MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಭೂಮಿ ಸುತ್ತ ಗೌತಮ್ ಪ್ರೀತಿಯ ಕೋಟೆ ಕಟ್ಟಿದ್ರೆ, ಕಥೆ ಮುಗಿಸೋಕೆ ಪ್ಲ್ಯಾನ್ ಮಾಡಿದ ಶಕುಂತಲಾ

ಭೂಮಿ ಸುತ್ತ ಗೌತಮ್ ಪ್ರೀತಿಯ ಕೋಟೆ ಕಟ್ಟಿದ್ರೆ, ಕಥೆ ಮುಗಿಸೋಕೆ ಪ್ಲ್ಯಾನ್ ಮಾಡಿದ ಶಕುಂತಲಾ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಸುತ್ತ ಗೌತಮ್ ಪ್ರೀತಿಯ ಭದ್ರ ಕೋಟೆ ಕಟ್ಟುತ್ತಿದ್ರೆ, ಇನ್ನೊಂದು ಕಡೆ ಶಕುಂತಲಾ ಭೂಮಿಕಾ ಕಥೆ ಮುಗಿಸೋಕೆ ಪ್ಲ್ಯಾನ್ ಮಾಡ್ತಿದ್ದಾರೆ.  

1 Min read
Pavna Das
Published : Apr 05 2025, 02:09 PM IST| Updated : Apr 06 2025, 09:03 AM IST
Share this Photo Gallery
  • FB
  • TW
  • Linkdin
  • Whatsapp
17

ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare serial) ದಿನ ದಿನಕ್ಕೆ ಕಥೆ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಗೌತಮ್ ಕುಟುಂಬಕ್ಕೆ ಹಲವು ಕಂಟಕಗಳು ಬರುತ್ತಲೇ ಇರೋದರಿಂದ ಗರ್ಭಿಣಿಯಾಗಿರುವ ಭೂಮಿಕಾ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಾನೆ. ಭೂಮಿಯ ಪ್ರತಿ ಕ್ಷಣಗಳನ್ನು ಮಾನಿಟರ್ ಮಾಡ್ತಾನೆ ಗೌತಮ್. 
 

27

ಭೂಮಿಕಾ ದೇವಸ್ಥಾನಕ್ಕೆ ಹೋದ್ರೂ ಯಾಕೆ ಹೋದ್ರಿ ಎಂದು ಗದರುವ, ಭೂಮಿಕಾ ಗರ್ಭಿಣಿ ಬಯಕೆಯನ್ನು ತೀರಿಸಲು, ಕೆಲಸದವರ ಬಳಿ, ಮಾವಿನಕಾಯಿ, ಹುಳಿ, ಉಪ್ಪು, ಮಣ್ಣು ಹೀಗೆ ಗರ್ಭಿಣಿಯರು ಯಾವುದನ್ನೆಲ್ಲಾ ಇಷ್ಟ ಪಡ್ತಾರೋ ಅದನ್ನೆಲ್ಲಾ ಹಿಡಿದುಕೊಂಡು ಭೂಮಿಕಾ ಹಿಂದೆ ಮುಂದೆ ಸುತ್ತೋದಕ್ಕೆ ಹೇಳಿದ್ದಾರೆ. 
 

37

ಅಷ್ಟೇ ಅಲ್ಲ, ಭೂಮಿಕಾ ಎದ್ದು ಹೆಚ್ಚು ನಡೆದಾಡಬಾರದು, ಕೆಲಸ ಮಾಡಬಾರದು ಎಂದು ಸ್ಟ್ರಿಕ್ಟ್ ವಾರ್ನಿಂಗ್ ಕೊಟ್ಟಿದ್ದಾನೆ. ಹಾಗಾಗಿ ಈಗ ಭೂಮಿಕಾಗೆ ಬಂಗಾರದ ಪಂಜರದಲ್ಲಿರೋ ಹಾಗಾಗಿದೆ. ಆದರೆ ಗೌತಮ್ ಪ್ರೀತಿ ಮಾತ್ರ ಎಲ್ಲವನ್ನೂ ಮರೆಸಿದೆ. 
 

47

ಭೂಮಿಕಾ ಗಂಡನ ಮೇಲೆ ಹುಸಿ ಮುನಿಸು ತೋರಿಸುತ್ತಾ, ಯಾಕಾದ್ರೂ ಪ್ರಗ್ನೆಂಟ್ ಆಗ್ಬಿಟ್ಟೆ ಅನಿಸಿಬಿಟ್ಟಿದೆ, ಎಲ್ಲೂ ಫ್ರೀ ಆಗಿ ಓಡಾಡದ ಹಾಗೆ ಮಾಡಿದ್ದೀರಿ. ನಂಗಂತೂ ಸಾಕಾಗಿ ಹೋಗಿದೆ ಎನ್ನುತ್ತಾಳೆ. ಆವಾಗ ಗೌತಮ್, ಇದು ನಮ್ಮ ಕನಸಿಗೋಸ್ಕರ ಎನ್ನುತ್ತಾರೆ. 
 

57

ಒಂದು ಕಡೆ ಗೌತಮ್ ಭೂಮಿ ಸುತ್ತ ಪ್ರೀತಿ ಕೋಟೆ ಕಟ್ತಿದ್ರೆ.. ಮತ್ತೊಂದು ಕಡೆ ಕೋಟೆಗೆ ಮುತ್ತಿಗೆ ಹಾಕಿ ಕೋಟೆನೇ ಧ್ವಂಸ ಮಾಡೋ ಪ್ರಯತ್ನದಲ್ಲಿದ್ದಾರೆ ಕೇಡಿಗಳು! ಹೌದು ಶಕುಂತಲಾ ಮತ್ತು ಅವರ ಅಣ್ಣ ಇಬ್ಬರು ಸೇರಿ ಭೂಮಿಕಾ ಕಥೆ ಮುಗಿಸುವ ಪ್ಲ್ಯಾನ್ ಮಾಡಿದ್ದಾರೆ. 
 

67

ಅಣ್ಣನ ಬಳಿ ತನ್ನ ಪ್ಲ್ಯಾನ್ ಹೇಳುತ್ತಾ, ಶಕುಂತಲಾ, ಈಗಷ್ಟೇ ಕೆಲಸದವರು ನೆಲ ಒರೆಸಿ ಹೋಗಿದ್ದಾರೆ. ನಾನು ಅಲ್ಲಿ ಒಂದಷ್ಟು ನೀರು ಚೆಲ್ಲಿ, ಕರೆಂಟ್ ಶಾಕ್ ಹೊಡೆಯೋ ಥರ ಮಾಡಿದ್ದೀನಿ. ಇನ್ನು ಭೂಮಿಕಾ ಕಥೆ ಮುಗಿದಂತೆ ಎನ್ನುತ್ತಿದ್ದಾರೆ. 
 

77

ಹಾಗಿದ್ರೆ ಮುಂದೆ ಏನಾಗುತ್ತೆ? ಇಲ್ಲೂ ಕೂಡ ಭೂಮಿಕಾ ಶಾಕ್ ಹೊಡೆದು, ಮಗುವನ್ನು ಕಳೆದುಕೊಳ್ಳುತ್ತಾಳೋ? ಅಥವಾ ಭೂಮಿಕಾನೆ ಸಾಯುತ್ತಾಳ? ಅಥವಾ ಶಕುಂತಲಾ ಪ್ಲ್ಯಾನ್ ಫ್ಲಾಪ್ ಆಗುತ್ತಾ? ಯಾವುದಕ್ಕೂ ಕಾದು ನೋಡಬೇಕು. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved