MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhare Serial: ಮಲ್ಲಿಗಾಗ್ತಿದ್ದ ಅವಮಾನಕ್ಕೆ ಬೆಂಕಿಯಾದ ಭೂಮಿ... ಶಕುಂತಲಾಗೆ ನಡುಕ ಶುರು

Amruthadhare Serial: ಮಲ್ಲಿಗಾಗ್ತಿದ್ದ ಅವಮಾನಕ್ಕೆ ಬೆಂಕಿಯಾದ ಭೂಮಿ... ಶಕುಂತಲಾಗೆ ನಡುಕ ಶುರು

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯನ್ನು ಅವಮಾನಿಸಿದ ಶಕುಂತಲಾ ಸ್ನೇಹಿತರಿಗೆ ಭೂಮಿ ಸರಿಯಾಗಿ ಪಾಠ ಮಾಡಿದ್ದು, ಇದೀಗ ಶಕುಂತಲಾಗೆ ನಡುಕ ಶುರುವಾಗಿದೆ. 

2 Min read
Pavna Das
Published : Jul 24 2025, 06:42 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಅಮೃತಧಾರೆ ಧಾರಾವಾಹಿಯಲ್ಲಿ  (Amruthadhare serial)ಭೂಮಿ ಗೌತಮ್ ಮಗುವಿನ ನಾಮಕರಣ ಕಾರ್ಯಕ್ರಮ ಏನೋ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಭೂಮಿ ಮನೆಯವರು ಅಲ್ಲದೇ ಶಾಕುಂತಲಾ ಸ್ನೇಹಿತರೂ ಆಗಮಿಸಿ, ಮನೆಕೆಡಿಸುವ ಮಾತನಾಡಿದ್ದಾರೆ.

27
Image Credit : Asianet News

ನಾಮಕರಣಕ್ಕೆ ಬಂದ ಶಾಕುಂತಲಾ ಸ್ನೇಹಿತರು ಆಕೆಯ ಮಾತಿನಂತೆ ಮಲ್ಲಿ ಕುರಿತು ಕೊಂಕು ಮಾತು ಆಡೋದಕ್ಕೆ ಶುರುಮಾಡುತ್ತಾರೆ. ನಿನಗಿದೊಂದು ಮಿಕ್ಸ್ಡ್ ಫೀಲಿಂಗ್ ಅಲ್ವಾ? ಒಂದು ಕಡೆ ಖುಷಿ, ಮತ್ತೊಂದು ಕಡೆ ಬೇಸರ. ಯಾಕಂದ್ರೆ ನಿಮ್ಮ ದೊಡ್ಡ ಸೊಸೆಗೆ ವಯಸ್ಸಾಗಿದೆ ಮಗು ಆಗಲ್ಲ ಅಂದುಕೊಂಡಿದ್ವಿ ಆದ್ರೆ ಅದು ಆಗಿದೆ, ಅದು ಸಂತೋಷದ ವಿಷ್ಯ.

Related Articles

Related image1
Amruthadhaare Serial: ಒಂದೇ ಒಂದು ಮಾತಿನಿಂದ ಭೂಮಿಕಾ ಪ್ರಾಣ ತೆಗೆಯಲು ಕೇಡಿ ಶಕುಂತಲಾ ರೆಡಿ!
Related image2
Amruthadhaare Serial: ಮಗಳು ಸಿಗೋ ಮುಂಚೆ, ಗೌತಮ್‌ ದಿವಾನ್‌ಗೆ ಡಿವೋರ್ಸ್‌ ಆಗೋದು ಪಕ್ಕಾನಾ?
37
Image Credit : Asianet News

ಆದರೆ ಎರಡನೇ ಸೊಸೆ ಮಲ್ಲಿ ಕಥೆ ಏನು? ಆ ಕಡೆ ಮಗು ಕೂಡ ಇಲ್ಲ. ಇನ್ನೊಂದು ಕಡೆ ಗಂಡ ಕೂಡ ಇಲ್ಲ. ನಮ್ ಕಡೆ ಮಾತಿಗೆ ಗಂಡ ಕುಡುಕನೋ, ಕೆಟ್ಟವನೋ ಆಗಿರಲಿ, ಆದರೆ ಗಂಡ ಜೊತೆಗೆ ಇರಬೇಕು ಎಂದು. ಆದರೆ ಇವರಿಗೆ ಯಾರೂ ಇಲ್ಲ.

