- Home
- Entertainment
- TV Talk
- Bhagyalakshmi Serial: ಪ್ರೇಮಕಾವ್ಯ ಶುರುವಾಯ್ತು; ಸಂಪ್ರದಾಯಸ್ಥೆ ಭಾಗ್ಯ ಎರಡನೇ ಮದುವೆ ಆಗ್ತಾಳಾ?
Bhagyalakshmi Serial: ಪ್ರೇಮಕಾವ್ಯ ಶುರುವಾಯ್ತು; ಸಂಪ್ರದಾಯಸ್ಥೆ ಭಾಗ್ಯ ಎರಡನೇ ಮದುವೆ ಆಗ್ತಾಳಾ?
Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಭಾಗ್ಯ-ಆದೀಶ್ವರ್ ಕಾಮತ್ ಅವರು ರೊಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರೋಮೋ ನೋಡಿ ವೀಕ್ಷಕರು, ಖುಷಿಯಾಗಿದ್ದಾರೆ. ಹಾಗಾದರೆ ಮುಂದೆ ಏನಾಗಬಹುದು?ʻ

ಭಾಗ್ಯ ಜೀವನಕ್ಕೆ ಇನ್ನೋರ್ವ ಹುಡುಗ ಬೇಕು
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳನ್ನು ಅವಳ ಗಂಡ ಬಿಟ್ಟಿದ್ದು, ಬೇರೆ ಮದುವೆ ಆಗಿದ್ದಾನೆ ಎನ್ನೋದು ಆದೀಶ್ವರ್ ಕಾಮತ್ಗೆ ಬೇಸರ ತಂದಿದೆ. ಸದ್ಗುಣ ಹೊಂದಿರುವ ಭಾಗ್ಯ ಜೀವನದಲ್ಲಿ ಇನ್ನೋರ್ವ ಹುಡುಗ ಬರಬೇಕು ಎಂದು ಅವನು ಬಯಸುತ್ತಿದ್ದನು. ಈಗ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ.
ತಾಂಡವ್ಗೆ ಮಕ್ಕಳನ್ನು ಕಂಡರೆ ಇಷ್ಟ
ಆದೀಶ್ವರ್ ಕಾಮತ್ ಎಂಥ ಒಳ್ಳೆಯ ಹುಡುಗ ಎನ್ನೋದು ಕುಸುಮಾಗೆ ಗೊತ್ತಾಗಿದೆ. ಯಾರು ಎಷ್ಟೇ ಹೇಳಿದರೂ ಕೂಡ ತಾಂಡವ್ ಕೇಳದೆ, ಶ್ರೇಷ್ಠಳನ್ನು ಮದುವೆಯಾದನು. ತಾಂಡವ್ಗೆ ಮದುವೆಯಾಗಿದೆ, ಇಬ್ಬರು ಮಕ್ಕಳಿವೆ, ಅವನಿಗೆ ಮಕ್ಕಳನ್ನು ಕಂಡರೆ ತುಂಬ ಇಷ್ಟ ಎಂದು ಗೊತ್ತಿದ್ದರೂ ಕೂಡ, ಶ್ರೇಷ್ಠ ಕೂಡ ತಾಂಡವ್ನನ್ನು ಮದುವೆಯಾದಳು.
ಶ್ರೇಷ್ಠ-ತಾಂಡವ್ಗೆ ಬೈದ ಆದೀಶ್ವರ್ ಕಾಮತ್
ಆದೀಶ್ವರ್ ಕಾಮತ್ ಆಫೀಸ್ನಲ್ಲಿ ಶ್ರೇಷ್ಠ ಕೆಲಸ ಮಾಡುತ್ತಿದ್ದಾಳೆ. ಆಗ ಅವನು ಭಾಗ್ಯ ಗಂಡ ಯಾರು ಎಂದು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾನೆ. ಇನ್ನೊಂದು ಕಡೆ ಶ್ರೇಷ್ಠಳನ್ನು ಕರೆದು, “ಭಾಗ್ಯನಂಥ ಹುಡುಗಿಯನ್ನು ಬಿಟ್ಟು ಬೇರೆ ಮದುವೆಯಾಗಿದ್ದಾನಲ್ಲ ಅವರ ಗಂಡ ಎಂಥ ಮೂರ್ಖ ಇರಬಹುದು? ಅಂಥ ಮೂರ್ಖನನ್ನು ಮದುವೆಯಾಗಿದ್ದಾಳಲ್ಲ, ಅವಳು ಎಂಥವಳು ಇರಬಹುದು?” ಎಂದು ಕೂಡ ಆದೀಶ್ವರ್ ಹೇಳಿದಾಗ, ಶ್ರೇಷ್ಠಗೆ ಏನು ಹೇಳಬೇಕು ಎಂದೇ ಗೊತ್ತಾಗಲಿಲ್ಲ.
ಆದೀಶ್ವರ್ ಯೋಚನೆ ಏನು?
ಭಾಗ್ಯ ಹಾಗೂ ಅವಳನ್ನು ಒಂದು ಮಾಡೋದು ಆದೀಶ್ವರ್ ಕಾಮತ್ ಗುರಿಯಾಗಿದೆ. ತನ್ವಿಗೆ ತಂದೆಯನ್ನು ಕಂಡರೆ ಆಗೋದಿಲ್ಲ, ಇನ್ನೊಂದು ಕಡೆ ಭಾಗ್ಯಗೆ ಇದು ಇಷ್ಟ ಆಗದಿದ್ರೆ ಏನು ಮಾಡೋದು ಅಂತ ಆದೀಶ್ವರ್ ಯೋಚನೆ ಮಾಡಿದ್ದಾನೆ. ಹೀಗಿರುವಾಗ ವಾಹಿನಿಯು ಹೊಸ ಪ್ರೋಮೋವೊಂದನ್ನು ರಿವೀಲ್ ಮಾಡಿದೆ.
ಭಾಗ್ಯ ಕಣ್ಣು ನೋಡಿ ಕಳೆದು ಹೋದ ಆದೀಶ್ವರ್ ಕಾಮತ್
ಈಗ ಆದಿ, ಭಾಗ್ಯ ಕಣ್ಣು ನೋಡಿದಕೂಡಲೇ ಕಳೆದು ಹೋಗುತ್ತಿದ್ದಾನೆ. ಮುಂದೆ ಇವನೇ ಪ್ರೇಮ ನಿವೇದನೆ ಮಾಡಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್ಗಳು ಭಾರೀ ಕುತೂಹಲದಿಂದ ಕೂಡಿವೆ.
ಅದರಲ್ಲಿ ಭಾಗ್ಯ ಹಾಗೂ ಆದೀಶ್ವರ್ ಕಾಮತ್ ಅವರು ರೊಮ್ಯಾಂಟಿಕ್ ಹಾಡಿನಲ್ಲಿ ಕುಣಿದಿದ್ದಾರೆ. ಅಂದರೆ ಇವರಿಬ್ಬರು ಮದುವೆ ಆಗಲಿದ್ದಾರೆ ಎನ್ನುವ ಸೂಚನೆಯಿದು. ಹಾಗಾದರೆ ಇವರಿಬ್ಬರು ಮದುವೆ ಆಗ್ತಾರಾ? ಅಥವಾ ಭಾಗ್ಯ, ತಾಂಡವ್ ಮತ್ತೆ ಒಂದಾಗ್ತಾರಾ ಎಂದು ಕಾದು ನೋಡಬೇಕಿದೆ.
ತಾಂಡವ್ ಪಾತ್ರದಲ್ಲಿ ಸುದರ್ಶನ್ ರಂಗಪ್ರಸಾದ್, ಆದಿ ಪಾತ್ರದಲ್ಲಿ ಹರೀಶ್ ರಾಜ್, ಭಾಗ್ಯ ಪಾತ್ರದಲ್ಲಿ ಸುಷ್ಮಾ ರಾವ್ ನಟಿಸುತ್ತಿದ್ದಾರೆ.