ಬಿಎಸ್ವೈಗೆ ಕೊರೋನಾ, ಸಿಎಂ ಮನೆಗೆ ಕ್ವಾರಂಟೈನ್ ಸ್ಟಿಕ್ಕರ್!
ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಎ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ವೈದ್ಯರ ಸಲಹೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಬಿಎಸ್ವೈ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ನಡೆಯುತ್ತಿದ್ದರೂ ಅಲ್ಲಿಂದಲೇ ತಮ್ಮ ಕೆಲಸ ಮುಂದುವರೆಸಿದ್ದಾರೆ. ಹೀಗಿರುವಾಗ ಅವರನ್ನು ಭೇಟಿಯಾದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದ್ದು, ಕಾವೇರಿ ನಿವಾಸಕ್ಕೂ ಯಾರನ್ನೂ ಭೇಟಿ ನೀಡಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ.
ಹೌದು ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಬಿಎಸ್ವೈ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೀಗಿರುವಾಗ ಸಿಎಂ ಮನೆಗೆ ಅಧಿಕಾರಿಗಳು ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿದ್ದಾರೆ.
ಕಾವೇರಿ ನಿವಾಸಕ್ಕೆ ಸ್ಟಿಕ್ಕರ್ ಅಂಟಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು.
ನಾವೀಗ ಗೃಹ ಕ್ವಾರಂಟೈನ್ನಲ್ಲಿದ್ದೇವೆ ಎಂಬ ಸಂದೇಶವಿರುವ ಸ್ಟಿಕರ್.
ಜೊತೆಗೆ ಮನೆಗೆ ಭೇಟಿ ನೀಡದಿರಿ ಎಂದೂ ಈ ಸ್ಟಿಕರ್ನಲ್ಲಿ ಬರೆಯಲಾಗಿದೆ.
16ನೇ ತಾರೀಖಿನವರೆಗೆ ಕ್ವಾರಂಟೈನ್ನಲ್ಲಿರುವ ಸ್ಟಿಕ್ಕರ್ ಅಂಟಿಸಿರುವ ಅಧಿಕಾರಿಗಳು.