MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಕೊನೆಯ ಬಾರಿ ಅತ್ತಿದ್ದನ್ನು ಹೇಳಿಕೊಂಡ ಉಪೇಂದ್ರ; ಈಗ ಕಣ್ಣೀರು ಬತ್ತಿದೆ ಎಂದ ರಿಯಲ್ ಸ್ಟಾರ್

ಕೊನೆಯ ಬಾರಿ ಅತ್ತಿದ್ದನ್ನು ಹೇಳಿಕೊಂಡ ಉಪೇಂದ್ರ; ಈಗ ಕಣ್ಣೀರು ಬತ್ತಿದೆ ಎಂದ ರಿಯಲ್ ಸ್ಟಾರ್

Upendra's Tears: ರಿಯಲ್ ಸ್ಟಾರ್ ಉಪೇಂದ್ರ ಅವರು '45' ಸಿನಿಮಾ ಪ್ರಚಾರದ ವೇಳೆ, ತಾವು ಮೊದಲ ಬಾರಿಗೆ ಕಣ್ಣೀರು ಹಾಕಿದ ಕ್ಷಣವನ್ನು ಬಹಿರಂಗಪಡಿಸಿದ್ದಾರೆ. ತನ್ನ ವಿಚಾರಧಾರೆಗಳಿಗೂ ದ್ರೋಹ ಬಗೆಯಲಾಗದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಅನುಭವಿಸಿದ ನೋವಿನಿಂದ ಅತ್ತಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

2 Min read
Mahmad Rafik
Published : Dec 21 2025, 12:22 PM IST
Share this Photo Gallery
  • FB
  • TW
  • Linkdin
  • Whatsapp
16
'ನಾನು' ಕಣ್ಣೀರು ಹಾಕಿದ್ದು ಯಾವಾಗ?
Image Credit : Zee Kannada FB

'ನಾನು' ಕಣ್ಣೀರು ಹಾಕಿದ್ದು ಯಾವಾಗ?

ರಿಯಲ್ ಸ್ಟಾರ್ ಉಪೇಂದ್ರ ಮೊದಲ ಬಾರಿಗೆ ತಮ್ಮೊಳಗಿನ 'ನಾನು' ಕಣ್ಣೀರು ಹಾಕಿದ್ದು ಯಾವಾಗ ಮತ್ತು ಯಾಕೆ ಎಂಬುದನ್ನು ಹೇಳಿಕೊಂಡಿದ್ದಾರೆ. ನಂತರ ಈಗ ತಮ್ಮಲ್ಲಿಯ ಕಣ್ಣೀರು ಬತ್ತಿದೆ ಎಂಬ ಮಾತನ್ನು ಸಹ ಉಪೇಂದ್ರ ಹೇಳಿದ್ದಾರೆ. ಉಪೇಂದ್ರ ಕಣ್ಣೀರಿಗೆ ಕಾರಣವಾಗಿದ್ದು ಯಾವ ವಿಷಯ ಎಂಬುದನ್ನು ನೋಡೋಣ ಬನ್ನಿ.

26
45 ಸಿನಿಮಾ ಪ್ರಚಾರದಲ್ಲಿ ಉಪೇಂದ್ರ ಬ್ಯುಸಿ
Image Credit : Zee Kannada FB

45 ಸಿನಿಮಾ ಪ್ರಚಾರದಲ್ಲಿ ಉಪೇಂದ್ರ ಬ್ಯುಸಿ

ಉಪೇಂದ್ರ, ಶಿವರಾಜ್‌ಕುಮಾರ್ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ 45 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಉಪೇಂದ್ರ, ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋಗೆ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕಿ ಅನುಶ್ರೀ , ಕನ್ನಡಿಯನ್ನು ಉಪೇಂದ್ರ ಮುಂದೆ ಇರಿಸುತ್ತಾರೆ. ಈ ಕನ್ನಡಿಯೊಳಗಿನ ಉಪೇಂದ್ರ ಯಾವತ್ತಾದ್ರೂ ಅತ್ತಿದ್ದಾರೆ ಎಂದು ಕೇಳುತ್ತಾರೆ.

Related Articles

Related image1
ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
Related image2
ಉಪೇಂದ್ರ-ಶಿವಣ್ಣ-ರಾಜ್‌ ಬಿ ಶೆಟ್ಟಿ '45' ಚಿತ್ರಕ್ಕೆ ಹೈ ಹೈಪ್; ರಮೇಶ್ ರೆಡ್ಡಿ ಬಿಗ್ ಬಜೆಟ್ ಸಿನಿಮಾಗೆ ಭಾರೀ ಹವಾ!
36
ಅನುಶ್ರೀ ಪ್ರಶ್ನೆಗೆ ಉಪೇಂದ್ರ ಹೇಳಿದ್ದೇನು?
Image Credit : Zee Kannada FB

ಅನುಶ್ರೀ ಪ್ರಶ್ನೆಗೆ ಉಪೇಂದ್ರ ಹೇಳಿದ್ದೇನು?

ಅನುಶ್ರೀ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ಕನ್ನಡಿಯೊಳಗಿರುವ ಉಪೇಂದ್ರ ತುಂಬಾ ಬಾರಿ ಅತ್ತಿದ್ದಾನೆ. ಇತ್ತೀಚೆಗೆ ಪ್ರಜಾಕೀಯ ಎಂಬ ಕಲ್ಪನೆ ಮಾಡಿದ್ದೆ. ಒಬ್ಬರು ಬಂದು ಪಕ್ಷ ತೆಗೆದುಕೊಳ್ಳಿ ಎಂದು ನೀಡಿದ್ರು. ನೀವು ಹೇಳಿದ್ದೆ ಕರೆಕ್ಟ್, ಪಕ್ಷದ ಎಲ್ಲಾ ಚಟುವಟಿಕೆಗಳನ್ನು ಮಾಡಿಕೊಂಡು ಹೋಗಿ ಎಂದು ಹೇಳಿದರು.

46
ಕಣ್ಣೀರಿಗೆ ಕಾರಣ ಏನು?
Image Credit : Zee Kannada FB

ಕಣ್ಣೀರಿಗೆ ಕಾರಣ ಏನು?

ನಾವು ಸಹ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆಗೆ ಮುಂದಾದೀವಿ. ಇನ್ನೇನು ಚುನಾವಣೆಗೆ ಹೋಗಬೇಕು ಅನ್ನುವಷ್ಟರಲ್ಲಿ ನೀವು ಸರಿ ಇಲ್ಲ, ನಿಮ್ಮ ಯೋಚನೆ ವರ್ಕೌಟ್ ಆಗಲ್ಲ. ನಮ್ಮ ದಾರಿಯಲ್ಲಿಯೇ ಹೋಗಬೇಕು ಎಂದು ಹೇಳಿದ್ದರು. ಆ ವೇಳೆಗಾಗಲೇ ನನ್ನನ್ನು ನಂಬಿಕೊಂಡು 200 ಜನರು ಬಂದಿದ್ದರು. ಆ ಸಮಯದಲ್ಲಿ ನನಗೆ ಸಿಕ್ಕಾಪಟ್ಟೆ ಫೀಲ್ ಆಯ್ತು.

56
ಅದೇ ಕೊನೆ!
Image Credit : Zee Kannada FB

ಅದೇ ಕೊನೆ!

ಚುನಾವಣೆಗೆ ಸ್ಪರ್ಧಿಸಲು ನನ್ನೊಂದಿಗೆ ಸುಮಾರು 200 ಜನರು ಬಂದಿದ್ದರು. ಇವರನ್ನು ಬಿಡುವ ಹಾಗಿಲ್ಲ, ಹಿಡಿದುಕೊಳ್ಳುವ ಹಾಗಿಲ್ಲ ಎಂಬ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಅವರೆಲ್ಲರನ್ನೂ ಬಿಟ್ರೆ ಮೋಸ ಮಾಡಿದಂತಾಗುತ್ತಿತ್ತು. ಹೋದ್ರೆ ನನ್ನ ವಿಚಾರಧಾರೆಗಳಿಗೆ ದ್ರೋಹ ಮಾಡಿದಂತಾಗುತ್ತಿತ್ತು. ಆ ಸಮಯದಲ್ಲಿ ತುಂಬಾ ನೋವಾಗಿ ಅತ್ತಿದ್ದೆ ಮತ್ತು ಅದೇ ಕೊನೆ. ಆದ್ರೆ ಈ ಆ ಕಣ್ಣೀರು ಬತ್ತಿದೆ ಎಂದು ಉಪೇಂದ್ರ ತಿಳಿಸಿದರು.

ಇದನ್ನೂ ಓದಿ: ನಾನು ಸೈಲೆಂಟ್​ ಇರೋದು ಬಾಯಿ ಇಲ್ಲ ಅಂತಲ್ಲ, ಹೇಗೆ ತಟ್ಟಬೇಕೆನ್ನೋದು ಗೊತ್ತಿದೆ: ಸುದೀಪ್​ ಖಡಕ್​ ವಾರ್ನಿಂಗ್​!

66
ಅಭಿಮಾನಿಗಳು ಹೇಳಿದ್ದೇನು?
Image Credit : Zee Kannada FB

ಅಭಿಮಾನಿಗಳು ಹೇಳಿದ್ದೇನು?

ಉಪೇಂದ್ರ ಅವರ ಈ ಮಾತುಗಳನ್ನ ಕೇಳಿದ ಅಭಿಮಾನಿಗಳು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇರುವುದರಲ್ಲಿ ಬುದ್ಧಿವಂತರುನೀವು ನಿಮ್ಮನ್ನೇ ನಂಬಿಸಿ ನಿಮಗೂ ನೋವು ಮಾಡಿದ್ದಾರೆ .ಇರಲಿ ನೀವೂ ಮೋಸಹೋಗುವ ಸ್ಥಿತಿಗೆ ಬಂದರೆ ಇನ್ನೂ ಮುಂದೆ ಯಾರನ್ನೂ ಯಾರೂ ನಂಬಲು ಕಷ್ಟವಾಗುತ್ತದೆ. ನಿಮ್ಮ ಕಣ್ಣೀರು ನಿಮ್ಮನ್ನು ನಂಬಿ ಬಂದವರಿಗೆ ಎನ್ನುವ ಸಂಕಟವೇ ಹೊರತು ಜನ ಅಂದರೆ ನಾವೆಲ್ಲಾ ಎನ್ನುವ ತಿಳುವಳಿಕೆ ಬರುವಷ್ಟರಲ್ಲಿ ಇನ್ನೂ ಏನೇನು ಅನಾಹುತಗಳು ಆಗುತ್ತದೆಯೋ ಅನ್ನುವುದೇ ಚಿಂತೆ ಎಂದು ಶೋಬನ್ ಕುಮಾರ್ ಎಂಬವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆಯೇ 'ಕಚಡಾ ನನ್​ ಮಗನೆ, ಪಾಪಿ ನನ್​ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್​ ನಟರು ಸುಸ್ತು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಉಪೇಂದ್ರ
ಸ್ಯಾಂಡಲ್‌ವುಡ್
ರಾಜಕೀಯ ಪಕ್ಷ
ಮನರಂಜನಾ ಸುದ್ದಿ

Latest Videos
Recommended Stories
Recommended image1
ನಾನು ಸೈಲೆಂಟ್​ ಇರೋದು ಬಾಯಿ ಇಲ್ಲ ಅಂತಲ್ಲ, ಹೇಗೆ ತಟ್ಟಬೇಕೆನ್ನೋದು ಗೊತ್ತಿದೆ: ಸುದೀಪ್​ ಖಡಕ್​ ವಾರ್ನಿಂಗ್​!
Recommended image2
ವೇದಿಕೆ ಮೇಲೆಯೇ 'ಕಚಡಾ ನನ್​ ಮಗನೆ, ಪಾಪಿ ನನ್​ ಮಗನೇ' ಎಂದೆಲ್ಲಾ ಬೈಯೋದಾ ನಟ ಉಪೇಂದ್ರ? ಸ್ಟಾರ್​ ನಟರು ಸುಸ್ತು!
Recommended image3
ಚೆಲುವಿನ ಚಿತ್ತಾರ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ಹೇಗಾಗಿದ್ದಾನೆ?
Related Stories
Recommended image1
ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
Recommended image2
ಉಪೇಂದ್ರ-ಶಿವಣ್ಣ-ರಾಜ್‌ ಬಿ ಶೆಟ್ಟಿ '45' ಚಿತ್ರಕ್ಕೆ ಹೈ ಹೈಪ್; ರಮೇಶ್ ರೆಡ್ಡಿ ಬಿಗ್ ಬಜೆಟ್ ಸಿನಿಮಾಗೆ ಭಾರೀ ಹವಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved