MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • 18 ವರ್ಷ ಕ್ರಿಶ್ಚಿಯನ್ ಧರ್ಮ ಫಾಲೋ ಮಾಡಿದ್ದ ಸಂಯುಕ್ತಾ ಭಗವದ್ಗೀತೆ ಓದಿ ಬದಲಾದ್ರು!

18 ವರ್ಷ ಕ್ರಿಶ್ಚಿಯನ್ ಧರ್ಮ ಫಾಲೋ ಮಾಡಿದ್ದ ಸಂಯುಕ್ತಾ ಭಗವದ್ಗೀತೆ ಓದಿ ಬದಲಾದ್ರು!

ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ತನ್ನ ಜೀವನದ 18 ವರ್ಷ ಕ್ರೈಸ್ತ ಧರ್ಮ ಪಾಲಿಸಿದರು. ಆದರೆ, ಇತ್ತೀಚೆಗೆ ಭಗವದ್ಗೀತೆ ಓದಿದ ನಂತರ ಬಹಳಷ್ಟು ಬದಲಾಗಿದ್ದಾರಂತೆ. ಈಗ ಶಿವನನ್ನು ಆರಾಧಿಸುವ ನಟಿ ಪವಾಡಗಳನ್ನೂ ನಂಬುತ್ತಾರೆ.

2 Min read
Author : Suvarna News
| Updated : Feb 29 2024, 11:51 AM IST
Share this Photo Gallery
  • FB
  • TW
  • Linkdin
  • Whatsapp
112

'ಕಿರಿಕ್ ಪಾರ್ಟಿ'ಯ ಸಂಯುಕ್ತಾ ಹೆಗ್ಡೆ ಹಲವು ವಿಷಯಗಳಿಗೆ ಕಿರಿಕ್ ಮಾಡಿಕೊಂಡು ಕಿರಿಕ್ ಹುಡುಗಿ ಎಂದೂ ಎನಿಸಿಕೊಂಡಿದ್ದರು. ಅವರು ತಮ್ಮ ಬದುಕನ್ನು ಭಗವದ್ಗೀತೆ ಬದಲಾಯಿಸಿದ ಬಗ್ಗೆ ಮಾತನಾಡಿದ್ದಾರೆ.

212

ಸಂಯುಕ್ತಾ ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ತಾಯಿ ಮತ್ತು ಹಿಂದೂ ಬ್ರಾಹ್ಮಣ ತಂದೆಗೆ ಜನಿಸಿದರು. ಆಕೆಯ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕೆಳಗಿನಮನೆ. ಸಂಯುಕ್ತಾ ತನ್ನ ಶಾಲಾ ಶಿಕ್ಷಣವನ್ನು ಸೇಂಟ್ ಪಾಲ್ಸ್ ಇಂಗ್ಲಿಷ್ ಶಾಲೆಯಲ್ಲಿ ಮಾಡಿದರು.

 

312

ಸಂಯುಕ್ತಾ ಹೇಳುವಂತೆ, 'ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಾಯಿ ಕ್ರಿಶ್ಚಿಯನ್ ಮತ್ತು ತಂದೆ ಬ್ರಾಹ್ಮಣ. ನಾವು ಒಂದೇ ಮನೆಯಲ್ಲಿ ಎರಡು ಧರ್ಮಗಳನ್ನು ಅನುಸರಿಸುತ್ತೇವೆ. ನಾನು ಮಿಶ್ರ ತಳಿ!'

412

ಮನೋವಿಜ್ಞಾನ ಮತ್ತು ಪತ್ರಿಕೋದ್ಯಮದಲ್ಲಿ ಬಿಎ ವ್ಯಾಸಂಗ ಮಾಡಿರುವ ಸಂಯುಕ್ತಾ 16ನೇ ವಯಸ್ಸಿನಲ್ಲೇ ಕಿರಿಕ್ ಪಾರ್ಟಿ ಚಿತ್ರದಲ್ಲಿ ಅಭಿನಯಿಸಿ ಹೆಸರು ಮಾಡಿದರು.

 

512

ನಂತರ ಕೆಲ ಚಿತ್ರಗಳಲ್ಲಿ ಅದೃಷ್ಟ ಪರೀಕ್ಷಿಸಿದರೂ ಅದು ಆಕೆಯ ಕೈ ಹಿಡಿಯಲಿಲ್ಲ. ಸಧ್ಯ 5 ವರ್ಷಗಳ ಬಳಿಕ ನಟಿ 'ಕ್ರೀಂ' ಚಿತ್ರದ ಮೂಲಕ ನಟನೆಗೆ ಮರಳಿದ್ದಾರೆ.
 

