'ರಾಬರ್ಟ್' ರಿಲೀಸ್ಗೂ ಮುನ್ನವೇ ಮತ್ತೊಂದು ಸ್ಕ್ರಿಪ್ಟ್ ರೆಡಿ; ಡಿ-ಬಾಸ್ ಫ್ಯಾನ್ಸ್ ಹ್ಯಾಪಿ!
'ರಾಬರ್ಟ್' ಸಿನಿಮಾ ರಿಲೀಸ್ ಆಗುವ ಮುನ್ನವೇ ಮತ್ತೊಂದು ಚಿತ್ರಕಥೆ ಶುರು ಮಾಡಿದ ತರುಣ್ ಟೀಂ. 'ವೀರ ಸಿಂಧೂರ ಲಕ್ಷ್ಮಣ'ನಾಗಿ ದಚ್ಚು ನೋಡಲು ರೆಡಿನಾ?
ಮತ್ತೊಂದು ಚಿತ್ರಕಥೆ ಮೂಲಕ ಒಂದಾದ ರಾಬರ್ಟ್ ಟೀಂ.
ವರಮಹಾಲಕ್ಷ್ಮಿ ಹಬ್ಬದಂದು ಹೊಸ ಸ್ಕ್ರಿಪ್ಟ್ಗೆ ಚಾಲನೆ.
ಟ್ಟಿಟರ್ನಲ್ಲಿ ಸಂತಸದ ವಿಚಾರ ಹಂಚಿಕೊಂಡ ತರುಣ್ ಸುಧೀರ್.
ನಿರ್ಮಾಪಕ ಉಮಾಪತಿ ಬಾಬು ಹಾಗೂ ನಿರ್ದೇಶಕ ತರುಣ್ ಸುಧೀರ್ ಪೂಜೆ ಸಲ್ಲಿಸಿದ್ದಾರೆ.
ಸ್ಕ್ರಿಪ್ಟ್ ಮೊದಲ ಪುಟ ಹಂಚಿಕೊಂಡಿದ್ದಾರೆ.
ಪ್ರೊಡಕ್ಷನ್-4 ಎಂದು ಕರೆಯಲಾಗಿರುವ ಕಥೆ ಹೆಸರು ವೀರ ಸಿಂಧೂರ ಲಕ್ಷ್ಮಣ ಎನ್ನಲಾಗಿದೆ.
ಬಾಲ್ಯದ ಸಿಂಧೂರ ಲಕ್ಷ್ಮಣ ಕಥೆಯನ್ನು ಕೇಳುತ್ತಿದ್ದ ದರ್ಶನ್, ಈ ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದಾರೆ.
ಈ ಕಥೆ ಸಿನಿಮಾ ಆಗಬೇಕೆಂದ ತರುಣ್ ತಂಡಕ್ಕೆ ಹೇಳಿದ್ದರಂತೆ ದರ್ಶನ್.
ಥಿಯೇಟರ್ಗಳು ತೆರೆಕಂಡ ನಂತರ ರಾಬರ್ಟ್ ರಿಲೀಸ್ ಆಗಲಿದೆ.
ಈಗಾಗಲೇ ರಾಬರ್ಟ್ ಚಿತ್ರದ ಹಾಡುಗಳು ಹಾಗೂ ಪೋಸ್ಟರ್ ಲುಕ್ ವೈರಲ್ ಆಗಿವೆ.