ಚಿರು ಬಗ್ಗೆ ಮೇಘನಾ ಹೇಳಿದ ಮಾತು ಕೇಳಿ ಕಣ್ಣೀರಿಟ್ಟ ನಟ ಜಗ್ಗೇಶ್!
ಅಗಲಿದ ಪತಿಯನ್ನು ನೆನೆದು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪತ್ರ ಬರೆದ ನಟಿ ಮೇಘನಾ ರಾಜ್ ತನ್ನ ಮಾತುಗಳ ಮೂಲಕ ಅಭಿಮಾನಿಗಳ ಮನಮುಟ್ಟಿದ್ದಾರೆ. ಪತಿ ಬಗ್ಗೆ ಮೇಘನಾ ಬರೆದ ಸಾಲುಗಳನ್ನು ಓದಿ ಜಗ್ಗೇಶ್ ಕಣ್ಣೀರಿಟ್ಟಿದ್ದಾರೆ...
ಜೂನ್ 7ರಂದು ಇಹಲೋಕ ತ್ಯಜಿಸಿ ಅಪಾರ ಅಭಿಮಾನಿಗಳ ಮನದಲ್ಲಿ ಶಾಶ್ವತ ನೆನಪಾಗಿದ್ದಾರೆ.
ಚಿರು 11ನೇ ದಿನ ಕಾರ್ಯಕ್ರದ ನಂತರ ಮೌನ ಮುರಿದ ನಟಿ ಮೇಘನಾ ಅಕ್ಷರ ರೂಪದಲ್ಲಿ ತನ್ನ ಪ್ರೀತಿ ,ನೋವನ್ನು ಪತ್ರದ ಮೂಲಕ ಹಂಚಿಕೊಂಡಿದ್ದಾರೆ.
ಇಷ್ಟು ದಿನ ತಡೆದಿಟ್ಟದ್ದ ಮಾತುಗಳನ್ನು ಆಡಿರುವ ಮೇಘನಾ ಚಿರು ನೀನು ನನಗೆ ಗೆಳೆಯ, ಲವರ್, ಸಂಗಾತಿ ,ಮುದ್ದು ಕಂದ, ವಿಶ್ವಾಸಿ ಹಾಗೂ ಗಂಡ ಎನ್ನುವ ಮೂಲಕ ಭಾವುಕರಾಗಿದ್ದಾರೆ.
ಜನಿಸಲಿರುವ ಪುಟ್ಟ ಕಂದನಲ್ಲಿ ನಿನ್ನನು ನೋಡಲು ಕಾಯುತ್ತಿರುವೆ ಇದು ನಮ್ಮೆಲ್ಲರ ಆಶಯ ಮತ್ತೆ ಹುಟ್ಟಿ ಬಾ ಎಂದಿದ್ದಾರೆ.
ನನ್ನ ಉಸಿರು ಇರುವವರೆಗೂ ನೀನು ನನ್ನಲ್ಲಿ ಜೀವಂತ ಎಂದು ಮೇಘನಾ ಹೇಳಿದ್ದಾರೆ.
ಮೇಘನಾ ಭಾವುಕ ಪತ್ರವನ್ನು ಓದಿರುವ ನವರಸ ನಾಯಕ ಜಗ್ಗೇಶ್ ಕಣ್ಣೀರಿಟ್ಟಿದ್ದಾರೆ.
ರಾಯರ ದಯೆಯಿಂದ ಚಿರುವಿನ ಆತ್ಮ ನಿನ್ನ ಉದರದಲ್ಲಿ ಮರುಜನ್ಮ ಪಡೆಯಲಿ ಎಂದು ಜಗ್ಗೇಶ್ ಆಶಿಸಿದ್ದಾರೆ.
'I feel sorry ಕಂದ, You made me cry' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
'ನಾನು ಇಲ್ಲಿ ನಿನಗಾಗಿ ಕಾಯುತ್ತಾ ಇರುತ್ತೇನೆ, ನೀನು ನನಗಾಗಿ ಮತ್ತೊಂದು ಕಡೆ ಕಾಯುತ್ತೀಯಾ ಅಲ್ವಾ' ಎಂದು ಮೇಘನಾ ಪತ್ರದಲ್ಲಿರುವ ನೋವಿನ ನುಡಿಗಳು.
ಚಿರಂಜೀವಿ ಸರ್ಜಾರನ್ನು ಮಗುವಿನಲ್ಲಿ ಕಾಣಲು ಬಯಸುತ್ತಿದ್ದಾರೆ ಸರ್ಜಾ ಕುಟುಂಬದವರು. ಈ ಮಾತನ್ನು ಅರ್ಜುನ್ ಸರ್ಜಾ ಕೂಡ ವಿಡಿಯೋ ಮೂಲಕ ತಮ್ಮ ಆಶಯವನ್ನು ಹಂಚಿಕೊಂಡಿದ್ದರು.