612

ವೃತ್ತಿಪರ ನೃತ್ಯಗಾರ್ತಿಯೂ ಆಗಿರುವ ಸಂಯುಕ್ತಾ ತಮ್ಮ ಧಾರ್ಮಿಕ ಮನೋಭಾವದ ಬಗ್ಗೆ ಇತ್ತೀಚೆಗೆ ರ್ಯಾಪಿಡ್ ರಶ್ಮಿ ಜೊತೆ ಮಾತನಾಡಿದ್ದಾರೆ.

 

712

ಅವರು ಜೀವನದ 18 ವರ್ಷಗಳ ಕಾಲ ಕ್ರೈಸ್ತ ಧರ್ಮ ಅನುಸರಿಸಿದರು. ನಂತರ ದೇವರಲ್ಲಿ ನಂಬಿಕೆಯನ್ನೇ ಕಳೆದುಕೊಂಡು ಏಥಿಸ್ಟ್ ಆಗಿದ್ದರಂತೆ. 

812

ಆದರೆ, ಮನೆಯ ಸಣ್ಣ ಸಣ್ಣ ರಗಳೆಗಳಿಗೂ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಿದ್ದ ಸಂಯುಕ್ತಾ ಕಡೆಗೊಂದು ದಿನ ಭಗವದ್ಗೀತೆಯನ್ನು ಓದಿದರಂತೆ.

912

ಈ ಓದು ಅವರ ನಂಬಿಕೆಯನ್ನು ಸಂಪೂರ್ಣ ಬದಲಾಯಿಸಿತಂತೆ. ಅಷ್ಟೇ ಅಲ್ಲ, ಅವರ ಮನಸ್ಸನ್ನು ಸಾಕಷ್ಟು ಹಿತವಾಗಿಟ್ಟುಕೊಳ್ಳಲು ಸಹಾಯ ಮಾಡಿತು.

 

1012

ಅವರು ಈಗ ತಾವು ಶಿವನ ಭಕ್ತೆ ಎಂದು ಹೇಳಿಕೊಳ್ಳುತ್ತಾರೆ. ಜೊತೆಗೆ, ಈ ವಿಷಯವಾಗಿ ತಮ್ಮ ಜೀವನದಲ್ಲಾದ 2 ಪವಾಡಗಳನ್ನು ಹಂಚಿಕೊಂಡಿದ್ದಾರೆ.

1112

ಒಮ್ಮೆ ಅವರು ಗೆಳೆಯರೊಂದಿಗೆ ಕೇದಾರನಾಥಕ್ಕೆ ಹೊರಟಿದ್ದರಂತೆ. ಕಡೆ ಕ್ಷಣದಲ್ಲಿ ಯಾತ್ರೆ ಕ್ಯಾನ್ಸಲ್ ಆಯಿತು. ಇದರಿಂದ ಅರು ಬೇಜಾರು ಮಾಡಿಕೊಂಡಿರುವಾಗಲೇ, ಹಲವು ಸಮಯದಿಂದ ಸಂಪರ್ಕದಲ್ಲಿರದ ಮತ್ತೊಬ್ಬ ಗೆಳೆಯರು ಕರೆ ಮಾಡಿ, ಕೇದಾರನಾಥಕ್ಕೆ ಹೊರಟಿದ್ದೇವೆ, ಬರ್ತೀಯಾ ಕೇಳಿದರಂತೆ. ಕಡೆಗೂ ಅವರು ಶಿವನ ದರ್ಶನ ಮಾಡಿ ಬಂದರು. 

 

1212

ಇನ್ನೊಂದು ಪವಾಡ ಎಂದರೆ, ಕೇದಾರನಾಥಕ್ಕೆ ಹೋದಾಗ ಒಳ ಹೋಗಲು ಫೋನ್ ಸ್ಕ್ಯಾನ್ ಮಾಡಬೇಕಿತ್ತು. ಆದರೆ, ಅದಾಗಲೇ ಅರ ಫೋನ್ ಡೆಡ್ ಆಗಿತ್ತು. ಏನಪ್ಪಾ ಮಾಡುವುದು ಎಂದುಕೊಂಡಾಗಲೇ ಫೋನ್ ಆನ್ ಆಗಿ ಸ್ಕ್ಯಾನ್ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಭಗವದ್ಗೀತೆ

Latest Videos
Recommended Stories
Recommended image1
ನಟ ಯಶ್‌ ಟಾಕ್ಸಿಕ್‌ಗೆ ದೊಡ್ಡ ತಲೆನೋವಾಗಿರೋ Dhurandhar 2 Movie ಹೇಗಿದೆ? ಫಸ್ಟ್‌ ರಿವ್ಯೂ ಬಂತು!
Recommended image2
ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು: ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!
Recommended image3
ಚಂದನವನವನ್ನು ಕಣ್ಣೀರಲ್ಲಿ ತೇಲಿಸಿ ಬಾಳ ಪಯಣಕ್ಕೆ ಶೀಘ್ರ ವಿದಾಯ ಹೇಳಿದ ನಟರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved