ್‌ಗೆ ಸಂಬಳ ಕೊಡದಿದ್ದರೆ ಜೀವನ ಹೇಗೆ ನಡೆಯುತ್ತದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಪೇಮೆಂಟ್ ವಾಪಸ್ ಕೊಡಿ ಅಂತಾರೆ ತಾಂಡವ್. ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಗನ್ ತಂದಿದ್ದಾರೆ. ಇದನ್ನು ಫಿಲಂ ಚೇಂಬರ್ ಅವರ ಗಮನಕ್ಕೂ ತಂದಿದ್ದೇವೆ. ಸದ್ಯ 40% ಸಿನಿಮಾ ಚಿತ್ರಿಕರಣ ಆಗಿದೆ. ತಾಂಡವ್ ಸಿನಿಮಾದ ಮುಂದಾಳತ್ವ ತಗೊಂಡಿದ್ದರು. ದೇವನಾಂಪ್ರಿಯ ಸಿನಿಮಾ ಮಾಡಲಿಕ್ಕೆ ಮೊದಲು ಅಪ್ರೊಚ್ ಮಾಡಿದ್ದೇ ತಾಂಡವ್. ನಿನ್ನೆ ಗಲಾಟೆಯಾದಾಗ ಮಲ್ಲಿಕಾರ್ಜುನ್ ಎಡಿಟರ್ ಸಹನಿರ್ದೇಶಕ ಚಲಪತಿ ಕ್ಯಾಮೆರಾಮೆನ್ ಶರ್ಮಾ, ನಿರ್ಮಾಪಕ ಕುಮಾರಸ್ವಾಮಿ, ನಟ ತಾಂಡವ್, ನಿರ್ದೇಶಕರಾದ ಭರತ್ ಎಲ್ಲರೂ ಇದ್ದೆವು ಎಂದು ನಿರ್ದೇಶಕ ಭರತ್ ತಿಳಿಸಿದರು.

99

ಜಾಯಿಂಟ್ ಫ್ಯಾಮಿಲಿ ಕಥೆ ಸಿನಿಮಾ ಚರಣ್ ರಾಜ್ ತಾರ ಧರ್ಮ ಚರಣ್ ರಾಜ್ ಸೇರಿ ಸುಮಾರು 28 ಜನ ನಟರಿದ್ದ ಸಿನಿಮಾ ದೇವನಾಂಪ್ರಿಯ. ಹಿಂದಿನ ಕಾಲದಲ್ಲಿ ನಿರ್ದೇಶಕ ಅಂದರೆ ಗುರು. ಇವತ್ತು ಫೈರ್ ಮಾಡುತ್ತಾರೆಂದರೆ ಏನ್ ಹೇಳೋದು. ಯಾವ ದಿಕ್ಕಿಗೆ ಹೋಗ್ತಿದೆ ಇಂದಿನ ನಟನ ವರ್ತನೆ. ತುಂಬಾ ಬೇಜಾರಾಗ್ತಿದೆ. ನನ್ನ ಹಣೆಗೆ ಗನ್ ಇಟ್ಟಿದ್ದರು. ಎಡಿಟರ್ ಬಂದು ಕೈ ಇಟ್ಟಾಗ ಬುಲೆಟ್ ಗೋಡೆಗೆ ಬಿದ್ದಿತು ಎಂದು ನಿರ್ದೇಶಕ ಭರತ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.

Latest Videos
Recommended Stories
Recommended image1
Karna Serial ರೋಚಕ ಎಪಿಸೋಡ್​: ಸೀರೆಯುಟ್ಟ ನೀರೆಯರ ಭರ್ಜರಿ ಫೈಟಿಂಗ್​- ಹಾರಿ ಹಾರಿ ಬಿದ್ದ ರೌಡಿಗಳು!
Recommended image2
ಮಹಿಳೆ ಜೊತೆ ಫ್ಲರ್ಟ್‌ ಮಾಡಿದ Sania Mirza ಮಾಜಿ ಪತಿ; 3ನೇ ಮದುವೆ ಮುರಿದಿದ್ರೆ ಸಾಕು ಎಂದ ನೆಟ್ಟಿಗರು
Recommended image3
ಜೈಲಿಗೆ ಬಂದ ಆರೋಗ್ಯ ಸಚಿವ! ಕೇಸ್​ನಲ್ಲಿ ಫಿಕ್ಸ್​- ಭ್ರಷ್ಟ ರಾಜಕಾರಣಿಗಳ ಬಟಾ ಬಯಲು ಮಾಡ್ತಿದ್ಯಾ Karna Serial?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved