MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Science
  • From Gurukula to ISRO: ಗುರುಕುಲದಲ್ಲಿ ವೇದ ಕಲಿತು, ಮಂಗಳೂರು ಆಳ್ವಾಸ್‌ ಕಾಲೇಜಿನಲ್ಲಿ ಓದಿ, ISRO ಸೇರಲು ಯುವ ವಿಜ್ಞಾನಿ ರೆಡಿ!

From Gurukula to ISRO: ಗುರುಕುಲದಲ್ಲಿ ವೇದ ಕಲಿತು, ಮಂಗಳೂರು ಆಳ್ವಾಸ್‌ ಕಾಲೇಜಿನಲ್ಲಿ ಓದಿ, ISRO ಸೇರಲು ಯುವ ವಿಜ್ಞಾನಿ ರೆಡಿ!

ವೇದಗಳನ್ನು ಪಠಿಸುವ ಹುಡುಗ ಇಸ್ರೋ ಸೇರಲಿದ್ದಾನೆ ಎಂದು ಸೋಶಿಯಲ್‌ ಮೀಡಿಯಾ ಪೋಸ್ಟ್‌ವೊಂದು ವೈರಲ್‌ ಆಗ್ತಿದೆ. ಹೌದು, ಗುರುಕುಲದಿಂದ ತರಬೇತಿ ಪಡೆದಿರುವ ಕಣ್ಣೂರಿನ ಗೋವಿಂದ ಕೃಷ್ಣನ್‌ ಎಂ ಎನ್ನುವ ಹುಡುಗ ಇಸ್ರೋದ ಮುಖ್ಯ ಕೇಂದ್ರವಾಗಿರುವ ವಿಕ್ರಮ್‌ ಸಾರಾಭಾಯಿ ಸ್ಪೇಸ್‌ ಸೆಂಟರ್‌ ಸೇರಲಿದ್ದಾರೆ.  

2 Min read
Author : Padmashree Bhat
| Updated : Jun 20 2025, 01:08 PM IST
Share this Photo Gallery
  • FB
  • TW
  • Linkdin
  • Whatsapp
17
ವೇದ ಕಲಿತಿರೋ ಹುಡುಗ ಇಂದು ವಿಜ್ಞಾನಿ!
Image Credit : Meta AI

ವೇದ ಕಲಿತಿರೋ ಹುಡುಗ ಇಂದು ವಿಜ್ಞಾನಿ!

ವೇದಗಳ ಬಗ್ಗೆ ಅಧ್ಯಯನ ಮಾಡಿರುವ ಗೋವಿಂದ ಈಗ ವಿಜ್ಞಾನಿಯಾಗ ಹೊರಟಿರೋದು ವಿಶೇಷವಾಗಿದೆ. ಈ ಬಗ್ಗೆ ಮನೋರಮಾ ನ್ಯೂಸ್‌ ಜೊತೆ ಕೃಷ್ಣ ಗೋವಿಂದ ಮಾತನಾಡಿ "ವೇದಗಳ ಅಧ್ಯಯನದಿಂದ ಕರಿಯರ್‌ ಅವಕಾಶಗಳು ಕಡಿಮೆ ಆಗುತ್ತವೆ ಎಂಬ ತಪ್ಪು ಕಲ್ಪನೆ ಇದೆ ಎನ್ನೋದು ನನಗೆ ಅರಿವಿದೆ. ಜನರು ಆಧ್ಯಾತ್ಮದ ಬಗ್ಗೆ ಯೋಚನೆ ಮಾಡ್ತಾರೆ, ಆದರೆ ವಿಜ್ಞಾನವನ್ನು ಮಿಕ್ಸ್‌ ಮಾಡೋದಿಲ್ಲ. ಆದರೆ ನಾನು ಇದು ಸಾಧ್ಯ ಎಂದು ಸಾಬೀತುಪಡಿಸಿದ್ದೇನೆ. ಬ್ಯಾಲೆನ್ಸ್‌ ಮಾಡೋದರಿಂದ, ಶ್ರದ್ಧೆಯಿಂದ ಇದನ್ನೆಲ್ಲ ಸಾಧಿಸಬಹುದು. ನನ್ನ ಬದುಕಿನ ಒಂದು ಹಂತದಲ್ಲಿ ವೇದಗಳನ್ನು ಕಲಿಯುತ್ತ, ಇನ್ನೊಮ್ಮೆ ವಿಜ್ಞಾನದ ಕಡೆಗೆ ಗಮನ ಕೊಟ್ಟಿದ್ದೆ” ಎಂದಿದ್ದಾರೆ.

27
ನಾಲ್ಕನೇ ತರಗತಿಯಲ್ಲೇ ಉಪನಯನ!
Image Credit : Meta AI

ನಾಲ್ಕನೇ ತರಗತಿಯಲ್ಲೇ ಉಪನಯನ!

ಪಯ್ಯನ್ನುರ್‌ನಲ್ಲಿ ನಾಲ್ಕನೇ ತರಗತಿ ಕಲಿತು, ಅವರು 2011ರಲ್ಲಿ ಭ್ರಮಸ್ವಂ ಮಧಂ ಎಂಬ ತ್ರಿಶೂರದ ವೇದಿಕ್‌ ಸ್ಕೂಲ್‌ಗೆ ಜಾಯಿನ್‌ ಆದರು. ಅಲ್ಲಿ ಅವರು ಗುರುಕುಲ ಶಿಕ್ಷಣ ಪಡೆದರು. ಐದು ವರ್ಷಗಳ ಈ ಕೋರ್ಸ್‌ನ್ನು ನಾಲ್ಕು ವರ್ಷದಲ್ಲಿ ಕಲಿತರು. ಮಾಜಿ ಇಂಡಿಯಾ ನ್ಯಾವಿ ಅಧಿಕಾರಿ ಆಗಿರುವ ತಂದೆ ಹರೀಶ್‌ಕುಮಾರ್‌ಸಲಹೆಯಂತೆ ಗೋವಿಂದ ಅವರು ವೇದ ಅಧ್ಯಯನ ಮಾಡಿದರು. ನಾಲ್ಕನೇ ತರಗತಿಯಲ್ಲಿದ್ದಾಗ ಗೋವಿಂದ ಅವರಿಗೆ ಉಪನಯನ ಮಾಡಲಾಯ್ತು.

Related Articles

Related image1
ಶುಕ್ಲಾ ಪ್ರಯಾಣದ ರಾಕೆಟ್‌ ದುರಂತ ತಪ್ಪಿಸಿದ್ದು ಇಸ್ರೋ! ತಪ್ಪಿತು ಭಾರೀ ಅವಘಡ
Related image2
ಫಾಲ್ಕನ್‌ ರಾಕೆಟ್‌ನಲ್ಲಿ ಲೀಕ್‌: ಬಾಹ್ಯಾಕಾಶದಲ್ಲಿ ಆಗಲಿದ್ದ ಮಹಾದುರಂತ ತಪ್ಪಿಸಿದ ಇಸ್ರೋ!
37
ಯಜುರ್ವೇದ ಕಲಿತರು!
Image Credit : Meta AI

ಯಜುರ್ವೇದ ಕಲಿತರು!

"ನನಗೆ ಆರಂಭದಲ್ಲಿ ಅಪ್ಪ-ಅಮ್ಮನನ್ನು ಬಿಟ್ಟಿರೋದು ನಿಜಕ್ಕೂ ಕಷ್ಟ ಆಗಿತ್ತು. ನನ್ನ ಬ್ಯಾಚ್‌ನಲ್ಲಿ ಕೇವಲ 5 ವಿದ್ಯಾರ್ಥಿಗಳಿದ್ದರು. ನಾವು ಯಜುರ್ವೇದ ಆಯ್ಕೆ ಮಾಡಿಕೊಂಡೆವು. ಅದಕ್ಕೆ ಯಾವುದೇ ದೃಶ್ಯಪಾಠ ಇರಲಿಲ್ಲ, ಬುಕ್‌ ಇರಲಿಲ್ಲ. ನೇರವಾಗಿ ಗುರುಗಳು ಹೇಳಿಕೊಟ್ಟಿದ್ದನ್ನು ಕಲಿಯಬೇಕಿತ್ತು. ಆರಂಭದ ನಾಲ್ಕು ವರ್ಷ ಸರ್ಕಾರಿ ಶಾಲೆ ಸೇರಿದ್ದರೂ ಕೂಡ ಫೈನಲ್‌ ಎಕ್ಸಾಮ್‌ ಮಾತ್ರ ಬರೆದಿದ್ದರು” ಎಂದಿದ್ದಾರೆ.

47
ಮಂಗಳೂರು ಆಳ್ವಾಸ್‌ ಸೇರಿದ್ರು!
Image Credit : Meta AI

ಮಂಗಳೂರು ಆಳ್ವಾಸ್‌ ಸೇರಿದ್ರು!

"ಬೆಳಗ್ಗೆ 5 ಗಂಟೆಗೆ ಎದ್ದು, ವೇದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕಿತ್ತು, ಅಲ್ಲಿ ಶ್ರದ್ಧೆ ಮುಖ್ಯ ಆಗಿತ್ತು, ಎಲ್ಲವೂ ಶೆಡ್ಯೂಲ್‌ ಆಗಿತ್ತು. ಅಲ್ಲಿ ಮಟಿರಿಯಲ್‌ ವಸ್ತುಗಳಿಲ್ಲ. ಎಲ್ಲವನ್ನು ಕೇಳಿಸಿಕೊಂಡು, ನೆನಪಿನಲ್ಲಿ ಇಟ್ಟುಕೊಳ್ಳಬೇಕಿತ್ತು" ಎಂದು ಅವರು ಹೇಳಿದ್ದಾರೆ. ಹೈಸ್ಕೂಲ್‌ ಶಿಕ್ಷಣಕ್ಕೆ ಅವರು ರೆಗ್ಯೂಲರ್‌ ಸ್ಕೂಲ್‌ ಆಯ್ಕೆ ಮಾಡಿಕೊಂಡರೂ ಕೂಡ ಅವರು ಯಾವುದನ್ನೂ ಕೂಡ ಬಿಡದೆ ಬ್ಯಾಲೆನ್ ಮಾಡಿದರು. ಹತ್ತನೇ ಕ್ಲಾಸ್‌ನಲ್ಲಿ ಮುಗಿಯುತ್ತಿದ್ದಂತೆ, ಅವರು ಮಂಡಗಳೂರಿನಲ್ಲಿರುವ ಮೂಡುಬಿದಿರಿಯ ಆಳ್ವಾಸ್‌ ಕಾಲೇಜು ಸೇರಿದರು. JEE ಮೇನ್‌ ಹಾಗೂ ಅಡ್ವಾನ್ಸ್‌ಡ್‌ ಎಕ್ಸಾಮ್‌ ಕ್ಲಿಯರ್‌ ಮಾಡಿದರು.

57
ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಶನ್‌ ಸೇರಿದ್ರು!
Image Credit : Meta AI

ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಶನ್‌ ಸೇರಿದ್ರು!

ಆಮೇಲೆ ವಲೈಮಾಲಾದಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೇಸ್‌ ಸಾಯಿನ್ಸ್‌ & ಟೆಕ್ನೋಲಜಿ ಪ್ರವೇಶ ಮಾಡಿದರು. 2021ರಲ್ಲಿ ಬಿಟೆಕ್ ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಶನ್‌ ಪ್ರೋಗ್ರಾಮ್‌ ಜಾಯಿನ್‌ ಆದರು.

67
ನನ್ನ ಉಳಿದ ಬ್ಯಾಚ್‌ಮೇಟ್‌ಗಳು ಪೌರೋಹಿತರಾದ್ರು..
Image Credit : Meta AI

ನನ್ನ ಉಳಿದ ಬ್ಯಾಚ್‌ಮೇಟ್‌ಗಳು ಪೌರೋಹಿತರಾದ್ರು..

“ನಾನು ಅಕಾಡೆಮಿಕ್‌ ಕರಿಯರ್‌ನಲ್ಲಿ ಬ್ಯುಸಿ ಇದ್ದರೂ ಕೂಡ ದಿನದಲ್ಲಿ ಒಂದು ಗಂಟೆ ವೇದಾಧ್ಯಯನಕ್ಕೆ ಮೀಸಲಿಡುತ್ತಿದ್ದೆ. ಇದೊಂದು ಥರ ಜಿಮ್‌ಗೆ ಹೋದಂತೆ. ಜಿಮ್‌ನಲ್ಲಿ ಮಸಲ್‌ ಸ್ಟ್ರೆಂಥ್‌ ಎಂದು ವರ್ಕ್‌ಮಾಡೋ ಥರ ಇಲ್ಲಿ ನಾನು ಮಾನಸಿಕ ಸ್ಪಷ್ಟನೆ, ಏಕಾಗ್ರತೆ, ನೆನಪಿನ ಶಕ್ತಿ ಕಡೆಗೆ ಫೋಕಸ್‌ ಮಾಡ್ತಿದ್ದೆ. ಗುರುಕುಲದಲ್ಲಿ ಉಳಿದ ನನ್ನ ಬ್ಯಾಚ್‌ಮೇಟ್‌ಗಳು ಪೌರೋಹಿತ್ಯ ವೃತ್ತಿ ಮಾಡುತ್ತಿದ್ದಾರೆ. ಆದರೆ ನಾನು ಮಾತ್ರ ಬೇರೆ ಹಾದಿ ಹಿಡಿದೆ. ಗಣಪತಿ ಹೋಮ ಮುಂತಾದ ಬೇಸಿಕ್‌ ಪೂಜೆಗಳ ಬಗ್ಗೆ ನನಗೆ ಅರಿವಿದೆ” ಎಂದಿದ್ದಾರೆ.

77
ಮಕ್ಕಳಿಗೆ ಹೇಳಿಕೊಡಬೇಕು!
Image Credit : Meta AI

ಮಕ್ಕಳಿಗೆ ಹೇಳಿಕೊಡಬೇಕು!

ICRB ಸಂದರ್ಶನದಲ್ಲಿ ಆಯ್ಕೆ ಆದಬಳಿಕ ಅವರು ಇಸ್ರೋಗೆ ಅಧಿಕೃತವಾಗಿ ಜಾಯಿನ್‌ ಆಗಲಿದ್ದಾರೆ. "ಇಸ್ರೋಗೆ ಜಾಯಿನ್‌ ಆದ್ಮೇಲೆ ನನಗೆ ಎಷ್ಟು ಗಂಟೆ ಸಮಯ ಸಿಗತ್ತೆ ಅಂತ ಗೊತ್ತಿಲ್ಲ. ಆದರೆ ದಿನದಲ್ಲಿ ಒಂದು ಅಥವಾ ಎರಡು ಗಂಟೆ ವೇದಗಳ ಕಡೆಗೆ ಗಮನ ಕೊಡುವ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ನಾನು ಕಲಿತಿದ್ದನ್ನು ಮಕ್ಕಳಿಗೆ ಹೇಳಿಕೊಡಬೇಕು.ವೇದಗಳನ್ನು ಕಲಿಯೋದರಲ್ಲಿ ಯಾವುದೇ ನಷ್ಟವಿಲ್ಲ, ಅವು ನಮಗೆ ಶ್ರದ್ಧೆ, ಏಕಾಗ್ರತೆ, ಶಕ್ತಿ ಕೊಡುತ್ತವೆ" ಎಂದಿದ್ದಾರೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ತಂತ್ರಜ್ಞಾನ
ಜ್ಯೋತಿಷ್ಯ
ಸುದ್ದಿ
ಜೀವನಶೈಲಿ

Latest Videos
Recommended Stories
Recommended image1
ಗಂಟೆಗೆ 1670 KM ವೇಗದಲ್ಲಿ ಭೂಮಿ ತಿರುಗುವ ಅದ್ಭುತ ದೃಶ್ಯ ಸೆರೆ, ಆದ್ರೂ ಅನಭವಕ್ಕೆ ಬರ್ತಿಲ್ಲ ಏಕೆ?
Recommended image2
ಏಲಿಯನ್ಸ್​ ಜೊತೆಗೆ ಹಾರುವ ತಟ್ಟೆಗೇ ಕೈಹಾಕಿದ ಟ್ರಂಪ್​! ಬಾಬಾ ವಾಂಗಾ ಭವಿಷ್ಯ ನಿಜವಾಗ್ತಿದ್ಯಾ?
Recommended image3
ಭೂಮಿಯತ್ತ ಬರುತ್ತಿವೆ 15 ಸಾವಿರ ಸಿಟಿ ಕಿಲ್ಲರ್ಸ್‌, ಅವುಗಳನ್ನು ತಡೆಯುವ ಯಾವುದೇ ದಾರಿ ಇಲ್ಲ: ನಾಸಾ ವಾರ್ನಿಂಗ್‌
Related Stories
Recommended image1
ಶುಕ್ಲಾ ಪ್ರಯಾಣದ ರಾಕೆಟ್‌ ದುರಂತ ತಪ್ಪಿಸಿದ್ದು ಇಸ್ರೋ! ತಪ್ಪಿತು ಭಾರೀ ಅವಘಡ
Recommended image2
ಫಾಲ್ಕನ್‌ ರಾಕೆಟ್‌ನಲ್ಲಿ ಲೀಕ್‌: ಬಾಹ್ಯಾಕಾಶದಲ್ಲಿ ಆಗಲಿದ್ದ ಮಹಾದುರಂತ ತಪ್ಪಿಸಿದ ಇಸ್ರೋ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved