- Home
- Entertainment
- TV Talk
- ಬಿಗ್ ಬಾಸ್ 18ರಿಂದ ಗೆದ್ದ 50 ಲಕ್ಷ ರೂ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ, ವಿನ್ನರ್ನಿಂದ ವಿಶೇಷ ಘೋಷಣೆ
ಬಿಗ್ ಬಾಸ್ 18ರಿಂದ ಗೆದ್ದ 50 ಲಕ್ಷ ರೂ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ, ವಿನ್ನರ್ನಿಂದ ವಿಶೇಷ ಘೋಷಣೆ
ಬಿಗ್ ಬಾಸ್ 18ರಿಂದ ಗೆದ್ದ 50 ಲಕ್ಷ ರೂಪಾಯಿ ಬಹುಮಾನ ಹಣವನನ್ನು ತನ್ನ ಸಿಬ್ಬಂದಿಗಳ ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳುವುದಾಗಿ ವಿನ್ನರ್ ಘೋಷಿಸಿದ್ದಾರೆ. ಈ ನಿರ್ಧಾರ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಈ ಬಾರಿ ಬಿಗ್ ಬಾಸ್ 18ರ ಹಿಂದಿ ಆವೃತ್ತಿ ಮತ್ತಷ್ಟು ರೋಚಕವಾಗಿತ್ತು. ನಟ ಕರಣ್ ವೀರ್ ಮೆಹ್ರಾ, ವಿವಿಯನ್ ಡಿಸೇನಾ ಅವರನ್ನು ಸೋಲಿಸಿ ಬಿಗ್ ಬಾಸ್ 18 ಗೆದ್ದರು. ಟ್ರೋಫಿಯ ಜೊತೆಗೆ, ಕರಣ್ ಗೆ 50 ಲಕ್ಷ ರೂಪಾಯಿ ಬಹುಮಾನದ ಹಣ ಸಿಕ್ಕಿತು. ನಟ ಈ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಲು ನಿರ್ಧರಿಸಿದ್ದಾರೆ. ತಮ್ಮ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ ಈ ಹಣವನ್ನು ಬಳಸುವುದಾಗಿ ಕರಣ್ ಹೇಳಿದ್ದಾರೆ.
ಮಿಡ್-ಡೇ ಜೊತೆಗಿನ ಸಂದರ್ಶನದಲ್ಲಿ, ಬಹುಮಾನದ ಹಣದ ಬಗ್ಗೆ ಕೇಳಿದಾಗ, ಕರಣ್ ತಮ್ಮ ಹಿಂದಿನ ರಿಯಾಲಿಟಿ ಶೋ ಗೆಲುವಿನ ಹಣ ಇನ್ನೂ ಸಿಕ್ಕಿಲ್ಲ ಎಂದು ಹೇಳಿದರು. ಬಹುಮಾನ ಹಣ ಹೇಗೆ ಬಳಸಿಕೊಳ್ಳಬೇಕು ಅನ್ನೋದು ನಿರ್ಧರಿಸಿದ್ದೇನೆ. ತನ್ನ ಸಿಬ್ಬಂದಿಗಳ ಶಿಕ್ಷಣಕ್ಕೆ ಈ ಹಣವನ್ನು ಬಳಸಿಕೊಳ್ಳುತ್ತೇನೆ. ಇದಕ್ಕೆ ಕಾರ್ಯಸೂಚಿ ತಯಾರಿಸುತ್ತೇನೆ ಎಂದಿದ್ದಾರೆ.
“ನನಗೆ ಇನ್ನೂ ಖತ್ರೋಂ ಕೆ ಖಿಲಾಡಿ ಹಣ ಸಿಕ್ಕಿಲ್ಲ, ಆದರೆ ನನ್ನ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ ಹಣ ನೀಡಲು ಯೋಜಿಸಿದ್ದೇನೆ. ನಾನು ಇದನ್ನು ಸ್ವಲ್ಪ ಮಟ್ಟಿಗೆ ಈಗಾಗಲೇ ಮಾಡುತ್ತಿದ್ದೇನೆ, ಆದರೆ ಕೆಲವರು ಮುಂದೆ ಓದಬೇಕೆಂದು ಬಯಸುತ್ತಾರೆ, ಆದ್ದರಿಂದ ಅದಕ್ಕೆ ನಾನು ಪ್ರಾಯೋಜಕತ್ವ ನೀಡಲು ಯೋಜಿಸಿದ್ದೇನೆ” ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಅವರ ಅಭಿಮಾನಿಗಳು ವಿನ್ನರ್ ಕರಣ್ ವೀರ್ ಮೆಹ್ರಾ ಅವರ ಈ ಉದಾತ್ತ ಕಾರ್ಯವನ್ನು ಶ್ಲಾಘಿಸಿದರು. ಒಬ್ಬರು "ಗೆಲ್ಲಲು ಇದು ಒಂದು ಕಾರಣ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಕರಣ್ ಚಿನ್ನದ ಹೃದಯ ಹೊಂದಿರುವ ವ್ಯಕ್ತಿ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಒಂದು ಕಾರಣಕ್ಕಾಗಿ ರಾಜ. ನೀವು ತುಂಬಾ ಒಳ್ಳೆಯ ವ್ಯಕ್ತಿ ಕರಣ್. ಮೊದಲ ದಿನದಿಂದ ಬಿಗ್ ಬಾಸ್ ಮನೆಯಲ್ಲಿ ನಿಮ್ಮನ್ನು ಬೆಂಬಲಿಸಿದ್ದಕ್ಕೆ ನನಗೆ ಹೆಮ್ಮೆಯಿದೆ" ಎಂದು ಬರೆದಿದ್ದಾರೆ.
ಕರಣ್ ವೀರ್ ಮೆಹ್ರಾ ವಿವಿಯನ್ ಡಿಸೇನಾ ಮತ್ತು ರಜತ್ ದಲಾಲ್ ಅವರನ್ನು ಸೋಲಿಸಿ ಬಿಗ್ ಬಾಸ್ 18 ಗೆದ್ದರು. ನಟ ತಮ್ಮ ತಮಾಷೆ ಮತ್ತು ಮನರಂಜನೆಯ ವರ್ತನೆಯಿಂದ ವೀಕ್ಷಕರನ್ನು ಮಂತ್ರಮುಗ್ದೊಳಿಸಿದ್ದರು. ಅಭಿಮಾನಿಗಳು ದಿಗ್ವಿಜಯ್ ರಾಥಿ, ಚುಮ್ ದರಾಂಗ್ ಮತ್ತು ಶಿಲ್ಪಾ ಶಿರೋಡ್ಕರ್ ಅವರೊಂದಿಗಿನ ಅವರ ಬಲವಾದ ಸ್ನೇಹವನ್ನು ಮೆಚ್ಚಿದರು. ಕೆಲವು ಮನೆಮಂದಿ ವಿವಿಯನ್ ಅಥವಾ ರಜತ್ ಗೆಲ್ಲುತ್ತಾರೆ ಎಂದು ನಿರೀಕ್ಷಿಸಿದ್ದರು, ಆದ್ದರಿಂದ ಅವರ ಗೆಲುವು ಅವರಿಗೆ ಅಚ್ಚರಿ ಮೂಡಿಸಿತು.
ಕರಣ್ ವೀರ್ ಮೆಹ್ರಾ ಪ್ರಸಿದ್ಧ ಟೆಲಿವಿಷನ್ ನಟರಾಗಿದ್ದು, ದೀರ್ಘಕಾಲದ ಧಾರಾವಾಹಿ ಪವಿತ್ರಾ ರಿಷ್ಟಾದಲ್ಲಿನ ಪಾತ್ರದಿಂದ ಖ್ಯಾತಿ ಪಡೆದರು. ಅಂದಿನಿಂದ, ಅವರು ಬಾತೇಯಿನ್ ಕುಚ್ ಅನ್ಕಹೀ ಸಿ ಮತ್ತು ವೋ ತೋ ಹೈ ಅಲ್ಬೇಲಾ ಸೇರಿದಂತೆ ಹಲವಾರು ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಮತ್ತು ದ್ರೋಣ, ಮೇರೆ ಡ್ಯಾಡ್ ಕಿ ಮಾರುತಿ ಮತ್ತು ರಾಗಿಣಿ ಎಂಎಂಎಸ್ 2 ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಈ ಹಿಂದೆ ರೋಹಿತ್ ಶೆಟ್ಟಿ ಅವರ ಸ್ಟಂಟ್ ಆಧಾರಿತ ರಿಯಾಲಿಟಿ ಕಾರ್ಯಕ್ರಮ ಖತ್ರೋಂ ಕೆ ಖಿಲಾಡಿ ಗೆದ್ದಿದ್ದಾರೆ.