- Home
- Entertainment
- TV Talk
- ಕೂಲಿ ಕೆಲ್ಸ ಮಾಡಿದ್ದೆ, ಜೈಲೂ ಸೇರಿದೆ: Amruthadhaare ನಟ ರಾಣವ್ ಬದುಕಿನ ಯಾರೂ ತಿಳಿಯದ ಸತ್ಯ
ಕೂಲಿ ಕೆಲ್ಸ ಮಾಡಿದ್ದೆ, ಜೈಲೂ ಸೇರಿದೆ: Amruthadhaare ನಟ ರಾಣವ್ ಬದುಕಿನ ಯಾರೂ ತಿಳಿಯದ ಸತ್ಯ
ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ಜೈದೇವ್ ಅಲಿಯಾಸ್ ರಾಣವ್ ಗೌಡ, ಸಹನಟಿ ರಾಧಾ ಭಗವತಿ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ನಟನಾ ಪಯಣದ ಹಿಂದಿನ ಕಷ್ಟಹಂಚಿಕೊಂಡಿದ್ದು, ಕೂಲಿ ಕೆಲಸ ಮಾಡಿದ್ದರಿಂದ ಹಿಡಿದು ಜೈಲು ಸೇರಿದ್ದರ ಬಗ್ಗೆಯೂ ಮಾತನಾಡಿದ್ದಾರೆ.

ಮದುಮಗನಾಗಿರೋ ಅಮೃತಧಾರೆ ಜೈದೇವ್
ಅಮೃತಧಾರೆ ಸೀರಿಯಲ್ (Amruthadhaare Serial) ಜೈದೇವ್ ಉರ್ಫ್ ರಾಣವ್ ಗೌಡ ಅವರು ಇದೀಗ ಇದೇ ಸೀರಿಯಲ್ ಹಳೆಯ ಮಲ್ಲಿ ಅರ್ಥಾತ್ ಭಾರ್ಗವಿ ಎಲ್ಎಲ್ಬಿ ನಟಿ ರಾಧಾ ಭಗವತಿ ಅವರ ಜೊತೆ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಈ ವರ್ಷವೇ ತಮ್ಮ ಮದುವೆ ಎಂದು ಎಂಗೇಜ್ಮೆಂಟ್ ಆಗಿರೋ ಈ ಜೋಡಿ ಘೋಷಿಸಿದೆ.
ಹಳೆಯ ದಿನಗಳ ಮೆಲುಕು
ಇದರ ನಡುವೆಯೇ, ಇದೀಗ ನಟ ರಾಣವ್ ಅವರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಪರಿಯ ಸಕ್ಸಸ್ ನಟನಾಗಿ ಬರಲು ತಾವು ಪಟ್ಟಿರುವ ಕಷ್ಟಗಳ ದಿನಗಳನ್ನು ನಟ ನೆನೆದಿದ್ದಾರೆ. ಚಂದನ್ ಕೆ.ಶೆಟ್ಟಿ ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.
ಕೂಲಿ ಕೆಲ್ಸ ಮಾಡಿದೆ
ಎಂಜಿನಿಯರಿಂಗ್ ಅರ್ಧಂದರ್ಧ ಕಲಿತ ಮೇಲೆ ಜೀವನದಲ್ಲಿ ಸಾಕಷ್ಟು ಅಪ್ಸ್ ಅಂಡ್ ಡೌನ್ಸ್ ಆಯ್ತು. ಸಿಮೆಂಟ್ ಕೆಲಸ, ಕೂಲಿ ಕೆಲಸನೂ ಮಾಡಬೇಕಾಯ್ತು. ಲೇಬರ್ ಆಗಿ ಐದಾರು ವರ್ಷ ದುಡಿದೆ. ದುಡ್ಡಿನ ವ್ಯಾಲ್ಯೂ ಗೊತ್ತಾಗ್ಲಿ ಅಂತಾನೆ ನಮ್ಮ ತಂದೆ ಇಂಥ ಸ್ಟೆಪ್ ತೆಗೆದುಕೊಂಡಿದ್ರು. ಸೋ ನಾನು ಅದಕ್ಕೆ ಚಾಲೆಂಜಿಂಗ್ ಆಗಿ ನಾನು ಏನು ಕೊಡ್ತೀರೋ ಕೊಡಿ ಅದು ಏನು ಮಾಡ್ಬೇಕೋ ಹೇಳಿ ಮಾಡ್ತೀನಿ ಅಂತ ನಾನು ರೆಡಿ ಆಗಿದ್ದೆ ಎಂದಿದ್ದಾರೆ.
ಬಿಜಿನೆಸ್ ಲಾಸ್
ಅದಾದ ಬಳಿಕ ಬಿಸಿನೆಸ್ಗೆ ಕೈ ಹಾಕಿದೆ. ಅದು ಲಾಸ್ ಆಯ್ತು. ಸಿಮೆಂಟ್ ಬಿಸಿನೆಸ್ ಆಗಿತ್ತು ಅದು, ಆರು ತಿಂಗಳು ಚೆನ್ನಾಗಿಯೇ ನಡೆಯಿತು. ಕಮಿಟ್ಮೆಂಟ್ ಜಾಸ್ತಿ ಇತ್ತು. ಸೋ ಎಲ್ಲಾನು ಬಿಟ್ಟುಬಿಟ್ಟೆ ಎಂದಿದ್ದಾರೆ ರಾಣವ್.
ಸೆಂಟ್ರಲ್ ಜೈಲಿಗೆ ಹೋದೆ
ಆದರೆ ಆ ಸಂದರ್ಭದಲ್ಲಿ ಕಾವೇರಿ ಗಲಾಟೆ ನಡೆಯುತ್ತಿತ್ತು. ಅಲ್ಲಿಗೆ ಹೋಗಿ ಸೆಂಟ್ರಲ್ ಜೈಲು ಸೇರುವ ಸ್ಥಿತಿ ಬಂತು. ಅಲ್ಲೆಲ್ಲ ಹೋಗಿ ಇದ್ದು ಬಂದದ್ದು ಸುಮಾರು ಜನಕ್ಕೆ ಗೊತ್ತಿಲ್ಲ ಬಿಡಿ. ಆ ಸಮಯದಲ್ಲಿ ತುಲಾ ರಾಶಿಗೆ ಸಾಡೇಸಾತಿ ನಡೆಯುತ್ತಿತ್ತು. ನನ್ನ ಅಮ್ಮ ನನ್ನನ್ನು ಎಚ್ಚರಿಸುತ್ತಲೇ ಇದ್ದರು. ಆದರೆ ಅವೆಲ್ಲಾ ಏನೂ ಇಲ್ಲಮ್ಮ, ಸುಮ್ಸುಮ್ನೆ ನಂಬಬೇಡ ಎಂದಿದ್ದೆ. ಆಮೇಲೆ ಗೊತ್ತಾಯ್ತು, ಜೈಲಿಗೆ ಸೇರಬೇಕಾಯ್ತು ಎಂದಿದ್ದಾರೆ ನಟ.
ಫೈನ್ ಡೇ ಡಿಸೈಡ್ ಮಾಡಿದೆ
ಎಲ್ಲಾ ಆದ ಮೇಲೆ ಒಂದು ಫೈನ್ ಡೇ ಡಿಸೈಡ್ ಮಾಡಿದೆ. ನನ್ನ ಬಣ್ಣದ ಬದುಕಿನ ಆಸೆ ಏನಿದೆ ಅದನ್ನು ಈಡೇರಿಸಿಕೊಳ್ಳೋಣ ಎಂದು. ಇಂಡಸ್ಟ್ರಿಗೆ ಹೋಗೋಣ ಅಂತ ಅಂದ್ಬಿಟ್ಟು ಒಂದು ದಿನ ಡಿಸೈಡ್ ಮಾಡಿದೆ. ನಂತರದ ಪಯಣವೂ ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಪ್ರಯತ್ನದ ಬಳಿಕ ಅಂತೂ ನನ್ನ ಆಸೆ ಈಡೇರಿದೆ. ಈಗ ಇಲ್ಲಿಯೇ ಮುಂದುವರೆದಿದ್ದೇನೆ ಎಂದಿದ್ದಾರೆ ನಟ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

