MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಥೈಲ್ಯಾಂಡ್‌ನಲ್ಲಿದೆ ಮಿನಿ ಅಯೋಧ್ಯೆ, ರಾಮ ಹೋಗಿರದ ಜಾಗದಲ್ಲಿ ಮಂದಿರ ನಿರ್ಮಾಣವಾಗಿದ್ದು ಹೀಗೆ?

ಥೈಲ್ಯಾಂಡ್‌ನಲ್ಲಿದೆ ಮಿನಿ ಅಯೋಧ್ಯೆ, ರಾಮ ಹೋಗಿರದ ಜಾಗದಲ್ಲಿ ಮಂದಿರ ನಿರ್ಮಾಣವಾಗಿದ್ದು ಹೀಗೆ?

ಭಗವಾನ್ ರಾಮನನ್ನು ಪೂಜಿಸುವ ಅಯೋಧ್ಯೆ ನಗರವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಇದೆ. ಅಯೋಧ್ಯೆಯಿಂದ ಈ ಸ್ಥಳಕ್ಕೆ ಹೇಗೆ ಹೆಸರು ಬಂದಿತು ಮತ್ತು ಭಗವಾನ್ ರಾಮನನ್ನು ಇಲ್ಲಿ ಹೇಗೆ ಪೂಜಿಸಲಾಗುತ್ತದೆ? 

2 Min read
Author : Pavna Das
Published : Jun 15 2024, 05:27 PM IST
Share this Photo Gallery
  • FB
  • TW
  • Linkdin
  • Whatsapp
17

ಉತ್ತರ ಪ್ರದೇಶದ ಅಯೋಧ್ಯೆ ನಗರವನ್ನು (Ayodhya City)  ಹಿಂದೂ ಧರ್ಮದಲ್ಲಿ ಬಹಳ ಪ್ರಮುಖ ತಾಣ. ಇಲ್ಲಿಯೇ ಭಗವಾನ್ ಶ್ರೀರಾಮ ಜನಿಸಿದ್ದು. ರಾಮ ಮಂದಿರ ಮತ್ತು ಬಾಬರಿ ಮಸೀದಿ ಧ್ವಂಸದ ವಿವಾದವನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಈ ಮಧ್ಯೆ ವಿದೇಶದಲ್ಲೂ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೌದು, ಥೈಲ್ಯಾಂಡ್‌ನಲ್ಲಿ ನಿರ್ಮಿಸಲಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಅನುಮೋದನೆ ದೊರೆತಿದೆ. 
 

27

ಥೈಲ್ಯಾಂಡ್ (Thailand) ನಲ್ಲೊಂದು ಅಯೋಧ್ಯೆ ಇದೆಯೇ ಎಂದು ನೀವು ಕೇಳಬಹುದು. ಭಾರತ ಹೊರತುಪಡಿಸಿ, ಥೈಲ್ಯಾಂಡಿನಲ್ಲಿ ಅಯೋಧ್ಯೆಯೂ ಇದೆ. ಆದರೆ ಈ ಅಯೋಧ್ಯೆಯಲ್ಲಿ ಭಗವಾನ್ ರಾಮನಿಲ್ಲ. ಶ್ರೀರಾಮ ಅಲ್ಲಿಗೆ ಹೋಗಿಯೂ ಇಲ್ಲ. ಆದರೆ ಈ ರಾಮನ ನಗರವನ್ನು ಅಲ್ಲಿಗೆ ಬಂದ ಭಾರತದ ಜನರು ಸ್ಥಾಪಿಸಿದ್ದಾರೆ. ಥೈಲ್ಯಾಂಡ್‌ನ ಈ ಅಯೋಧ್ಯೆಯ ವಿಶೇಷತೆ ಏನು?
 

37

ಅಯೋಧ್ಯೆ ಹಿಂದೂ ಧರ್ಮದಿಂದ ಸ್ಫೂರ್ತಿ ಪಡೆದಿದೆ
ಆಗ್ನೇಯ ಏಷ್ಯಾದಲ್ಲಿರುವ ಥೈಲ್ಯಾಂಡ್ ಭಾರತದ ಗಡಿಗಳೊಂದಿಗೆ ಸಂಪರ್ಕ ಹೊಂದಿಲ್ಲ.ಥೈಲ್ಯಾಂಡ್ ಹಿಂದೂ ಧರ್ಮದಿಂದ (Hindu Religion) ಪ್ರೇರಿತವಾಗಿದೆ. ಇಲ್ಲಿ ಜನರು ರಾಮನನ್ನು ದೇವರಂತೆ ಪೂಜಿಸುತ್ತಾರೆ. ವಿಶೇಷವೆಂದರೆ ಥೈಲ್ಯಾಂಡ್ ನಲ್ಲಿ ವಾಲ್ಮೀಕಿ ಬರೆದ ರಾಮಾಯಣವನ್ನು ಮಹಾಕಾವ್ಯವೆಂದು ಪರಿಗಣಿಸಲಾಗಿದೆ. ಥೈಲ್ಯಾಂಡ್ ನಗರದಲ್ಲಿ ಹಿಂದೂಗಳ ಪ್ರಾಬಲ್ಯವಿದೆ. ಈ ಸ್ಥಳವು ಛೋಪ್ರಿಯಾ ಪಾಲಕ್ ಮತ್ತು ಲೋಬ್ಪುರಿ ನದಿಗಳ ನಡುವೆ ಇದೆ ಮತ್ತು ಇದರ ಹೆಸರು ಭಾರತದ ಅಯೋಧ್ಯೆಯಿಂದ ಸ್ಫೂರ್ತಿ ಪಡೆದಿದೆ.
 

47

ತಮಿಳು ಹಿಂದೂ ಧರ್ಮವನ್ನು ಪ್ರಚಾರ ಮಾಡುತ್ತದೆ
ಮಾಧ್ಯಮ ವರದಿ ಪ್ರಕಾರ, ಭಗವಾನ್ ರಾಮ (Lord Shri Rama) ಎಂದಿಗೂ ಇಲ್ಲಿಗೆ ಹೋಗಿಯೇ ಇಲ್ಲ, ಆದರೆ ಭಾರತದಿಂದ ಅನೇಕ ತಮಿಳರು ಅಲ್ಲಿಗೆ ಹೋಗಿ ವಾಸಿಸಲು ಪ್ರಾರಂಭಿಸಿದರು. ಅದರ ನಂತರ ತಮಿಳು ಜನರು ಈ ಸ್ಥಳದಲ್ಲಿ ಹಿಂದೂ ಧರ್ಮವನ್ನು ತೀವ್ರವಾಗಿ ಪ್ರಚಾರ ಮಾಡಿದರು. ಅಷ್ಟೇ ಅಲ್ಲ, ಇಲ್ಲಿನ ರಾಜ ಭಗವಾನ್ ರಾಮನನ್ನು ನಂಬಿದ್ದ. 1360 ರವರೆಗೆ, ಇಲ್ಲಿ ಬೌದ್ಧ ಧರ್ಮವನ್ನು ಅನುಸರಿಸುವುದು ಕಡ್ಡಾಯವಾಗಿತ್ತು. ಆದರೆ ಇಲ್ಲಿನ ಜನರು ಭಗವಾನ್ ರಾಮನನ್ನು ಹೆಚ್ಚು ನಂಬುತ್ತಿರುವುದನ್ನು ನೋಡಿದ ರಾಜ ರಾಮನನ್ನೂ ನಂಬಲು ಪ್ರಾರಂಭಿಸಿದ. ಭಗವಾನ್ ರಾಮನ ಮೇಲಿನ ಭಕ್ತಿಯನ್ನು ಅಧಿಕೃತ ಧರ್ಮವನ್ನಾಗಿ ಮಾಡಿದ.

57

ಆಕರ್ಷಣೆಯ ಕೇಂದ್ರ ರಾಮ್ ನಗರಿ
ಥೈಲ್ಯಾಂಡ್ ನ ಅಯೋಧ್ಯೆ ನಗರದ ಮುಖ್ಯ ಆಕರ್ಷಣೆಯ ಕೇಂದ್ರ ನಗರದ ಮಧ್ಯದಲ್ಲಿರುವ ಪ್ರಾಚೀನ ಉದ್ಯಾನವನವಾಗಿದೆ. ಈ ಉದ್ಯಾನವನದಲ್ಲಿ, ಶಿಖರವಿಲ್ಲದ ಕಂಬಗಳು, ಗೋಡೆಗಳು, ಮೆಟ್ಟಿಲು ಮತ್ತು ಭಗವಾನ್ ಬುದ್ಧನ ಸುಂದರವಾದ ಪ್ರತಿಮೆಗಳು ಜನರ ಗಮನವನ್ನು ಸೆಳೆಯುತ್ತವೆ. ಈ ಉದ್ಯಾನವನದ ಅತ್ಯಂತ ವಿಶೇಷವಾದ ಪ್ರತಿಮೆಯೆಂದರೆ ಬುದ್ಧನ ತಲೆಯನ್ನು ಮರಳು ಕಲ್ಲಿನಿಂದ ಮಾಡಿದ ಪ್ರತಿಮೆ ಮತ್ತು ಪ್ರತಿಮೆಯನ್ನು ಅರಳಿ ಮರದ ಬೇರುಗಳಲ್ಲಿ ಮುಚ್ಚಲಾಗಿದೆ. ಮಾಹಿತಿ ಪ್ರಕಾರ, ಈ ಮರವು ಅಯೋಧ್ಯೆಯಲ್ಲಿರುವ 14ನೇ ಶತಮಾನದ ಪ್ರಾಚೀನ ಸಾಮ್ರಾಜ್ಯವಾದ ವಟ್ ಮಹತ್ಮ ಸ್ಮಾರಕಗಳನ್ನು ಹೊಂದಿರುವ ದೇವಾಲಯಗಳ ಅವಶೇಷಗಳನ್ನು ಹೋಲುತ್ತದೆ. ನೀವು ಎಂದಾದರೂ ಥೈಲ್ಯಾಂಡ್ ಪ್ರವಾಸಕ್ಕೆ ಹೋದರೆ ಮರೆಯದೇ ವಿಸಿಟ್ ಮಾಡಿ.

67

ಬೌದ್ಧ ದೇವಾಲಯ ನಿರ್ಮಾಣ
ದಂತಕಥೆ ಪ್ರಕಾರ, ಇಲ್ಲಿನ ರಾಜ ಒಂದು ದಿನ ಧ್ಯಾನದಲ್ಲಿ ಕುಳಿತಿದ್ದ, ಆಗ ಭೂಮಿಯಿಂದ ಬೆಳಕು ಬರುತ್ತಿರುವಂತೆ ವಿಚಿತ್ರ ಅನುಭವ ಉಂಟಾಯಿತಂತೆ. ಈ ಬೆಳಕಿನಲ್ಲಿ ರಾಜ ಭಗವಾನ್ ಬುದ್ಧನ ಪ್ರತಿಮೆ ನೋಡಿದನಂತೆ. ಅದರ ನಂತರ ಅವರು ಭಗವಾನ್ ಬುದ್ಧನ ದೇವಾಲಯವನ್ನು (Temple of Buddha) ಇಲ್ಲಿ ನಿರ್ಮಿಸಬೇಕೆಂದು ನಿರ್ಧರಿಸಿದ. ಮತ್ತು ಇಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದರು. ಆದಾಗ್ಯೂ, ಪ್ರಸ್ತುತ, ದೇವಾಲಯದ ಅವಶೇಷಗಳು ಮಾತ್ರ ಇಲ್ಲಿ ಉಳಿದಿವೆ.

77

ಅಯೋಧ್ಯೆಯ ಇತಿಹಾಸ
ಇತಿಹಾಸದ ಬಗ್ಗೆ ಹೇಳೋದಾದ್ರೆ, ಥೈಲ್ಯಾಂಡ್ ನ ಪ್ರಾಚೀನ ಹೆಸರು "ಸಿಯಾಮ್". 1612ರವರೆಗೆ ಅಯೋಧ್ಯೆಯು ಸಿಯಾಮ್ ನ ರಾಜಧಾನಿಯಾಗಿತ್ತು. ಜನರು ಇದನ್ನು "ಆಯುಧ" (Ayutha) ಎಂಬ ಹೆಸರಿನಿಂದ ತಿಳಿದಿದ್ದಾರೆ. ಇಂದಿಗೂ, ಥೈಲ್ಯಾಂಡ್ ನ ರಾಷ್ಟ್ರೀಯ ಪಠ್ಯ "ರಾಮಾಯಣ". ಇದನ್ನು ಥಾಯ್ ಭಾಷೆಯಲ್ಲಿ 'ರಾಮಿಕಿನ್ನೆ' ಎಂದು ಕರೆಯಲಾಗುತ್ತೆ. ಇದರರ್ಥ "ರಾಮ-ಕೀರ್ತಿ". ಥೈಲ್ಯಾಂಡ್‌ನಲ್ಲಿ, 'ರಾಮಿಕಿನ್ನೆ' ಆಧಾರಿತ ನಾಟಕಗಳನ್ನು ನೋಡುವುದು ಮತ್ತು ಬೊಂಬೆಗಳನ್ನು ಪ್ರದರ್ಶಿಸುವುದನ್ನು ಧಾರ್ಮಿಕ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ನೀವು ಥೈಲ್ಯಾಂಡ್ ಗೆ ಹೋಗಲು ಯೋಜಿಸುತ್ತಿದ್ದರೆ ನೀವು ಖಂಡಿತವಾಗಿಯೂ ಒಮ್ಮೆ ಇಲ್ಲಿಗೆ ಹೋಗಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಯೋಧ್ಯೆ
ಥೈಲ್ಯಾಂಡ್
ದೇವಸ್ಥಾನ

Latest Videos
Recommended Stories
Recommended image1
ಭಾರತದಲ್ಲಿದೆ ‘Mini Iran’... ಈ ಗಾಜಿನ ದೇಗುಲ ಪ್ರವೇಶಿಸಿದರೆ ಇರಾನ್’ಗೆ ಕಾಲಿಟ್ಟ ಅನುಭವ!
Recommended image2
99 ದೇಶಗಳನ್ನು ಸುತ್ತಿದ ಬಳಿಕ Dr. Bro ಹಾದಿ ಹಿಡಿದ Flying Passport ಜೋಡಿ
Recommended image3
ಅಗ್ಗದ ದರದರಲ್ಲಿ ವಿದೇಶ ಪ್ರವಾಸಕ್ಕೆ Flight Book ಮಾಡೋದು ಹೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved