ಸೂರಿ ಸಿನಿಮಾ ಬ್ಯಾಡ್ ಮ್ಯಾನರ್ಸ್ ಮುಹೂರ್ತ; ಅಭಿಗೆ ಹಾರೈಸಿ ದರ್ಶನ್,ಸುಮಲತಾ!
ದುನಿಯಾ ಸೂರಿ ನಿರ್ದೇಶಿಸುತ್ತಿರುವ, ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ಮುಹೂರ್ತ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ.
ಮುಹೂರ್ತದ ಬೆನ್ನಲ್ಲೇ ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಿರುವ ಸೆಟ್ನಲ್ಲಿ ಚಿತ್ರೀಕರಣ ಕೂಡ ಆರಂಭಗೊಂಡಿದೆ.
ಮುಹೂರ್ತ ಸಂದರ್ಭದಲ್ಲಿ ಚಿತ್ರತಂಡ ಮತ್ತು ಸುಮಲತಾ ಅಂಬರೀಶ್ ಹಾಜರಿದ್ದರು
ಮೈಸೂರಿನಿಂದ ಮಂಡ್ಯಕ್ಕೆ ಬಂದು ಚಿತ್ರೀಕರಣ ಆರಂಭಿಸುವ ಹೊತ್ತಿನಲ್ಲಿ ಅಭಿಷೇಕ್ಗೆ ಶುಭ ಹಾರೈಸಲು ಖುದ್ದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂದಿದ್ದಾರೆ.
ಅಭಿ ಮತ್ತು ಚಿತ್ರತಂಡಕ್ಕೆ ಶುಭ ಕೋರಿದ್ದಕ್ಕೆ ದರ್ಶನ್ಗೆ ಸುಮಲತಾ ಧನ್ಯವಾದ ತಿಳಿಸಿದ್ದಾರೆ. ಈ ಚಿತ್ರವನ್ನು ಕೆಎಂ ಸುಧೀರ್ ನಿರ್ಮಿಸಿದ್ದು, ಶೇಖರ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.
ನಿರ್ಮಾಪಕ ಕೆಪಿ ಶ್ರೀಕಾಂತ್ ಈ ಸಂದರ್ಭದಲ್ಲಿ ಹಾಜರಿದ್ದು ತಂಡಕ್ಕೆ ಬಲ ತುಂಬಿದರು.