MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಎಲ್ಲರ ಅನುಮತಿ ಪಡೆದು ಮಹಾನಟಿ ಸ್ಪರ್ಧಿ ವರ್ಷಾಗೆ ಬಿರುದು ನೀಡಿದ ಆಂಕರ್ ಅನುಶ್ರೀ!

ಎಲ್ಲರ ಅನುಮತಿ ಪಡೆದು ಮಹಾನಟಿ ಸ್ಪರ್ಧಿ ವರ್ಷಾಗೆ ಬಿರುದು ನೀಡಿದ ಆಂಕರ್ ಅನುಶ್ರೀ!

Mahanati Season 2: ಚಿಕ್ಕೋಡಿಯ ವರ್ಷಾ ಡಿಗ್ರಜೆ ಮಹಾನಟಿ ರಿಯಾಲಿಟಿ ಶೋನಲ್ಲಿ ಆಯ್ಕೆಯಾಗಿ ಗೋಲ್ಡನ್ ಟಿಕೆಟ್ ಪಡೆದಿದ್ದಾರೆ. ಓದು ಮುಗಿಸಿ ಸಾಲ ತೀರಿಸಿ ಬಣ್ಣದ ಲೋಕಕ್ಕೆ ಕಾಲಿಟ್ಟ ವರ್ಷಾ ಅವರಿಗೆ ನಿರೂಪಕಿ ಅನುಶ್ರೀ ಬಿರುದು ನೀಡಿದ್ದಾರೆ.

1 Min read
Mahmad Rafik
Published : Jun 15 2025, 09:40 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : Zee Kannada Fb

ಜೀ ಕನ್ನಡ ವಾಹಿನಿಯಲ್ಲಿ ಶನಿವಾರದಿಂದ ಮಹಾನಟಿ ಸೀಸನ್ 2 ರಿಯಾಲಿಟಿ ಶೋ ಆರಂಭಗೊಂಡಿದೆ. ಶನಿವಾರ ಮಹಾನಟಿ ರಿಯಾಲಿಟಿ ಶೋ ಅದ್ಧೂರಿಯಾಗಿ ಆರಂಭಗೊಂಡಿದೆ. ಮೊದಲ ದಿನವೇ ಸ್ಪರ್ಧಿಯೊಬ್ಬರಿಗೆ ವಿಶೇಷ ಬಿರುದು ನೀಡಲಾಗಿದೆ. ನಿರೂಪಕಿ ಅನುಶ್ರೀ ಎಲ್ಲರ ಅನುಮತಿ ಪಡೆದು ಈ ಬಿರುದು ನೀಡಿದ್ದಾ

26
Image Credit : Zee Kannada

ಮೊದಲ ಸಂಚಿಕೆಯಲ್ಲಿ ಮೈಸೂರಿನ ಸಿಂಚನ ಆರ್, ಚಿಕ್ಕೋಡಿಯ ವರ್ಷಾ ಡಿಗ್ರಜೆ, ಬೆಂಗಳೂರಿನ ಪೂಜಾ ರಮೇಶ್, ದಕ್ಷಿಣ ಕನ್ನಡದ ವಂಶಿ ಮತ್ತು ಬೆಳಗಾವಿಯ ಖುಷಿ ಮಹಾನಟಿ ರಿಯಾಲಿಟಿ ಶೋಗೆ ಆಯ್ಕೆಯಾಗಿ ನಟ ರಮೇಶ್ ಅರವಿಂದ್ ಅವರಿಂದ ಗೋಲ್ಡನ್ ಟಿಕೆಟ್ ಪಡೆದುಕೊಂಡಿದ್ದಾರೆ.