47
Image Credit : Asianet News

ಕಟ್ಟಿಕ್ಕೊಂಡ ಗಂಡಾನೆ ಇಲ್ಲ ಅಂದ ಮೇಲೆ ಏನು ಇದ್ದು ಏನು ಪ್ರಯೋಜನ. ಚಿನ್ನ ಬೆಳ್ಳಿ ತಟ್ಟೆಯಲ್ಲಿ ತಿಂದ್ರೂನು, ತಿನ್ನೋದು ಅನ್ನ ಸಾಂಬಾರ್ ತಾನೆ? ಸಾಂಸಾರಾನೆ ನೆಟ್ಟಗಿಲ್ಲದ ಮೇಲೆ ಏನಿದ್ದು ಏನು ಪ್ರಯೋಜನ ಹೇಳು ಅಂತಾರೆ.

57
Image Credit : Asianet News

ಇದನ್ನು ಕೇಳಿ ಕೆಂಡಾಮಂಡಲವಾಗುವ ಭೂಮಿ, ನೇರವಾಗಿ ಅವರ ಬಳಿ ಬಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ತಿರುಗೇಟು ನೀಡುತ್ತಾಳೆ. ಮನುಷ್ಯತ್ವಾನೇ ಮರೆತು ಮಾತಾಡ್ತಿದ್ದೀರಾ? ಏನು ಮಾತಾಡ್ತಿದ್ದೀರಿ ಎನ್ನುವ ಪ್ರಜ್ಞೆ ಇದೆಯಾ ನಿಮಗೆ ಎನ್ನುತ್ತಾಳೆ.

67
Image Credit : Asianet News

ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಬಗ್ಗೆ ಹೀಗೆಲ್ಲಾ ಮಾತನಾಡೋಕೆ ಹೇಗೆ ಸಾಧ್ಯ? ಅಲ್ಲ ಅವಳ ಜೀವನದಲ್ಲಿ ನಡೆದಿರುವ ಕೆಟ್ಟ ಘಟನೆಗಳಲ್ಲಿ ಒಂದಾದರು ನಿಮ್ಮ ಜೀವನದಲ್ಲಿ ನಡೆದಿದೆಯಾ? ನಿಮ್ಮ ಮಗು ಸತ್ತೋಯ್ತಾ? ಅಥವಾ ನಿಮ್ಮ ಗಂಡ ನಿಮ್ಮನ್ನು ಬಿಟ್ಟೋದ್ರಾ? ನಿಮ್ಮಂತ ವೀಕ್ ಮೈಂಡ್ ಗೆ ಅದನ್ನೆಲ್ಲಾ ಸಹಿಸೋ ಶಕ್ತಿ ಇಲ್ಲ ಎನ್ನುತ್ತಾಳೆ ಭೂಮಿಕಾ.

77
Image Credit : Asianet News

ಭೂಮಿಕಾ ಮಾತು ಕೇಳಿ ಶಾಕುಂತಲಾಗೆ ಕೋಪ ಬರುತ್ತೆ. ಯಾಕಂದ್ರೆ ಜೈನ ಮತ್ತೆ ಮನೆಗೆ ಕರೆಸೋದಕ್ಕೆ ಇದೆಲ್ಲಾ ಶಾಕುಂತಲಾ ಮಾಡಿದ ಪ್ಲ್ಯಾನ್ ಆಗಿತ್ತು. ಆದರೆ ಭೂಮಿಕಾ ಮಾತಿನಿಂದ ಎಲ್ಲಾ ಪ್ಲ್ಯಾನ್ ಉಲ್ಟಾ ಹೊಡೆಯಿತು. ಮುಂದೆ ಶಾಕುಂತಲಾಗೂ ಕ್ಲಾಸ್ ತೆಗೆದುಕೊಳ್ಳುತ್ತಾಳೆ ಭೂಮಿಕಾ. ಕಾದು ನೋಡೋಣ ಏನಾಗುತ್ತೆ ಎಂದು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಮೃತಧಾರೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved