MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • 'ಆ ಕಾರಣ'ಕ್ಕೆ ಆತ್ಮ*ಹತ್ಯೆ ಮಾಡಿಕೊಂಡ ಮುಟ್ಠಾಳ.. ಸಿಡಿದೆದ್ದ ರಚಿತಾ ರಾಮ್!

'ಆ ಕಾರಣ'ಕ್ಕೆ ಆತ್ಮ*ಹತ್ಯೆ ಮಾಡಿಕೊಂಡ ಮುಟ್ಠಾಳ.. ಸಿಡಿದೆದ್ದ ರಚಿತಾ ರಾಮ್!

ಬಾಡಿ ಶೇಮಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬೋಲ್ಡ್ ಎನ್ನಬಹುದಾದ ಉತ್ತರ ಕೊಟ್ಟಿದ್ದಾರೆ. 'ಹೆಣ್ಣು ಮಕ್ಕಳು ಯಾಕೆ ದಪ್ಪ ಆಗುತ್ತಾರೆ? ಅವರಿಗೆ ಎದುರಾಗುವ ದೈಹಿಕ ಸಮಸ್ಯೆಗಳೇನು?' ಈ ಬಗ್ಗೆ ರಚಿತಾ ರಾಮ್ ಮಾತಾಡಿದ್ದಾರೆ. ಇದಕ್ಕೆ 

2 Min read
Author : Shriram Bhat
| Updated : Jan 23 2026, 05:02 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ಸ್ಯಾಂಡಲ್‌ವುಡ್ ನಟಿ, 'ಲೇಡಿ ಬಾಸ್' ಖ್ಯಾತಿಯ ನಟಿ ರಚಿತಾ ರಾಮ್ (Rachita Ram) ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗವನ್ನು ಆಳಿದವರು. ಇಂಥ ನಟಿ ರಚಿತಾ ರಾಮ್ ಇತ್ತೀಚೆಗೆ 'ಕಲ್ಟ್' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರಿಂದ ಬಾಡಿ ಶೇಮಿಂಗ್ ಬಗ್ಗೆ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಡಿಂಪಲ್ ಕ್ವೀನ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಸ್ವತಃ ರಚಿತಾ ರಾಮ್‌ಗೂ ಬಾಡಿ ಶೇಮಿಂಗ್ ಅನುಭವಗಳು ಆಗಿವೆ. ಅದನ್ನು ಅವರು ತುಂಬಾ ಸಮರ್ಥವಾಗಿ ಎದುರಿಸಿದ್ದಾರೆ. ಹೀಗಾಗಿ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅವರಿಂದ ಸ್ಟ್ರಾಂಗ್ ಉತ್ತರ ಸಿಕ್ಕಿದೆ.

26
Image Credit : Instagram

ಬಾಡಿ ಶೇಮಿಂಗ್ ಕುರಿತು ಕೇಳಲಾದ ಪ್ರಶ್ನೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬೋಲ್ಡ್ ಎನ್ನಬಹುದಾದ ಉತ್ತರ ಕೊಟ್ಟಿದ್ದಾರೆ. 'ಹೆಣ್ಣು ಮಕ್ಕಳು ಯಾಕೆ ದಪ್ಪ ಆಗುತ್ತಾರೆ? ಅವರಿಗೆ ಎದುರಾಗುವ ದೈಹಿಕ ಸಮಸ್ಯೆಗಳೇನು?' ಈ ಬಗ್ಗೆ ರಚಿತಾ ರಾಮ್ ಮಾತಾಡಿದ್ದಾರೆ. 'ಯಾರೇ ಏನೇ ಅಂದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದಿದ್ದಾರೆ.

Related Articles

Related image1
Rachita Ram: ಇಂದು ಈ ನಟಿಯ ಫ್ಯಾನ್ಸ್‌ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!
Related image2
Karna Serial: ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ' ಅಂತಿದ್ದ ಕರ್ಣನ ಮತ್ತೊಂದು ಮುಖ ರಿವೀಲ್?
36
Image Credit : Instagram

ಬಾಡಿ ಶೆಮಿಂಗ್‌ಗೆ ಒಳಾಗಾಗಿ ಜೀವ ಕಳೆದುಕೊಂಡವರನ್ನು 'ಮುಟ್ಠಾಳರು' ಎಂದಿದ್ದಾರೆ. ಬಾಡಿ ಶೇಮಿಂಗ್ ಅನುಭವಿಸಿ ಕೆಲವರು ಡಿಪ್ರೆಶನ್‌ಗೆ ಹೋಗುತ್ತಾರೆ. ಅದರಲ್ಲೂ ಕೆಲವರು ಆತ್ಮ*ಹತ್ಯೆಯನ್ನೂ ಮಾಡಿಕೊಳ್ಳುತ್ತಾರೆ. ಅಂಥವರ ಬಗ್ಗೆ ನಟಿ ರಚಿತಾ ರಾಮ್ ಆಡಿರುವ ಮಾತು ಹೀಗಿದೆ:-

'ಅವರವರ ದೇಹ ಅವರಿಗಷ್ಟೇ ಗೊತ್ತು.. ಇಲ್ಲಿರೋ ಎಲ್ಲಾ ಹೆಣ್ಣು ಮಕ್ಕಳ ಬಾಡಿ ಟೈಪ್ ಬೇರೆಬೇರೆ ತರಹವೇ ಇರುತ್ತೆ. ಕೆಲವರು ಡಯೆಟ್ ಮಾಡಿದರೂ ದಪ್ಪ ಆಗುತ್ತಾರೆ. ಕೆಲವರಿಗೆ ಪಿಸಿಒಡಿ ಹಾಗೂ ಪಿಸಿಒಸಿ ಸಮಸ್ಯೆ ಇರುತ್ತೆ. ಕೆಲವರು ಮಾನಸಿಕ ಒತ್ತಡದಿಂದಲೂ ದಪ್ಪ ಆಗುತ್ತಾರೆ. ಅವರವರ ಬಾಡಿ ಟೈಪ್ ಅವರಿಗೆ ಮಾತ್ರ ಗೊತ್ತಿರುತ್ತೆ. ಹಲವರು ವರ್ಕ್ಔಟ್ ಮಾಡುತ್ತಾರೆ, ಡಯೆಟ್ ಮಾಡುತ್ತಾರೆ. ಆದರೆ ಎಲ್ಲರೂ ಒಂದೇ ರೀತಿ ಜೀರೋ ಸೈಜ್ ಆಗಲು ಸಾಧ್ಯವಿಲ್ಲ.

46
Image Credit : Asianet News

ಮುಟ್ಟಿನ ಬಗ್ಗೆ ರಚಿತಾ ಟಾಕ್

"ಇಷ್ಟು ಓಪನ್ ಆಗಿ ಸುದ್ದಿಗೋಷ್ಠಿಯಲ್ಲಿ ನಾವು ಮಾತಾಡುತ್ತಿದ್ದೇವೆ ಅಂದಾಗ- ಮುಟ್ಟಾಗುವುದಕ್ಕೂ ಐದು ದಿನ ಮುನ್ನ ಬಾಡಿ ಕೋಲ್ಡ್ ಆಗುತ್ತೆ. ಮುಟ್ಟು ಮುಗಿದ ಐದು ದಿನಗಳು ಆದ್ಮೇಲೆ ಸಹ ನಾವು, ಅಂದರೆ ಹೆಣ್ಣುಮಕ್ಕಳು ಕುಗ್ಗಿ ಹೋಗುತ್ತೇವೆ. ಎಲ್ಲಾ ಗಂಡು ಮಕ್ಕಳಿಗೂ ನಾವು ಹೋಗಿ 'ನಾನು ಹೀಗಿದ್ದೇನೆ' ಎಂದು ಹೇಳುತ್ತ ಮೆಚ್ಚಿಸುವುದಕ್ಕೆ ಪ್ರಯತ್ನಿಸಲು ಆಗುವುದಿಲ್ಲ. ನಮ್ಮ ಬಾಡಿ, ನಮ್ಮ ಇಷ್ಟ.. ಅಷ್ಟಕ್ಕೂ ಇದು ನಮ್ಮ ಲೈಫ್.. ಕಿವಿ ಕೊಟ್ಕೊಂಡು ಹೋಗುತ್ತಿದ್ದರೆ, ನಾವು ಎಲ್ಲಾ ಹೆಣ್ಣುಮಕ್ಕಳು ಅಳುತ್ತಾ ಕುಳಿತುಕೊಳ್ಳಬೇಕಾಗುತ್ತೆ." ಎಂದು ರಚಿತಾ ರಾಮ್ ಹೇಳಿದ್ದಾರೆ.

56
Image Credit : Instagram/Rachita Ram

ನಮ್ಮ ದೇಹವನ್ನು ಪೂಜಿಸಬೇಕು ಎಂದ ರಚಿತಾ ರಾಮ್

"ನಾವು ಹೇಗೇ ಇದ್ದರೂ ನಮ್ಮ ದೇಹವನ್ನು ನಾವು ಪೂಜಿಸಬೇಕು. ಇದು ನಮ್ಮ ದೇಹ. ನಾವು ಯಾಕೆ ಬೇರೆಯವರು ಏನೋ ಹೇಳ್ತಾರೆ ಎಂದು ಖಿನ್ನತೆಗೆ ಒಳಗಾಗಬೇಕು. ನನಗೆ ಏನು ಬೇಕು ಅಂತ ನನಗೆ ಗೊತ್ತಿದೆ. ಯಾರಿಗೆ ಏನು ಬೇಕು ಅಂತ ಅವರವರಿಗೆ ಗೊತ್ತಿರುತ್ತೆ.. ಕೆಲವರು ಐದು ಗಂಟೆ ನಿದ್ದೆ ಮಾಡಿದರೆ ಸಾಲೋದಿಲ್ಲ, ದಪ್ಪ ಆಗುತ್ತಾರೆ. ಅವರಿಗೆ ಎಂಟು ಗಂಟೆ ನಿದ್ದೆ ಮಾಡಲೇ ಬೇಕಾಗುತ್ತೆ. ನನಗೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು. ಇಲ್ಲಾ ಅಂದರೆ, ನಾನು ದಪ್ಪಗೆ ಕಾಣುತ್ತೇನೆ. ಅವರವರ ರೀತಿ-ನೀತಿ ಬೇರೆಯೇ ಇರುತ್ತೆ" ಎಂದು ರಚಿತಾ ರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

66
Image Credit : Social Media

ಆತ್ಮ*ಹತ್ಯೆ ಮಾಡಿಕೊಂಡವರು ಮುಟ್ಟಾಳರು

"ಬಾಡಿ ಶೇಮಿಂಗ್‌ನಿಂದ ಅವಮಾನಕ್ಕೆ ಒಳಗಾಗಿ ಆತ್ಮ*ಹತ್ಯೆ ಮಾಡಿಕೊಂಡವರು ಖಂಡಿತವಾಗಿಯೂ ಮುಟ್ಟಾಳರು. ನಾನು ಅಂಥವರ ಬಗ್ಗೆ ಮಾತಾಡೋದಕ್ಕೆ ಇಷ್ಟಪಡೋದಿಲ್ಲ. ಅದಕ್ಕೆ ಅವರು ಅರ್ಹರೂ ಅಲ್ಲ. ಒಂದು ಜೀವ, ಒಂದು ಜೀವನ. ಯಾಕೆ ಎಲ್ಲರೂ ನೆಗೆಟಿವ್ ಕಾಮೆಂಟ್‌ಗಳಿಗೆ ಕಿವಿ ಕೊಡುತ್ತಿದ್ದಾರೆ? ಸುತ್ತಲೂ ನೋಡಿದರೆ ಬೇಕಾದಷ್ಟು ಪೊಸೆಟಿವ್ ಅಂಶಗಳಿವೆ, ಕಣ್ಣು ತೆರೆದು ನೋಡಬೇಕಷ್ಟೇ.. ಎನೋ ಅವರಿವರ ಬಗ್ಗೆ ಮಾತಾಡುವವರು ಮಾತಾಡುತ್ತಲೇ ಇರುತ್ತಾರೆ.. ನಾವು ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು" ಎಂದು ರಚಿತಾ ರಾಮ್ ಹೇಳಿದ್ದಾರೆ.

ನಟಿ ರಚಿತಾ ರಾಮ್ ಹೇಳಿಕೆಗೆ ನೆಟ್ಟಿಗರು ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಲವರು ರಚಿತಾ ರಾಮ್ ಅವರ ನೇರ ನಡೆ-ನುಡಿಗೆ ಶಹಬ್ಬಾಸ್ ಎಂದಿದ್ದರೆ ಹಲವರು ರಚಿತಾ ರಾಮ್ ಅವರು ದೇಹ-ಮನಸ್ಸು ಹಾಗೂ ಬಾಡಿ ಶೇಮಿಂಗ್ ಪರಿಣಾಮಗಳ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ, ಚೆನ್ನಾಗಿ ಟಿಪ್ಸ್ ಹೇಳಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ರಚಿತಾ ರಾಮ್ ಪರ ಮೆಚ್ಚುಗೆಯ ಅಲೆ ಎದ್ದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ರಚಿತಾ ರಾಮ್
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ನಿರಪರಾಧಿ ಎಂದು ಸಾಬೀತು ಮಾಡಲು ಸಾಯಲೇಬೇಕಾ? ಮಾಸ್ಟರ್​ ಆನಂದ್ ನೋವಿನ ನುಡಿ​!
Recommended image2
ಟಾಕ್ಸಿಕ್ ನಟ ಯಶ್, ಸೀರಿಯಲ್ ನಿರ್ಮಾಪಕಿ ಶ್ರುತಿ ನಾಯ್ಡು ಕಟ್ಟೆ ಮೇಲೆ ಕೂತು ಕಂಡ ಆ ಕನಸು ನನಸಾಯಿತಾ?
Recommended image3
Rachita Ram: ಇಂದು ಈ ನಟಿಯ ಫ್ಯಾನ್ಸ್‌ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!
Related Stories
Recommended image1
Rachita Ram: ಇಂದು ಈ ನಟಿಯ ಫ್ಯಾನ್ಸ್‌ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!
Recommended image2
Karna Serial: ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ' ಅಂತಿದ್ದ ಕರ್ಣನ ಮತ್ತೊಂದು ಮುಖ ರಿವೀಲ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved