MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಸುದೀಪ್, ಪುನೀತ್ ಹೆಜ್ಜೆಯಲ್ಲಿ ಯುವ ರಾಜ್‌ಕುಮಾರ್ 'ಎಕ್ಕ' ಸಿನಿಮಾದ ಭಕ್ತಿಯ ಪಯಣ

ಸುದೀಪ್, ಪುನೀತ್ ಹೆಜ್ಜೆಯಲ್ಲಿ ಯುವ ರಾಜ್‌ಕುಮಾರ್ 'ಎಕ್ಕ' ಸಿನಿಮಾದ ಭಕ್ತಿಯ ಪಯಣ

ನಟ ಯುವರಾಜ್‌ ಕುಮಾರ್‌ ಅವರು 'ಎಕ್ಕ' ಚಿತ್ರದ ಬಿಡುಗಡೆಗೂ ಮುನ್ನ ರಾಯಚೂರಿನ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ, ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಟ ಸುದೀಪ್, ಪುನೀತ್ ಬಳಿಕ ಯುವ ಇಲ್ಲಿಗೆ ಭೇಟಿ ನೀಡಿದ್ದಾರೆ.

1 Min read
Sathish Kumar KH
Published : Jul 06 2025, 06:35 PM IST| Updated : Jul 06 2025, 06:38 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ರಾಯಚೂರು (ಜು.06): ನಟ ಯುವ ರಾಜ್ ಕುಮಾರ್ ಅವರು ಹೊಸ ಚಿತ್ರ 'ಎಕ್ಕ' ಬಿಡುಗಡೆಯ ಹಿನ್ನೆಲೆಯಲ್ಲಿ ಟೆಂಪಲ್ ರನ್ ಪ್ರಾರಂಭಿಸಿದ್ದಾರೆ. ಇಂದು ರಾಯಚೂರಿನ ಪ್ರಸಿದ್ಧ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದರು. ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿ, ಪ್ರದಕ್ಷಿಣೆ ಹಾಕಿದ ಬಳಿಕ, ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

25
Image Credit : Asianet News

ಧಾರ್ಮಿಕ ಪ್ರವಾಸ – ಮನಸ್ಸಿಗೆ ಧೈರ್ಯ!

ದೇವರ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಯುವ ರಾಜ್ ಕುಮಾರ್, 'ಎಕ್ಕ' ಸಿನಿಮಾ ಆರಂಭಿಸುವ ಮುನ್ನ ಮಂತ್ರಾಲಯದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಿಸಿದ್ದೆ. ಹೊಸ ಕೆಲಸ ಶುರು ಮಾಡುವ ಮುನ್ನ ನಾವು ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುತ್ತೇವೆ. ಅದೇ ನಮಗೆ ದೊಡ್ಡ ಧೈರ್ಯ ಎಂದು ಹೇಳಿದರು.

Related Articles

Related image1
Yuva Rajkumar: ಹುಟ್ಟುಹಬ್ಬದಂದು ಕೇಕ್ ಕಟ್ ಮಾಡದ ಯುವ ರಾಜ್‌ಕುಮಾರ್, ಉಗ್ರರ ಕೃತ್ಯ ಖಂಡಿಸಿದ ನಟ!
Related image2
ಎಕ್ಕ ಅಡ್ಡ ಸೇರಿದ ರಾಯಲ್ ಬ್ಯೂಟಿ ಸಂಜನಾ ಆನಂದ್‌: ಯುವ ರಾಜ್‌ಕುಮಾರ್‌ಗೆ ಜೋಡಿಯಾಗ್ತಾರಾ?
35
Image Credit : Asianet News

ಇದೇ ಸಂದರ್ಭದಲ್ಲಿಯೇ ಅವರು 'ಇಂದು ರಾಯಚೂರಿನ ಆಂಜನೇಯಸ್ವಾಮಿ ದರ್ಶನ ಪಡೆದೆ. ನನ್ನ ಚಿಕ್ಕಪ್ಪ ಪುನೀತ್ ಹಾಗೂ ನಟ ಸುದೀಪ್ ಅವರು ಇಲ್ಲಿಗೆ ಬಂದಿದ್ದನ್ನು ನಾನು ಸ್ಮರಿಸುತ್ತೇನೆ' ಎಂದರು.

45
Image Credit : Asianet News

'ಎಕ್ಕ' ಸಿನಿಮಾ ಸಂದೇಶ-ಮನುಷ್ಯನಲ್ಲಿ ಒಳ್ಳೆಯತನ ಉಳಿಯಬೇಕು

ನಟ ಯುವ ರಾಜ್ ಕುಮಾರ್ ಮಾತನಾಡುತ್ತಾ, 'ಮನುಷ್ಯನಲ್ಲಿ ಒಳ್ಳೆತನವನ್ನು ಕಾಪಾಡಿಕೊಳ್ಳಬೇಕು ಎಂಬುದು 'ಎಕ್ಕ' ಚಿತ್ರದ ಪ್ರಮುಖ ಸಂದೇಶವಾಗಿದೆ. ನಾನು ಜಾಕಿ ಸಿನಿಮಾದ ಪಾತ್ರದಿಂದ ಪ್ರೇರಣೆ ಪಡೆದು ಈ ಪಾತ್ರ ಮಾಡುತ್ತಿದ್ದೇನೆ' ಎಂದು ಹೇಳಿದರು. 'ಬ್ಯಾಂಗಲ್ ಬಂಗಾರಿ' ಹಾಡು ಯಶಸ್ವಿಯಾಗಿ ಹಿನ್ನೆಲೆಯಲ್ಲೇ 'ಎಕ್ಕ' ಸಿನಿಮಾದ ಮೇಲೆ ಅಪಾರ ನಿರೀಕ್ಷೆ ಇದೆ. ದೇವರ ಆಶೀರ್ವಾದವೇ ನಮ್ಮನ್ನ ಮುಂದಕ್ಕೆ ತರುತ್ತದೆ ಎಂದು ನಟ ಅಭಿಪ್ರಾಯಪಟ್ಟರು.

55
Image Credit : Asianet News

ದೇವರ ದರ್ಶನದ ವೇಳೆ ಫ್ಯಾನ್ಸ್ ಹೆಜ್ಜೆ!

ದೇವಾಲಯದ ಎದುರು ನಟ ಯುವ ರಾಜ್ ಕುಮಾರ್ ಅನ್ನು ನೋಡಿದ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಸೇರಿದ್ದು ಪೊಲೀಸರು ಅಭಿಮಾನಿಗಳನ್ನು ನಿಯಂತ್ರಣ ಮಾಡುವುದಕ್ಕೆ ಹರಸಾಸಹಪಟ್ಟರು. ಇನ್ನು ನಾಯಕನ ಜೊತೆಗೆ ಫೋಟೋ ತೆಗೆದು ಕೊಂಡರು. ದೇವರಿಗೆ ಭಕ್ತಿ ಸಮರ್ಪಣೆ ಮತ್ತು ಇಲ್ಲಿನ ಅಭಿಮಾನಿಗಳ ಪ್ರೀತಿ ನೋಡಿ ಮತ್ತಷ್ಟು ಒಳ್ಳೆಯ ಸಿನಿಮಾ ಮಾಡುವ ಉತ್ಸಾಹ ಹೆಚ್ಚಾಗಿದೆ ಎಂದು ಹೇಳಿದರು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಪುನೀತ್ ರಾಜ್‌ಕುಮಾರ್
ಕಿಚ್ಚ ಸುದೀಪ್
ಹನುಮ ಜಯಂತಿ
ರಾಯಚೂರು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved