MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಕಂಡೋರ ಹೆಂಡ್ತಿ ರೀಲ್ಸ್ ಮಾಡೋದನ್ನ ಕದ್ದು ನೋಡಿದ ಕ(ಮ)ಲಾಕರ ಗುರೂಜಿ ಈಗ ಕಂಬಿ ಹಿಂದೆ!

ಕಂಡೋರ ಹೆಂಡ್ತಿ ರೀಲ್ಸ್ ಮಾಡೋದನ್ನ ಕದ್ದು ನೋಡಿದ ಕ(ಮ)ಲಾಕರ ಗುರೂಜಿ ಈಗ ಕಂಬಿ ಹಿಂದೆ!

ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ್ ಭಟ್, ರೀಲ್ಸ್ ಮಾಡುವ ವಿವಾಹಿತೆ ಸುಚಿತ್ರಾಳ ವ್ಯಾಮೋಹಕ್ಕೆ ಬಿದ್ದು ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ಈ ಸಂಬಂಧವು ಘೋರ ದುರಂತಕ್ಕೆ ಕಾರಣವಾಗಿ, ಮಹಿಳೆಯ ಸಂಬಂಧಿಕರ ಮೇಲೆ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಕೊಲೆಯಾಗಿದ್ದು, ಇದೀಗ ಜ್ಯೋತಿಷಿ ಕಂಬಿ ಎಣಿಸುತ್ತಿದ್ದಾರೆ.

2 Min read
Author : Sathish Kumar KH
Published : Feb 04 2026, 05:40 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಯಾವಾಗಲೂ ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದ ಕಂಡೋರ ಹೆಂಡತಿಯನ್ನು ನೋಡಿದ ಬೆಳ್ಳಂಬೆಳಗ್ಗೆ ಜ್ಯೋತಿಷ್ಯ ಹೇಳುವ ಗುರೂಜಿ ಕಮಲಾಕರ್ ಭಟ್ ಇದೀಗ ಕಂಬಿ ಹಿಂದೆ ಬಿದ್ದಿದ್ದಾರೆ. 

27
Image Credit : Asianet News

ಮುಂಜಾನೆ ಟಿವಿ ಪರದೆಯ ಮೇಲೆ ಕುಳಿತು ಭವಿಷ್ಯದ ಮಾತುಗಳನ್ನಾಡುತ್ತಾ, ಕೋಟ್ಯಂತರ ಜನರಿಗೆ ಉಪದೇಶ ನೀಡುತ್ತಿದ್ದ ಆ ಮುಖದ ಹಿಂದೆ ಇಷ್ಟೊಂದು ಕ್ರೌರ್ಯ ಅಡಗಿದೆ ಎಂದು ಯಾರೂ ಊಹಿಸಿರಲಿಲ್ಲ. ದಿನಕ್ಕೆ 700 ಜನರಿಗೆ ಅನ್ನದಾನ ಮಾಡುತ್ತಿದ್ದ 'ಪುಣ್ಯವಂತ'ನ ಅಸಲಿ ಮುಖವಾಡ ಕಳಚಿದೆ. 'ರೀಲ್ಸ್' ಹುಚ್ಚು ಹತ್ತಿಸಿಕೊಂಡಿದ್ದ ವಿವಾಹಿತ ಮಹಿಳೆಯ ವ್ಯಾಮೋಹಕ್ಕೆ ಬಿದ್ದ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್, ಈಗ ತನ್ನ ಭವಿಷ್ಯವನ್ನು ತಾನೇ ಕತ್ತಲಾಗಿಸಿಕೊಂಡು ಜೈಲು ಕಂಬಿ ಎಣಿಸುತ್ತಿದ್ದಾನೆ. ಈ ಅನೈತಿಕ ಸಂಬಂಧದ ಬೆಂಕಿ ಒಂದು ಜೀವವನ್ನು ಬಲಿಪಡೆದಿದ್ದು, ಸಮಾಜವನ್ನೇ ಬೆಚ್ಚಿ ಬೀಳಿಸಿದೆ.

Related Articles

Related image1
ಕಲಾಕಾರ್ ಗುರೂಜಿ ಕಮಲಾಕರ್ ಭಟ್; ಗಂಡ ಡ್ಯೂಟಿಗೆ ಹೋದಾಗ, ಒಬ್ಬಂಟಿ ಆಂಟಿಯನ್ನ ಪಟಾಯಿಸಿದ್ದು ಹೇಗೆ?
Related image2
ದಿನವೂ 700 ಜನರಿಗೆ ಉಚಿತ ಊಟ ಹಾಕುತ್ತಿದ್ದ ಕಮಲಾಕರ್ ಭಟ್; ಸುಚಿತ್ರಾ ಸಹವಾಸದಿಂದ ಜೈಲೂಟಕ್ಕೆ ತಟ್ಟೆ ಹಿಡಿಬೇಕಾಯ್ತು!
37
Image Credit : X

ಸಿದ್ದಾಪುರದ ಮೂಲದ ಕಮಲಾಕರ್ ಭಟ್ ಸಣ್ಣ ವಯಸ್ಸಿನಲ್ಲಿ ಬಡತನದಿಂದ ಬೆಳೆದು ಬಂದವರು. ಕೇರಳದಲ್ಲಿ ವೇದ ಅಧ್ಯಯನ ಮಾಡಿ, ಅರಸೀಕೆಯ ಮುಸ್ಲಿಂ ಕಾಲೇಜಿನಲ್ಲಿ ಸಂಸ್ಕೃತ ಪಾಠ ಮಾಡಿದ್ದ ಈತ, ನಂತರ ಜ್ಯೋತಿಷ್ಯವನ್ನೇ ವೃತ್ತಿ ಮಾಡಿಕೊಂಡಿದ್ದ. 'ನಿತ್ಯಪೂಜೆ ಭಿಕ್ಷಾ ಪಾತ್ರೆ' ಎಂಬ ಅಭಿಯಾನದ ಮೂಲಕ ಹಸಿದವರಿಗೆ ಅನ್ನ ನೀಡುತ್ತಿದ್ದ ಈತನನ್ನು ಜನ 'ಗುರೂಜಿ' ಎಂದೇ ಕರೆಯುತ್ತಿದ್ದರು. ಟಿವಿ ವಾಹಿನಿಗಳಲ್ಲಿ 12 ರಾಶಿಗಳ ಫಲ ಹೇಳುತ್ತಾ ಫೇಮಸ್ ಆಗಿದ್ದ ಈತ, ಈಗ ಕೊಲೆಯ ಆರೋಪ ಹೊತ್ತು ನಿಂತಿದ್ದಾನೆ.

47
Image Credit : Instagram

ಈ ಪ್ರಕರಣದ ಕೇಂದ್ರಬಿಂದು ಸುಚಿತ್ರಾ. ಈಕೆ ಶಿವಮೊಗ್ಗ ಮೂಲದವಳು, 20 ವರ್ಷಗಳ ಹಿಂದೆ ಸಿದ್ದಾಪುರದ ಮಹೇಶ್ ನಾಯ್ಕ್ ಎಂಬುವವರನ್ನು ಮದುವೆಯಾಗಿದ್ದಳು. ಇಬ್ಬರು ಹೆಣ್ಣುಮಕ್ಕಳಿದ್ದ ಸುಂದರ ಸಂಸಾರ ಇದಾಗಿತ್ತು. ಗಂಡ ಮಹೇಶ್ ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದಾಗ, ಇತ್ತ ಸುಚಿತ್ರಾಗೆ ಸೋಷಿಯಲ್ ಮೀಡಿಯಾ ಮತ್ತು 'ರೀಲ್ಸ್' ಗೀಳು ಹತ್ತಿತ್ತು. ಇದೇ ಸಮಯದಲ್ಲಿ ಈಕೆ ಜ್ಯೋತಿಷಿ ಕಮಲಾಕರ್ ಭಟ್ ಕಚೇರಿಯಲ್ಲಿ ಕೆಲಸಕ್ಕೆ ಸೇರುತ್ತಾಳೆ. ಹೆಂಡತಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ಜ್ಯೋತಿಷಿ, ಸುಚಿತ್ರಾಳ ರೀಲ್ಸ್ ನೋಡಿ ಮರುಳಾಗಿ ಆಕೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದನು.

57
Image Credit : Instagram

ಆರು ತಿಂಗಳ ಹಿಂದೆ ಮಕ್ಕಳನ್ನೂ ಕರೆದುಕೊಂಡು ಜ್ಯೋತಿಷಿಯ ಮನೆ ಸೇರಿದ ಸುಚಿತ್ರಾ, ಗಂಡನನ್ನೂ ಮರೆತು ಸಂಸಾರ ಹೂಡಿದ್ದಳು. ಆದರೆ ಜ್ಯೋತಿಷಿಯ ಮನೆಯಲ್ಲಿ ಮಕ್ಕಳಿಗೆ ಟಾರ್ಚರ್ ಕೊಡಲಾರಂಭಿಸಿದಾಗ, ದೊಡ್ಡ ಮಗಳು ಸುಮಶ್ರೀ ರಹಸ್ಯವಾಗಿ ತನ್ನ ತಂದೆ ಮಹೇಶ್‌ಗೆ ಮೆಸೇಜ್ ಮಾಡುತ್ತಾಳೆ. 'ಅಪ್ಪಾ, ನಮ್ಮನ್ನು ಇಲ್ಲಿಂದ ರಕ್ಷಿಸು, ಇಲ್ಲದಿದ್ದರೆ ಇವರು ನಮಗೆ ವಿಷ ಹಾಕುತ್ತಾರೆ' ಎಂದು ಅಂಗಲಾಚುತ್ತಾಳೆ. ಮಗಳ ರಕ್ಷಣೆಗಾಗಿ ಧಾವಿಸಿದ ಮಹೇಶ್, ಮಗಳನ್ನು ತನ್ನ ಅಣ್ಣ ವಸಂತ್ ನಾಯ್ಕ್ ಮನೆಯಲ್ಲಿ ಇರಿಸುತ್ತಾನೆ.

67
Image Credit : Instagram

ತನ್ನ ಕೈಯಿಂದ ಜಾರಿಹೋದ ಸುಚಿತ್ರಾಳ ಮಗಳನ್ನು ಮತ್ತೆ ಪಡೆಯಲು ಜ್ಯೋತಿಷಿ ಕಮಲಾಕರ್ ಭಟ್ 'ಡೆತ್ ಸ್ಕ್ವಾಡ್'ನಂತೆ ದಾಳಿ ನಡೆಸಿದ್ದಾನೆ. ಐವರು ಗೂಂಡಾಗಳನ್ನು ಕರೆದುಕೊಂಡು ಹೋಗಿ ವಸಂತ್ ನಾಯ್ಕ್ ಅವರ ಮನೆಯ ಮೇಲೆ ದಾಳಿ ಮಾಡಿದ್ದಾನೆ. ಈ ಭೀಕರ ಹಲ್ಲೆಯಲ್ಲಿ ವಸಂತ್ ನಾಯ್ಕ್ (43) ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಗಂಡ ಮಹೇಶ್ ಮತ್ತು ನೆರೆಮನೆಯ ಯುವಕ ಕುಮಾರ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

77
Image Credit : Instagram

ದಿನವೂ ಅನ್ನ ನೀಡುತ್ತಿದ್ದ ಕೈಗಳು ಅಂದು ರಕ್ತದ ಓಕುಳಿಯಾಡಿದ್ದವು. ಪ್ರಸ್ತುತ ಸಿದ್ದಾಪುರ ಪೊಲೀಸರು (FIR: 23/26) ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಧರ್ಮೋಪದೇಶ ನೀಡುವವರ ನೈಜ ಮುಖ ಹೇಗಿರುತ್ತದೆ ಎಂಬುದಕ್ಕೆ ಈ ಪ್ರಕರಣ ಕನ್ನಡಿಯಂತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಜ್ಯೋತಿಷ್ಯ
ಉತ್ತರ ಕನ್ನಡ

Latest Videos
Recommended Stories
Recommended image1
Now Playing
ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
Recommended image2
ರಾಜ್ಯದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಗೋಡೆಯಲ್ಲಿ ವೈಯಕ್ತಿಕ ಕ್ಯೂ ಆರ್ ಕೋಡ್ ಅಂಟಿಸಿದ ಸಿಬ್ಬಂದಿ, 23 ಲಕ್ಷ ಗುಳುಂ!
Recommended image3
"ಕ್ಷಮಿಸಿ ಪಪ್ಪಾ" ಕೊರಿಯನ್ ಆನ್‌ಲೈನ್‌ ಗೇಮ್ ಚಟಕ್ಕೆ 3 ಅಪ್ರಾಪ್ತ ಸಹೋದರಿಯರು 9ನೇ ಮಹಡಿಯಿಂದ ಹಾರಿ ಆತ್ಮ*ಹತ್ಯೆ!
Related Stories
Recommended image1
ಕಲಾಕಾರ್ ಗುರೂಜಿ ಕಮಲಾಕರ್ ಭಟ್; ಗಂಡ ಡ್ಯೂಟಿಗೆ ಹೋದಾಗ, ಒಬ್ಬಂಟಿ ಆಂಟಿಯನ್ನ ಪಟಾಯಿಸಿದ್ದು ಹೇಗೆ?
Recommended image2
ದಿನವೂ 700 ಜನರಿಗೆ ಉಚಿತ ಊಟ ಹಾಕುತ್ತಿದ್ದ ಕಮಲಾಕರ್ ಭಟ್; ಸುಚಿತ್ರಾ ಸಹವಾಸದಿಂದ ಜೈಲೂಟಕ್ಕೆ ತಟ್ಟೆ ಹಿಡಿಬೇಕಾಯ್ತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved