ಟಾಲಿವುಡ್ನಿಂದ ಬಂತು ಹೀಗೊಂದು ಸುದ್ದಿ;ಶಂಕರ್ ಸಿನಿಮಾದಲ್ಲಿ ಯಶ್
ಕಳೆದ ಎರಡು ದಿನಗಳಿಂದ ಮತ್ತೊಂದು ಸುದ್ದಿ ಕೊಂಚ ಜೋರಾಗಿಯೇ ಸದ್ದು ಮಾಡುತ್ತಿದೆ. ಕನ್ನಡ ಹೀರೋ, ತಮಿಳು ನಿರ್ದೇಶಕನ ಸುತ್ತ ಈ ಸುದ್ದಿ ಸದ್ದು ಮಾಡುತ್ದಿದ್ದು.
ಈ ಇಬ್ಬರ ಕಾಂಬಿನೇಷನ್ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬರುವುದು ಪಕ್ಕಾ ಎನ್ನುತ್ತಿದೆ ತಮಿಳು ಚಿತ್ರರಂಗದ ಸುದ್ದಿ ಮೂಲಗಳು.
ಅಂದಹಾಗೆ ಆ ಇಬ್ಬರು ಬೇರಾರಯರೂ ಅಲ್ಲ, ನಿರ್ದೇಶಕ ಶಂಕರ್ ಹಾಗೂ ನಟ ಯಶ್.
ಶಂಕರ್ ನಿರ್ದೇಶನದ ಚಿತ್ರದಲ್ಲಿ ನಟ ಯಶ್ ನಟಿಸಲಿದ್ದಾರೆ ಎಂಬುದು ಸದ್ಯದ ಸುದ್ದಿ.
ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರ ಮಾಡಲಿದ್ದು, ಈ ಇಬ್ಬರ ಕಾಂಬಿನೇಷನ್ನಲ್ಲಿ ಶಂಕರ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಕಾಲಿವುಡ್ ಮೂಲಗಳು ತಿಳಿಸಿವೆ.
ಕೆಜಿಎಫ್ 2’ ನಂತರ ಯಶ್ ಅವರ ಮುಂದಿನ ಸಿನಿಮಾ ಶಂಕರ್ ಅವರ ಜತೆಗೆನಾ ಎಂಬುದು ಸದ್ಯದ ಕುತೂಹಲ.
ಯಶ್ ಬಳಗದಿಂದ ಇನ್ನೂ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಕಾಯುವುದೇ ಸದ್ಯದ ದಾರಿ.