Related Articles

Related image1
Zee Kannada: ಮಹಾನಟಿ ಸೀಸನ್‌ 2, ಕರ್ಣ ಧಾರಾವಾಹಿ ಪ್ರಸಾರ ಆಗೋದ್ಯಾವಾಗ? ತ್ರಿಕೋನ ಪ್ರೇಮಕಥೆಗೆ ಕಾದುಕುಳಿತ ವೀಕ್ಷಕರು!
Related image2
Anchor Anushree ಉತ್ತರ ಕರ್ನಾಟಕ ಜನರ ನಿಷ್ಕಲ್ಮಶ ಪ್ರೀತಿಗೆ ಆ್ಯಂಕರ್ ಅನುಶ್ರೀ ಫಿದಾ
36
Image Credit : Zee Kannada

ಚಿಕ್ಕೋಡಿಯ ವರ್ಷಾ ಡಿಗ್ರಜೆ ಶೋಗೆ ಸೆಲೆಕ್ಟ್ ಬಳಿಕ ತಮ್ಮ ಕುರಿತ ಹಲವು ವಿಷಯಗಳನ್ನು ಹಂಚಿಕೊಂಡರು. ತಮ್ಮ ಮನೆಯಲ್ಲಿ ಓದಿದವಳು ಮೊದಲಿಗಳು ನಾನೇ, ಓದಬೇಕೆಂಬ ಛಲದಿಂದ ಸಾಲ ಪಡೆದುಕೊಂಡಿದ್ದರು. ಇದೀಗ ಎಲ್ಲಾ ಸಾಲ ಪಾವತಿಸಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗೆ ತಮ್ಮ ಕಷ್ಟದ ಜೀವನದ ಬಗ್ಗೆ ವರ್ಷಾ ಮಾತಾಡಿದ್ದಾರೆ.

46
Image Credit : Zee Kannada

ವರ್ಷಾ ಡಿಗ್ರಜೆ ಮಾತುಗಳನ್ನು ಕೇಳಿದ ಶೋ ನಿರೂಪಕಿ ಅನುಶ್ರೀ ವಿಶೇಷ ಬಿರುದನ್ನು ಎಲ್ಲರ ಸಮ್ಮುಖದಲ್ಲಿ ನೀಡಿದರು. ನಿಮ್ಮ ಜೀವನ ಬಹುತೇಕರಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಿದರು. ಚಂದನವನದ ನಟ-ನಟಿಯರಿಗೆ ಅಭಿಮಾನಿಗಳು ವಿಶೇಷ ಬಿರುದು ನೀಡುತ್ತಾರೆ. ಇದೀಗ ಸ್ಪರ್ಧಿ ವರ್ಷಾ ಡಿಗ್ರಜೆ ಮೊದಲ ನಟನೆಯಲ್ಲಿ ವಿಶೇಷ ಬಿರುದು ತಮ್ಮದಾಗಿಸಿಕೊಂಡಿದ್ದಾರೆ.

56
Image Credit : Zee Kannada

ಚಂದನವನದ ನಟ ದರ್ಶನ್‌ ಅವರನ್ನು ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ಎಂದು ಕರೆಯುತ್ತಾರೆ. ದರ್ಶನ್ ಹಿರಿತೆರೆಗೆ ಚಾಲೆಂಜಿಂಗ್ ಸ್ಟಾರ್ ಆದ್ರೆ, ನಮ್ಮ ಸ್ಪರ್ಧಿ ವರ್ಷಾ ಡಿಗ್ರಜೆ ಕಿರುತೆರೆಗೆ ಚಾಲೆಂಜಿಂಗ್ ಸ್ಟಾರ್ ಎಂದು ಅನುಶ್ರೀ ಘೋಷಿಸಿದರು. ಈ ವೇಳೆ ದರ್ಶನ್ ಅಭಿಮಾನಿಗಳ ಒಪ್ಪಿಗೆ ಕೇಳಿಕೊಂಡು ಈ ಬಿರುದು ನೀಡಿದರು.

66
Image Credit : Zee Kannada

ಹಿರಿಯ ನಟಿ ಪ್ರೇಮಾ, ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ಈ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದಾರೆ. ನಟ ರಮೇಶ್ ಅರವಿಂದ್ ಶೋನ ಮಾಸ್ಟರ್ ಮೈಂಡ್ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಡ್ರಾಮಾ ಜೂನಿಯರ್ ಶೋ ವಿನ್ನರ್ ವಂಶಿ ಸಹ ಮಹಾನಟಿಗೆ ಆಯ್ಕೆಯಾಗಿರೋದು ವಿಶೇಷ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜೀ ಕನ್ನಡ
ರಿಯಾಲಿಟಿ ಶೋ
ಆಂಕರ್ ಅನುಶ್ರೀ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved