MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • TV Talk
  • ಜನರೊಳಗೆ ಮಾನಭಂಗ ಮಾಡಿದವರಿಗೆ ಒಳ್ಳೆಯದಾಗಲಿ: ದಿಢೀರ್​ ಲೈವ್​ಗೆ ಬಂದ Anchor Anushree ಹೇಳಿದ್ದೇನು?

ಜನರೊಳಗೆ ಮಾನಭಂಗ ಮಾಡಿದವರಿಗೆ ಒಳ್ಳೆಯದಾಗಲಿ: ದಿಢೀರ್​ ಲೈವ್​ಗೆ ಬಂದ Anchor Anushree ಹೇಳಿದ್ದೇನು?

ತಮ್ಮನ್ನು ಟ್ರೋಲ್ ಮಾಡಿದವರಿಗೆ ನಿರೂಪಕಿ ಅನುಶ್ರೀ ಖಡಕ್ ಉತ್ತರ ನೀಡಿದ್ದಾರೆ. ತಿಮ್ಮಪ್ಪನ ದರ್ಶನದ ವೇಳೆ ಡಾ. ರಾಜ್‌ಕುಮಾರ್ ಕಂಡಿದ್ದರು ಎಂಬ ಹೇಳಿಕೆಗೆ ಟ್ರೋಲ್ ಆಗಿದ್ದ ಅವರು, ಕನಕದಾಸರ ಪದ್ಯವನ್ನು ಹೇಳುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

2 Min read
Author : Suchethana D
Published : Jan 03 2026, 08:06 PM IST
Share this Photo Gallery
  • FB
  • TW
  • Linkdin
  • Whatsapp
15
ಆ್ಯಂಕರ್​ ಅನುಶ್ರೀ ಲೈವ್​
Image Credit : Instagram

ಆ್ಯಂಕರ್​ ಅನುಶ್ರೀ ಲೈವ್​

ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ

ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ

ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ

ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ

ಜನರೊಳಗೆ ಮಾನಭಂಗ ಮಾಡಿದವರಿಗೆ

ಜೇನುತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ

ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ

ಮಹಾನುಭಾವ ಮುಕ್ತಿಯ ಕೊಡುವ

ನೆಲೆಯಾದಿಕೇಶವ...

ಎನ್ನುತ್ತಾ ಆ್ಯಂಕರ್​ ಅನುಶ್ರೀ (Anchor Anushree) ಕನಕದಾಸರ ಪದ್ಯವನ್ನು ಹೇಳುವ ಮೂಲಕ ತಮ್ಮನ್ನು ಟ್ರೋಲ್​ ಮಾಡುವವರಿಗೆ ಖಡಕ್​ ಉತ್ತರ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎಲ್ಲರಿಗೂ ಒಳ್ಳೆಯದಾಗಲಿ
Image Credit : Instagram

ಎಲ್ಲರಿಗೂ ಒಳ್ಳೆಯದಾಗಲಿ

ಯಾಕೋ ಗೊತ್ತಿಲ್ಲ ಕನಕದಾಸರ ಈ ಪದ ನನಗೆ ನೆನಪಾಯ್ತು ಎನ್ನುತ್ತಾ 2026 ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ. ಒಳ್ಳೆಯದನ್ನೇ ಮಾತನಾಡೋಣ, ಒಳ್ಳೆಯದ್ದನ್ನೇ ಯೋಚಿಸೋಣ, ಒಳ್ಳೆಯದ್ದನ್ನೇ ಮಾಡೋಣ, ಒಳ್ಳೆಯದನ್ನೇ ಬಯಸೋಣ. ನಮಸ್ಕಾರ ಎನ್ನುವ ಮೂಲಕ ತಾಗಿಸಿಕೊಳ್ಳುವವರಿಗೆ ತಾಗುವಂಥ ರಿಪ್ಲೈ ಮಾಡಿದ್ದಾರೆ.

Related Articles

Related image1
BBK: ಅವನ ನೋಡಿದ್ದು ಕಣ್ಣು, ಪ್ರೀತಿಸಿದ್ದು ಮನಸ್ಸು, ಬ್ರೇಕ್​ ಆಗಿದ್ದು ಹಾರ್ಟು! ಲವ್​ ಫೇಲ್​ ಬಗ್ಗೆ ರಕ್ಷಿತಾ ಶೆಟ್ಟಿ ಹೇಳಿಕೆ!
Related image2
Bigg Bossನಲ್ಲಿ ನನ್ನ ಸಾಯಿಸೋ ಪ್ರಯತ್ನ ನಡೆದಿತ್ತು: ಆ ದಿನ ನಡೆದ ಶಾಕಿಂಗ್​ ಘಟನೆ ನೆನೆದ ಸಂಗೀತಾ ಶೃಂಗೇರಿ
35
ಆಗಿದ್ದೇನು?
Image Credit : Instagram

ಆಗಿದ್ದೇನು?

ಅಷ್ಟಕ್ಕೂ, ಒಬ್ಬರು ಸ್ವಪ್ರಯತ್ನದಿಂದ ಮುಂದಕ್ಕೆ ಹೋಗುತ್ತಿದ್ದಾರೆ ಎಂದರೆ, ಅವರ ಕಾಲೆಳೆಯುವ ದೊಡ್ಡ ವರ್ಗವೇ ಇರುತ್ತದೆ. ಅದೇ ರೀತಿ ಆ್ಯಂಕರ್​ ಅನುಶ್ರೀ (Anchor Anushree) ಬಗ್ಗೆ ಟ್ರೋಲ್​ ಮಾಡುವವರಿಗೇನೂ ಕಡಿಮೆ ಇಲ್ಲ. ನೋಡುವಷ್ಟು ನೋಡಿದ್ದ ಅನುಶ್ರೀ ಕೆಲ ದಿನಗಳ ಹಿಂದೆ ಖಡಕ್​ ಉತ್ತರ ನೀಡಿದ್ದರು. ರಾಯಚೂರ್ ಮೀಮ್ಸ್ ಬ್ರೋ ಎನ್ನುವ ಟ್ರೋಲ್ ಪೇಜ್ ಒಂದು ಅನುಶ್ರೀಯವರ ಎರಡು ವಿಡಿಯೋವನ್ನು ಕಂಬೈನ್ ಮಾಡಿ ಹಾಕಿದ್ದು, ಅದಕ್ಕೆ ಕ್ಯಾಪ್ಶನ್ ಆಗಿ ಆಸ್ಕರ್ ಗೋಸ್ ಟು ಅನುಶ್ರೀ ಎಂದಿದ್ದಾರೆ. ಅಷ್ಟೇ ಅಲ್ಲದೇ ಇಫ್ ಬಕೆಟ್ ಹಾವ್ ಮೌತ್, ವಾರೆ ಮೇರಿ ಲಡ್ಕಿ ಎಂದು ಕೂಡ ವಿಡಿಯೋದಲ್ಲಿ ಹಾಕಿದ್ದರು.

45
ತಿಮ್ಮಪ್ಪನ ಬಗ್ಗೆ
Image Credit : Social Media

ತಿಮ್ಮಪ್ಪನ ಬಗ್ಗೆ

ಇತ್ತೀಚೆಗೆ ನಿರೂಪಕಿ ಅನುಶ್ರೀ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿಯವರ 45 ಚಿತ್ರದ ಇಂಟರ್ವ್ಯೂ ಮಾಡುತ್ತಾ, ನನಗೆ ತಿರುಪತಿಗೆ ಮೊದಲ ಬಾರಿ ಹೋದಾಗ, ತಿಮ್ಮಪ್ಪ ಕಾಣಿಸಲೇ ಇಲ್ಲ, ಬದಲಾಗಿ ಶ್ರೀನಿವಾಸ ಕಲ್ಯಾಣದ ಡಾ ರಾಜಕುಮಾರ್ ಅವರೇ ಕಾಣಿಸಿದ್ದರು ಎಂದಿದ್ದರು. ಅದರ ಜೊತೆಗೆ ಮತ್ತೊಂದು ಹಳೆಯ ವಿಡಿಯೋವನ್ನು ಸಹ ಟ್ರೋಲ್ ಪೇಜ್ ಶೇರ್ ಮಾಡಿದ್ದು, ಅದರಲ್ಲಿ ಅನುಶ್ರೀ ಚಿರಂಜೀವಿ ಅವರ ಜೊತೆ ವೇದಿಕೆಯಲ್ಲಿ ಮಾತನಾಡುತ್ತಾ, ನಾನು ಎಲ್ಲೆ ಹೋದರು ಮಂಜುನಾಥನ ದರ್ಶನ ಮಾಡುವಾಗ ಕಾಣುವಂತಹ ಮುಖ ಚಿರಂಜೀವಿ ಅವರದೇ ಎಂದು ಹೇಳಿದ್ದರು.

55
ಏನಿವಾಗ?
Image Credit : Instagram

ಏನಿವಾಗ?

ಈ ಟ್ರೋಲ್ ವಿಡಿಯೋಗೆ ಅಷ್ಟೇ ಖಡಕ್ ಆಗಿ ಉತ್ತರಿಸಿದ್ದ ಆ್ಯಂಕರ್​ ಅನುಶ್ರೀ ಹೌದು ಏನಿವಾಗ, ಓಬವ್ವ ಅಂದಾಗ ಜಯಂತಿ ಅಮ್ಮ ನೆನಪಾಗ್ತಾರೆ.. ಕಿತ್ತೂರು ಚೆನ್ನಮ್ಮ ಅಂದಾಗ ಸರೋಜಮ್ಮ ನೆನಪಾಗ್ತಾರೆ… ಶ್ರೀನಿವಾಸ ಎಂದಾಗ ಅಪ್ಪಾಜಿ.. ಮಂಜುನಾಥ ಎಂದಾಗ ಚಿರಂಜೀವಿ ಸರ್… ಅದು ಹೆಮ್ಮೆ ಪಡೋ ಅಂತ ವಿಷಯ … ಕಾಮಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಅನ್ನೋ ಹಾಗೆ… ನಿಮ್ಮ ಬುದ್ಧಿವಂತಿಕೆಗೆ ಹಾಗೆ ಕಾಣೋದು ಎಂದು ಉತ್ತರಿಸಿದ್ದರು. ಈಗ ಮತ್ತೊಮ್ಮೆ ಕನಕದಾಸರ ಪದ್ಯ ಹೇಳುವ ಮೂಲಕ ಖಡಕ್​ ತಿರುಗೇಟು ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಂಕರ್ ಅನುಶ್ರೀ
ಮನರಂಜನಾ ಸುದ್ದಿ
ಟಿವಿ ಶೋ
ಇನ್‌ಸ್ಟಾಗ್ರಾಂ

Latest Videos
Recommended Stories
Recommended image1
2ನೇ ಮದುವೆಯ ಗುಟ್ಟು ಬಿಚ್ಚಿಟ್ಟ Bigg Boss ವರ್ತೂರು ಸಂತೋಷ್​: ಯಾರವರು? ಈ ಮೌನವೇಕೆ
Recommended image2
ಶೂಟಿಂಗ್​ ವೇಳೆ ನಟಿಯನ್ನೇ ನುಂಗಿ ಹಾಕಿದ ದೈತ್ಯ ತಿಮಿಂಗಲ: ಆಮೇಲೇನಾಯ್ತು? ಭಯಾನಕ ವಿಡಿಯೋ ವೈರಲ್​
Recommended image3
ಟಿವಿ ವೀಕ್ಷಕರಿಗೆ ಕೇಂದ್ರದ ಬಿಗ್ ಶಾಕ್! 20 ವರ್ಷಗಳ ಬಳಿಕ ರೂಲ್ಸ್ ಬದಲಾವಣೆ
Related Stories
Recommended image1
BBK: ಅವನ ನೋಡಿದ್ದು ಕಣ್ಣು, ಪ್ರೀತಿಸಿದ್ದು ಮನಸ್ಸು, ಬ್ರೇಕ್​ ಆಗಿದ್ದು ಹಾರ್ಟು! ಲವ್​ ಫೇಲ್​ ಬಗ್ಗೆ ರಕ್ಷಿತಾ ಶೆಟ್ಟಿ ಹೇಳಿಕೆ!
Recommended image2
Bigg Bossನಲ್ಲಿ ನನ್ನ ಸಾಯಿಸೋ ಪ್ರಯತ್ನ ನಡೆದಿತ್ತು: ಆ ದಿನ ನಡೆದ ಶಾಕಿಂಗ್​ ಘಟನೆ ನೆನೆದ ಸಂಗೀತಾ ಶೃಂಗೇರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved