ನಟ ರವಿಕಿರಣ್ ಮಗ ಪ್ರೇಮ್ ಚಿತ್ರರಂಗ ಪ್ರವೇಶ!
ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರವಿಕಿರಣ್ ಇದೀಗ ತಮ್ಮ ಪುತ್ರ ಪ್ರೇಮ್ ಕಿರಣ್ ಅವರನ್ನು ಸ್ಯಾಂಡಲ್ವುಡ್ಗೆ ಪರಿಚಯಿಸುತ್ತಿದ್ದಾರೆ.
ಇಂಜಿನಿಯರಿಂಗ್ ಓದಿ ಮುಂಬಯಿಯಲ್ಲಿ ಅನುಪಮ್ ಖೇರ್ ಇನ್ಸ್ಟಿಟಟ್ಯೂಟ್ನಲ್ಲಿ ನಟನೆಯ ತರಬೇತಿ ಪಡೆದವರು ಪ್ರೇಮ್ ಕಿರಣ್.
ಇದೀಗ ಪರಿವರ್ತನೆ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಪ್ರೇಮ ಕತೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವೈದ್ಯಕೀಯ ಸೇವೆಯ ಮಹತ್ವವನ್ನು ಹೇಳುವ ಈ ಚಿತ್ರಕ್ಕೆ ಜೆ ಎಂ ಪ್ರಹ್ಲಾದ್ ಕತೆ ಬರೆದಿದ್ದಾರೆ.
ನಿರ್ಮಾಣ, ನಿರ್ದೇಶನದ ಜತೆಗೆ ಈ ಚಿತ್ರಕ್ಕೆ ರವಿಕಿರಣ್ ಅವರೇ ಸಂಭಾಷಣೆ ಬರೆದಿದ್ದಾರೆ.
ದಿವ್ಯಾ ರಾವ್ ಚಿತ್ರದ ನಾಯಕಿ.
ಅಭಿನಯ ಮುಂತಾದವರು ಚಿತ್ರದಲ್ಲಿ ನಟಿಸಲಿದ್ದು, ಛಾಯಾಗ್ರಹಣದ ಜೊತೆಗೆ ನಿರ್ಮಾಣ ಹಾಗೂ ನಿರ್ದೇಶನಕ್ಕೂ ಸಾಥ್ ನೀಡುತ್ತಿರುವುದು ಅಶೋಕ್ ನಾಯ್ಡು.
ನಾಗೇಶ್ವರ್ ರಾವ್ ಚಿತ್ರದ ಮತ್ತೊಬ್ಬ ನಿರ್ಮಾಪಕರು. ಮೊದಲ ಹಂತದಲ್ಲಿ ಬೆಂಗಳೂರು ಸುತ್ತಮುತ್ತ 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.