MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss Varthur Santosh: ಭರ್ಜರಿಯಾಗಿ ಮಾಲಾಶ್ರೀಗೆ ಸೀಮಂತ ಮಾಡಿದ ಬಿಗ್‌ಬಾಸ್‌ ಸ್ಟಾರ್‌ ವರ್ತೂರ್‌ ಸಂತೋಷ್‌!

Bigg Boss Varthur Santosh: ಭರ್ಜರಿಯಾಗಿ ಮಾಲಾಶ್ರೀಗೆ ಸೀಮಂತ ಮಾಡಿದ ಬಿಗ್‌ಬಾಸ್‌ ಸ್ಟಾರ್‌ ವರ್ತೂರ್‌ ಸಂತೋಷ್‌!

ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ತಮ್ಮ ನೆಚ್ಚಿನ 'ಮಾಲಾಶ್ರೀ' ಎಂಬ ಹಳ್ಳಿಕಾರ್ ಹಸುವಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಈ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಹಸುವಿಗೆ ವಿಶೇಷ ಪೂಜೆ ಸಲ್ಲಿಸಿ, ತರಹೇವಾರಿ ತಿನಿಸುಗಳನ್ನು ಉಣಬಡಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ.

1 Min read
Author : Sathish Kumar KH
Published : Jun 08 2026, 08:08 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ಬಿಗ್ ಬಾಸ್ ಕನ್ನಡ ಸೀಸನ್ 10ರ ಖ್ಯಾತಿಯ ವರ್ತೂರು ಸಂತೋಷ್ ಅವರ ಹಳ್ಳಿಕಾರ್ ಹಸುಗಳ ಮೇಲಿನ ಪ್ರೀತಿ ಜಗಜ್ಜಾಹೀರು. ಇದೀಗ ತಮ್ಮ ಮನೆಯ ಹೆಣ್ಣು ಮಗಳಿಗೆ ಮಾಡುವಂತೆ, ತಮ್ಮ ನೆಚ್ಚಿನ ‘ಮಾಲಾಶ್ರೀ’ ಹೆಸರಿನ ಹಳ್ಳಿಕಾರ್ ಹಸುವಿಗೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡುವ ಮೂಲಕ ತಮ್ಮ ಅಪಾರ ಪ್ರಾಣಿಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Instagram

ಹಳ್ಳಿಕಾರ್ ತಳಿಯ ಹೆಮ್ಮೆಯ ಸಂರಕ್ಷಕನಾಗಿ ಗುರುತಿಸಿಕೊಂಡಿರುವ ಸಂತೋಷ್, ಗರ್ಭಿಣಿ ಹಸುವಿನ ಕೊಂಬುಗಳಿಗೆ ಸುಂದರವಾದ ಹೂವಿನ ದಂಡೆಗಳನ್ನು ಕಟ್ಟಿ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಹಳ್ಳಿಯ ಸಾಂಪ್ರದಾಯಿಕ ಶೈಲಿಯಲ್ಲೇ ಈ ಸೀಮಂತ ಕಾರ್ಯಕ್ರಮ ಜರುಗಿತು.

Related Articles

Related image1
ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಮನೆಯಲ್ಲಿ ಸಂಭ್ರಮ; ಹಳ್ಳಿಕಾರ್ ಹಸುವಿಗೆ ಅದ್ದೂರಿ ಸೀಮಂತ ಶಾಸ್ತ್ರ!
Related image2
Bigg Boss ರಕ್ಷಿತಾ ಶೆಟ್ಟಿ ಮಾತಿಗೆ ವರ್ತೂರು ಸಂತೋಷ್​ ಸಿಕ್ಕಾಪಟ್ಟೆ ಅಸಮಾಧಾನ: 2 ಲಕ್ಷದ ಕಥೆ ಏನಾಯ್ತು
36
Image Credit : Instagram

ಸೀಮಂತ ಶಾಸ್ತ್ರದ ಪ್ರಮುಖ ಆಕರ್ಷಣೆಯಾಗಿ ಗರ್ಭಿಣಿ ಹಸುವಿಗೆ ತರಹೇವಾರಿ ಹಣ್ಣುಗಳು, ಧಾನ್ಯಗಳು ಹಾಗೂ ನೆಚ್ಚಿನ ತಿನಿಸುಗಳನ್ನು ಉಣಬಡಿಸಲಾಯಿತು. ವರ್ತೂರು ಸಂತೋಷ್ ತಮ್ಮ ಕೈಯಾರೆ ಹಸುವಿಗೆ ತಿನಿಸುಗಳನ್ನು ತಿನ್ನಿಸಿ ಸಂಭ್ರಮಿಸಿದರು.

46
Image Credit : Instagram

ನಮ್ಮ ರಾಜ್ಯದ ದಕ್ಷಿಣ ಕರ್ನಾಟಕ ಮೂಲದ ನಾಟಿ ಹಸುವಿನ ತಳಿಯಾದ ‘ಹಳ್ಳಿಕಾರ್’ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದ ವರ್ತೂರು ಸಂತೋಷ್, ಬಿಗ್ ಬಾಸ್ ರಿಯಾಲಿಟಿ ಶೋಗೆ ರೈತರ ಕೋಟಾದಲ್ಲಿ ಎಂಟ್ರಿ ಕೊಟ್ಟಿದ್ದರು. ತಮ್ಮ ಹಳ್ಳಿ ಶೈಲಿಯ ಮಾತು ಹಾಗೂ ಹಳ್ಳಿಕಾರ್ ಮೇಲಿನ ಪ್ರೀತಿಯಿಂದಲೇ ಇಡೀ ಕರ್ನಾಟಕದ ಜನತೆಗೆ ಚಿರಪರಿಚಿತರಾದರು.

56
Image Credit : Instagram

ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಲಕ್ಷಾಂತರ ಬೆಲೆಬಾಳುವ ತಮ್ಮ ಹೋರಿಗಳನ್ನು ಕಿಚ್ಚು ಹಾಯಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವರ್ತೂರು ಸಂತೋಷ್ ಅವರ ಈ ಹಸುವಿನ ಸೀಮಂತ ಕಾರ್ಯಕ್ರಮದಲ್ಲೂ ಅಷ್ಟೇ ಕಳೆ ಇತ್ತು. ಸ್ಥಳೀಯ ರೈತರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.

66
Image Credit : Instagram

ಹಳ್ಳಿಕಾರ್ ಹಸುವಿನ ಸೀಮಂತ ಶಾಸ್ತ್ರದ ಸುಂದರ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಮೂಕಪ್ರಾಣಿಯೊಂದನ್ನು ತಮ್ಮದೇ ಕುಟುಂಬದ ಸದಸ್ಯೆಯಂತೆ ಕಂಡು ಸೀಮಂತ ಮಾಡಿರುವ ಸಂತೋಷ್ ಅವರ ಕಾರ್ಯಕ್ಕೆ ನೆಟ್ಟಿಗರು ಹಾಗೂ ಪ್ರಾಣಿಪ್ರೇಮಿಗಳು ಶ್ಲಾಘಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಟಿವಿ ಶೋ
Latest Videos
Recommended Stories
Recommended image1
'ಸಂತೂರ್‌ ಸೋಪ್‌..' ಅಂದಿದ್ದಕ್ಕೆ ವರ್ತೂರ್‌ ಸಂತೋಷ್‌ ಕ್ಷಮೆ ಕೇಳಿದ ರಕ್ಷಿತಾ, ಆಕೆಯ ಮನಸ್ಸು ಬಂಗಾರ ಎಂದ ನೆಟ್ಟಿಗರು!
Recommended image2
Happy Birthday Bangari…ಐಷಾರಾಮಿ ಹೊಟೇಲಲ್ಲಿ ಕಾವ್ಯಾ ಗೌಡ ಬರ್ತ್ ಡೇ ಸೆಲೆಬ್ರೇಶನ್
Recommended image3
Laughter Chefs 3: ಪೈಲ್ವಾನ್‌ ಜೊತೆ ಕುಸ್ತಿಯಾಡು ಎಂದು ಪತ್ನಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ! ಅಲ್ಲಿದ್ದವ್ರೆಲ್ಲ ಕಂಗಾಲು!
Related Stories
Recommended image1
ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಮನೆಯಲ್ಲಿ ಸಂಭ್ರಮ; ಹಳ್ಳಿಕಾರ್ ಹಸುವಿಗೆ ಅದ್ದೂರಿ ಸೀಮಂತ ಶಾಸ್ತ್ರ!
Recommended image2
Bigg Boss ರಕ್ಷಿತಾ ಶೆಟ್ಟಿ ಮಾತಿಗೆ ವರ್ತೂರು ಸಂತೋಷ್​ ಸಿಕ್ಕಾಪಟ್ಟೆ ಅಸಮಾಧಾನ: 2 ಲಕ್ಷದ ಕಥೆ ಏನಾಯ್ತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved