MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಕಾಂತಾರ ಚಿತ್ರಕ್ಕೆ ಪುನೀತ್​ ರಾಜ್​ ಆಯ್ಕೆಯಾಗಿದ್ರು! ಕುತೂಹಲದ ವಿಷ್ಯ ರಿವೀಲ್​ ಮಾಡಿದ Rishab Shetty

ಕಾಂತಾರ ಚಿತ್ರಕ್ಕೆ ಪುನೀತ್​ ರಾಜ್​ ಆಯ್ಕೆಯಾಗಿದ್ರು! ಕುತೂಹಲದ ವಿಷ್ಯ ರಿವೀಲ್​ ಮಾಡಿದ Rishab Shetty

'ಕಾಂತಾರ' ಚಿತ್ರದ ಶಿವನ ಪಾತ್ರಕ್ಕೆ ನಟ ಪುನೀತ್ ರಾಜ್‌ಕುಮಾರ್ ಮೊದಲ ಆಯ್ಕೆಯಾಗಿದ್ದರು ಎಂಬ ಕುತೂಹಲಕಾರಿ ವಿಷಯವನ್ನು ರಿಷಬ್ ಶೆಟ್ಟಿ ಬಹಿರಂಗಪಡಿಸಿದ್ದಾರೆ. ಕರಾವಳಿ ಭಾಷೆ ಕಲಿಯಲು ಬೇಕಾದ ಸಮಯದ ಅಭಾವ ಹಾಗೂ  ಸಿನಿಮಾ ಬದ್ಧತೆಗಳಿಂದಾಗಿ, ಪುನೀತ್ ಅವರೇ ಈ ಪಾತ್ರವನ್ನು ರಿಷಬ್ ನಿರ್ವಹಿಸುವಂತೆ ಸೂಚಿಸಿದ್ದರು

2 Min read
Author : Suchethana D
Published : Feb 28 2026, 09:43 PM IST
Share this Photo Gallery
  • FB
  • TW
  • Linkdin
  • Whatsapp
16
ಕಾಂತಾರ ಸದ್ದು
Image Credit : instagram

ಕಾಂತಾರ ಸದ್ದು

ಕಾಂತಾರ ಸಿನಿಮಾ ಯಾವ ಪರಿಯಲ್ಲಿ ಸದ್ದು ಮಾಡಿತು, ಹೇಗೆ ವಿಶ್ವಾದ್ಯಂತ ಹವಾ ಸೃಷ್ಟಿಸಿತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರ, ರಿಷಬ್​ ಶೆಟ್ಟಿ ಅವರ ಲೆವೆಲ್​ ಅನ್ನೇ ಬೇರೆಯ ಹಂತಕ್ಕೆ ಕೊಂಡೊಯ್ಯಿತು. ಯಶಸ್ಸು ಅವರ ಬೆನ್ನಹಿಂದೆಯೇ ಬರತೊಡಗಿತು. ಆದರೆ ಇದೀಗ ಕುತೂಹಲದ ವಿಷಯವೊಂದನ್ನು ಖುದ್ದು ರಿಷಬ್​ ಶೆಟ್ಟಿ (Rishab Shetty) ರಿವೀಲ್​ ಮಾಡಿದ್ದಾರೆ.

26
ರಿಷಬ್​ ಶೆಟ್ಟಿ ಬದಲು ಪುನೀತ್​
Image Credit : Social Media

ರಿಷಬ್​ ಶೆಟ್ಟಿ ಬದಲು ಪುನೀತ್​

ಅಂದು ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಾಂತಾರಾದಲ್ಲಿ ರಿಷಬ್​ ಶೆಟ್ಟಿ ಬದಲು ಪುನೀತ್​ ರಾಜ್​ಕುಮಾರ್​ ಇರಬೇಕಿತ್ತು. ಏಕೆಂದರೆ ಅವರನ್ನು ಕಾಂತಾರ ಚಿತ್ರದಲ್ಲಿನ ಶಿವನ ಪಾತ್ರಕ್ಕೆ ಅವರ ಹೆಸರೇ ಫೈನಲ್​ ಆಗಿತ್ತು. ಅವರ ಹೆಸರು ಹೇಳುತ್ತಿದ್ದಂತೆಯೇ ನಾನು ಕೂಡ ತುಂಬಾ ಉತ್ಸುಕನಾಗಿದ್ದೆ. ಪುನೀತ್ ಅವರು ಕಾಂತಾರದ ಪ್ರಮಾಣ ಮತ್ತು ದೃಷ್ಟಿಕೋನವನ್ನು ಹೆಚ್ಚಿಸಬಹುದು ಎಂದೇ ಅಂದುಕೊಂಡಿದ್ದೆ. ನನ್ನ ಹೊರತಾಗಿ, ಅಪ್ಪು ಸರ್ ಈ ಪಾತ್ರಕ್ಕೆ ಸುಂದರವಾಗಿ ಹೊಂದಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೆ. ವಿಶೇಷವಾಗಿ ಎಮ್ಮೆ ಓಟದ ದೃಶ್ಯಗಳಲ್ಲಿ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

Related Articles

Related image1
ಮನೆಯಲ್ಲಿ ಏನೇ ಕಳುವಾದ್ರೂ ನಾನೇ ಅಂತಿದ್ರು: ನನ್ನ ಕುದುರೆ ಅಂತ ಕರೀತಿದ್ರು- ಬಾಲ್ಯಕ್ಕೆ ಜಾರಿದ ಅಶ್ವಿನಿ ಪುನೀತ್​
Related image2
ಅಶ್ವಿನಿ ಪುನೀತ್​ರನ್ನೇ ಯಾರು ಎಂದು ಪ್ರಶ್ನಿಸಿದ ಸಿಎಂ ಸಿದ್ದು: ಅಪ್ಪು ಫ್ಯಾನ್ಸ್​ ಗರಂ- ವಿಡಿಯೋ ವೈರಲ್​
36
ಕರಾವಳಿ ಭಾಷೆ ಕರಗತ
Image Credit : Asianet News

ಕರಾವಳಿ ಭಾಷೆ ಕರಗತ

ಅಪ್ಪು ಸರ್ ಕರಾವಳಿ ಕರ್ನಾಟಕದ ಉಪಭಾಷೆಯನ್ನು ಕರಗತ ಮಾಡಿಕೊಳ್ಳಬೇಕೆಂದು ನಾನು ಬಯಸಿದ್ದೆ. ಇಷ್ಟು ಕಡಿಮೆ ಸಮಯದಲ್ಲಿ ಅವರು ಇಷ್ಟು ಸಮಯ ಮೀಸಲಿಡುತ್ತಾರೆಯೇ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಆದರೆ ಅವರು ಅದಕ್ಕೆ ಸಿದ್ಧರಾಗಿದ್ದರು. ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನು ಸಂಪರ್ಕಿಸಿದಾಗ ಅವರು ಕಾಂತಾರ ಬಗ್ಗೆ ಉತ್ಸಾಹ ತೋರಿಸಿದರು. ಅವರು ಆ ಉಪಭಾಷೆಗೆ ತಯಾರಿ ನಡೆಸಲು ಸಿದ್ಧರಿದ್ದರು. ಆದರೆ ಆಗಿದ್ದೇ ಬೇರೆ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

46
ತುಂಬಾ ಇಷ್ಟಪಟ್ಟಿದ್ದರು
Image Credit : instagram

ತುಂಬಾ ಇಷ್ಟಪಟ್ಟಿದ್ದರು

"ಅಪ್ಪು ಸರ್‌ ಕಥೆ ಕೇಳಿ ಬಹಳ ಇಷ್ಟಪಟ್ಟಿದ್ದರು. ಆದರೆ ಚಿತ್ರದಲ್ಲಿ ಮಂಗಳೂರು ಭಾಷೆ, ಕೋಲ, ಕಂಬಳ ಇದೆಲ್ಲವನ್ನು ಅಭ್ಯಾಸ ಮಾಡಬೇಕು. ಅದಕ್ಕೆ ಬಹಳ ಸಮಯ ಬೇಕಿತ್ತು. ಅದೇ ಸಮಯಕ್ಕೆ 'ದ್ವಿತ್ವ' ಸಿನಿಮಾ ಮಾಡುವ ಮಾತುಕತೆ ಆಗಿತ್ತು. ಹಾಗಾಗಿ ಕಾಯುವುದು ಬೇಡ ರಿಷಬ್ ಎಂದು ನನಗೆ ಹೇಳಿದರು. ಆಗ ಸ್ವತಃ ಅವರೇ, ಈ ಪಾತ್ರವನ್ನು ನೀವೇ ನಿಭಾಯಿಸಿ ಬಿಡಿ ಎಂದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

56
ಆದರೆ ಆಗಿದ್ದೇ ಬೇರೆ
Image Credit : instagram

ಆದರೆ ಆಗಿದ್ದೇ ಬೇರೆ

ನಾನು ಕಾಂತಾರದ ಕಥೆ ಅಪ್ಪು ಸರ್​ಗೆ ಹೇಳಿದ ಕೂಡಲೇ, ಅವರು ಯೋಜನೆಯ ಬಗ್ಗೆ ತುಂಬಾ ಉತ್ಸುಕರಾದರು. ಅವರು ವಿಭಿನ್ನ ಕಥೆಗಳನ್ನು ಅನ್ವೇಷಿಸಲು ಬಯಸಿದ್ದರು. ಆದರೆ, ಅವರ ಇತರ ಯೋಜನೆಗಳು ಅವರನ್ನು ಕಾಂತಾರರಿಂದ ದೂರವಿಡುತ್ತಲೇ ಇದ್ದವು. ಒಂದು ದಿನ, ಅವರು ನನಗೆ ಕರೆ ಮಾಡಿ ಅವರಿಲ್ಲದೆ ಚಿತ್ರದೊಂದಿಗೆ ಮುಂದುವರಿಯಲು ಹೇಳಿದರು. ನಾವು ಅವರಿಗಾಗಿ ಕಾಯುತ್ತಿದ್ದರೆ, ಆ ವರ್ಷ ಚಿತ್ರವನ್ನು ಮಾಡಲು ಸಾಧ್ಯವಾಗದಿರಬಹುದು ಎಂದು ಅವರು ನನಗೆ ಹೇಳಿದರು. ಆದ್ದರಿಂದ ಪುನೀತ್​ ರಾಜ್​ ಈ ಚಿತ್ರದ ಭಾಗವಾಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ ರಿಷಬ್​ ಶೆಟ್ಟಿ.

66
ಆ ದಿನಗಳ ನೆನೆದ ನಟ
Image Credit : facebook.com/rishab.shetty.9465/

ಆ ದಿನಗಳ ನೆನೆದ ನಟ

ಕಾಂತಾರ ಚಿತ್ರದ ಮೊದಲ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ ನಂತರ 'ಭಜರಂಗಿ 2' ಕಾರ್ಯಕ್ರಮದ ಸಂದರ್ಭದಲ್ಲಿ ನನ್ನನ್ನು ಅಪ್ಪು ಅವರು ಭೇಟಿಯಾದರು. ಅವರ ಯೋಜನೆಗಳ ಬಗ್ಗೆ ತಿಳಿಸಿದರು. ನನಗಾಗಿ ಕಾಯಬೇಡಿ, ಈ ವಿಷ್ಯದಲ್ಲಿ ರಾಜಿ ಮಾಡಿಕೊಳ್ಳಬೇಡಿ ಎಂದು ಕೇಳಿಕೊಂಡರು. ನಾನು ಅವರಿಗೆ ಚಿತ್ರೀಕರಣದ ಕೆಲವು ಸ್ಟಿಲ್ ಚಿತ್ರಗಳನ್ನು ತೋರಿಸಿದೆ. ಅವರು ನನಗಾಗಿ ತುಂಬಾ ಸಂತೋಷಪಟ್ಟರು. ಮತ್ತು ಅವರು ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆಂದು ಹೇಳಿದ್ದರು ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ರಿಷಬ್​ ಶೆಟ್ಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕಾಂತಾರ ಚಲನಚಿತ್ರ
ಮನರಂಜನಾ ಸುದ್ದಿ
ಸ್ಯಾಂಡಲ್ವುಡ್ ಫಿಲ್ಮ್
ರಿಷಬ್ ಶೆಟ್ಟಿ
ಪುನೀತ್ ರಾಜ್‌ಕುಮಾರ್

Latest Videos
Recommended Stories
Recommended image1
ತಂದೆಯ ಕಾರ್ಗಿಲ್ ಯುದ್ಧ ಹೋರಾಟದ ಘಟನೆ ಬಿಚ್ಚಿಟ್ಟಿ ನಟಿ ರಾಗಿಣಿ ದ್ವಿವೇದಿ, ಅಂದು ಏನಾಗಿತ್ತು?
Recommended image2
‘ಸಂಗೀತ ಬಾರ್ & ರೆಸ್ಟೋರೆಂಟ’ಲ್ಲಿ ಅನುಷಾ ರೈ ಜೊತೆ ಮೇಘನಾ ರಾಜ್… ಏನ್ ಕಥೆ ಇದು?
Recommended image3
ಅಳಿಲು ಮರಿಗೆ ಅಮ್ಮನಾದ ನಟ ಶಂಕರ್ ಅಶ್ವಥ್: ಮರುಗಿದ ಹಿರಿಯ ಕಲಾವಿದನ ಜೀವಪ್ರೇಮಕ್ಕೆ ಫ್ಯಾನ್ಸ್ ಫಿದಾ!
Related Stories
Recommended image1
ಮನೆಯಲ್ಲಿ ಏನೇ ಕಳುವಾದ್ರೂ ನಾನೇ ಅಂತಿದ್ರು: ನನ್ನ ಕುದುರೆ ಅಂತ ಕರೀತಿದ್ರು- ಬಾಲ್ಯಕ್ಕೆ ಜಾರಿದ ಅಶ್ವಿನಿ ಪುನೀತ್​
Recommended image2
ಅಶ್ವಿನಿ ಪುನೀತ್​ರನ್ನೇ ಯಾರು ಎಂದು ಪ್ರಶ್ನಿಸಿದ ಸಿಎಂ ಸಿದ್ದು: ಅಪ್ಪು ಫ್ಯಾನ್ಸ್​ ಗರಂ- ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved